ಸಮಾಜವಾದಿಯ ನಿಸ್ಪೃಹ ಜೀವಿಗಳ ಕಥನ ‘ಗಾಳಿ ಬೆಳಕಿನ ಪಯಣಿಗರು’ ‘ಗಾಳಿ ಬೆಳಕಿನ ಪಯಣಿಗರು’ ಎಂಬ ಕೃತಿಯು ತನ್ನ ಒಳಿತು ಎಲ್ಲರ ಒಳಿತಿನಲ್ಲಿದೆ ಎಂಬ ಸಮಾಜವಾದಿ ತತ್ವವನ್ನು ಹೃದಯಪೂರ್ವಕವಾಗಿ ಒಪ್ಪಿಕೊಂಡು ತಮ್ಮ ಜೀವನವನ್ನೇ ಅದಕ್ಕಾಗಿ ಮುಡಿಪಿಟ್ಟ ನಿಸ್ಕೃಹ ಜೀವಿಗಳ ಪರಿಚಯದ್ದು. ತೀರ್ಥಹಳ್ಳಿಯ ಜೊತೆಗೆ ರಾಜ್ಯದಲ್ಲಿ ಸಮಾಜವಾದಿಗಳ ದೃಢವಾದ ಹೆಜ್ಜೆಗಳ ಚರಿತ್ರೆಯನ್ನು ಇಲ್ಲಿ ಮೂಡಿಸಿದವರು ಅದೇ ಊರಿನ ನಿವೃತ್ತ ಪ್ರಾಧ್ಯಾಪಕ ಜೆ. ಕೆ. ರಮೇಶ್. ಪತ್ರಿಕೆಯೊಂದಕ್ಕೆ ಬರೆದ ಸುಮಾರು ೨೦ ಸಮಾಜವಾದಿಗಳ ಕುರಿತಾದ ಲೇಖನಗಳ ಗುಚ್ಚವಿದು. ನಾವು ನಿಂತ ನೆಲದ ಇತಿಹಾಸವನ್ನು ತಿಳಿಯುವುದು ಬಹು ಮುಖ್ಯ. ಪ್ರಸ್ತುತ ಸಂದರ್ಭದಲ್ಲಿ ಮತ್ತೆ ಸಮಾಜವಾದದ ಮತ್ತು ಸಮಾಜವಾದಿಗಳನ್ನು ನೆನೆಯುವುದು ಅವಶ್ಯಕವಾಗಿದೆ. ಸಮಾಜವಾದದ ಮೂಲಕ ಕೆಳಸ್ಥರದ ಮತ್ತು ಜನಸಾಮಾನ್ಯರ ಧ್ವನಿಯಾಗಿ ಅವರ ಮೂಲಭೂತ ಹಕ್ಕುಗಳಿಗಾಗಿ ವಿಶ್ವಾಸವಾಗಿ ಹೋರಾಡಿದ ಹೋರಾಟಗಾರರು ನಿಜವಾಗಿಯೂ ಆ ಸಮುದಾಯಕ್ಕೆ ಗಾಳಿ ಬೆಳಕಿನ ಪಯಣಿಗರಾಗಿದ್ದಾರೆ ಎನ್ನುವುದನ್ನು ಈ ಕೃತಿ ಬಿಂಬಿಸುತ್ತದೆ. ಕೃತಿಯಲ್ಲಿ ಉನ್ನತ ಮೌಲ್ಯಗಳಿಗಾಗಿ ಹಂಬಲಿಸಿದ ಹಲವಾರು ಆದರ್ಶ ಜೀವಿಗಳನ್ನು ಸೂಕ್ಷ್ಮವಾಗಿ ಪರಿಚಯಿಸಲಾಗಿದೆ. ಇವರೆಲ್ಲ ಶ್ರಮಜೀವಿಗಳು. ಡೆದ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಮತ್ತು ಸ್ವಾತಂತ್ರ್ಯ ಚಳವಳಿಯ ನಂತರ ನಡೆದ ಸಾಮಾಜಿಕ ಕ್ರಾಂತಿಯಾದ ಕಾಗೋಡು ಚಳವಳಿಯ...