ಬೆರಗುಗೊಳಿಸುವ ಕವನಗಳ ‘ಇಂದ್ರ ಚಾಪ’ ತೀರ್ಥಹಳ್ಳಿಯ ಶಿಕ್ಷಕಿ ಸಾಹಿರಾಬಾನು ಅವರ ‘ಇಂದ್ರ ಚಾಪ’ ಕವನ ಸಂಕಲನದಲ್ಲಿ ಬೆರಗುಗೊಳಿಸುವ ಕವನಗಳಿವೆ. ಆರ್ತ ಮೊರೆಯೂ ಇದೆ. ಆಧ್ಯಾತ್ಮದ ಅಂಚಿನತ್ತ ಕೈ ಚಾಚುವ ಕವನಗಳು ಇವೆ. ನಮ್ಮಲ್ಲಿ ಆಸೆ ಮತ್ತು ನಿರೀಕ್ಷೆ ಹುಟ್ಟಿಸುವ ಕವಿತೆಗಳು ಇದರಲ್ಲಿವೆ. ಆತ್ಮ ಮತ್ತು ಬಹಿರ್ಲೋಕಗಳನ್ನು ಅತ್ಯಂತ ಸೂಕ್ಷ್ಮವಾಗಿ ಕವಯಿತ್ರಿ ಶೋಧಿಸುತ್ತಾ ಹೊಸ ಪಲುಕುಗಳನ್ನು ಹುಟ್ಟಿಸಿದ್ದಾರೆ. ಅವರ ಆದವಾದ ಕವಿತೆಗಳನ್ನು ಓದುವಾಗ ಎಂತವರು ಕೂಡ ತನ್ಮಯರಾಗುತ್ತಾರೆ. ಧ್ವನಿ ಪೂರ್ಣವಾದ ಚಿತ್ರವತ್ತಾದ ಕಲ್ಪನೆಗಳನ್ನು ಕಡೆದಿದ್ದಾರೆ. ಕಲ್ಪಕತೆ ಮತ್ತು ಭಾಷೆಯ ಆರ್ದ್ರ ಗುಣಗಳನ್ನು ಬಳಸಿಕೊಂಡು ಅಖಂಡವಾದ ಇಡೀ ಕವಿತೆಯನ್ನು ಹೇಗೆ ಕಟ್ಟುವಲ್ಲಿ ಸಾರ್ಥಕ ಪಡೆಯಬಹುದು ಎನ್ನುವುದಕ್ಕೆ ಇಲ್ಲಿನ ಕವಿತೆಗಳು ಸಾಕ್ಷಿಯಾಗಿವೆ. ಒಟ್ಟು ೬೬ ಕವಿತೆಗಳ ಸಂಕಲನ ಇದು. ಇಲ್ಲಿ ಅಮ್ಮ, ಮುಂಜಾವು, ದೇವರು, ಪ್ರಕೃತಿ, ಬೆಳಕು, ರಾತ್ರಿ, ಕನಸು, ರೋಮಾಂಚನ, ಹೂವು, ನಂಬಿಕೆ, ಬದುಕು, ಭ್ರಮೆ, ಏಕಾಂತ, ತವಕ... ಹೀಗೆ ವಿವಿಧ ವಿಷಯಗಳ ಕುರಿತಾದ ಕವಿತೆಗಳಿವೆ. ಕೆಲವು ಕವಿತೆಗಳ ಕುರಿತು ಗಮನಿಸುವುದಾರೆ- ಮೊದಲ ಕವನ ‘ನೆಲ ಜಲ ವಾಯು’ ಇದರಲ್ಲಿ, ಶತಮಾನಗಳಿಂದ ಪ್ರಕೃತಿಯ ಅಂಗಗಳಾಗಿ ಭೂಮಿ, ನೀರು, ವಾಯುಗಳಿವೆ. ಯುದ್ಧ, ಕ್ರಾಂತಿಯಂತಹ ಘಟನೆಗಳನ್ನು ಈ ಭೂಮಿ ಕಂಡಿದೆ. ಆದರೂ ನಾವ...