Posts

Showing posts from September, 2025
Image
 ದುಕಿಗೆ ಬೇಕಾದ ಬೆಳಕಿನ ಬೀಜ ‘ಅಪರೂಪದ ಪುರಾಣ ಕಥೆಗಳು’  ಮಹಾಭಾರತ, ರಾಮಾಯಣ, ಭಾಗವತ, ಕಥಾಸರಿತ್ಸಾಗರಗಳ ಕಥಾಕೋಶಗಳಿಂದ ಆಯ್ದ, ಬದುಕಿಗೆ ಅವಶ್ಯವಾದ  ಕಥೆಗಳನ್ನು ಹಿರಿಯರು ಹೇಳಿದ್ದನ್ನು ನೆನಪಿಟ್ಟುಕೊಂಡು  ಸಂಗ್ರಹಿಸಿದ ಕಥೆಗಳ ಸಂಕಲನವೇ ಅಪರೂಪದ ಪುರಾಣ ಕಥೆಗಳು. ಲೇಖಕಿ ಆಶಾ ರಘು ಈ ಕಥೆಗಳನ್ನು ಸರಳ, ಸುಂದರವಾಗಿ, ಜೊತೆಗೆ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ.  ವಿಶೇಷವಾಗಿ ನಮ್ಮ ಮಕ್ಕಳಿಗೆ ಇಂತಹ ಪುರಾಣದ ಕಥೆಗಳ ಅವಶ್ಯಕತೆ ಇಂದು ಅವಶ್ಯವಿದೆ. ಶಾಲಾ ಪಠ್ಯಗಳನ್ನು ಹೊರತುಪಡಿಸಿದರೆ ಮಳೆ, ಬೆಳೆ, ಕಾಡು, ಕೃಷಿ, ಪುರಾಣ -ಇತಿಹಾಸಗಳ ಬಗ್ಗೆ ನಮ್ಮ ಮಕ್ಕಳಿಗೆ ಮಾಹಿತಿ ಇಲ್ಲ. ಗ್ಯಾಜೆಟ್ ಲೋಕದಲ್ಲಿ ಕಳೆದುಹೋಗುತ್ತಿರುವ ಮಕ್ಕಳ ಮನಸ್ಸನ್ನು ತಂದೆ- ತಾಯಿ ಇಂತಹ ಪುರಾಣದ ಕಥೆಗಳ ಮೂಲಕ ಮರು ಕಟ್ಟುವ ಕೆಲಸವನ್ನು ಮಾಡಬೇಕಿದೆ.  ಇಲ್ಲಿನ ಕಥೆಗಳು ಕೇವಲ ಮಕ್ಕಳಿಗೆ ಮಾತ್ರವಲ, ಹಿರಿಯರು ಕೂಡ ಓದಿ ತಿಳಿಯಬೇಕಾದವೇ ಆಗಿವೆ. ಸತ್ಯಕಾಮನಂತಹ ಹುಡುಗನನ್ನು ಶಿಷ್ಯನಾಗಿ ಸ್ವೀಕರಿಸಿದ ಗುರುಗಳ ಗುರುತ್ವ, ದಧೀಚಿ-ಶಿಬಿಯರ ಲೋಕಕಲ್ಯಾಣ ಗುಣ, ಚೂಡಾಮಣಿಯನ್ನು ಕಳುಹಿಸಿಕೊಟ್ಟ ಸೀತೆಯ ಸಂದೇಶದ ಹಿಂದಿನ ಅರ್ಥ, ಅರ್ಧನಾರೀಶ್ವರ ಕಲ್ಪನೆಯೊಳಗಿನ ಸಾಂಕೇತಿಕತೆ..... ಹೀಗೆ ಸುಮಾರು ೪೮ ವಿವಿಧ ಕಥೆಗಳು ಇಲ್ಲಿ ನಿರೂಪಣೆಯಾಗಿದೆ. ಈ ಕಥೆಗಳು ಓದುವ ಮೂಲಕ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕಿದೆ. ಆದ್ದರಿಂದ ಮಕ್ಕಳು ಇಂತಹವುಗಳನ್ನು ಪ...
Image
 ಬೆರಗು ಮೂಡಿಸುವ ಕಥೆಗಳು  ‘ಓಡಿ ಹೋದಾ ಮುಟ್ಟಿ ಬಂದಾ’ ಈ ಕೃತಿ ಯಶವಂತ್ ಚಿತ್ತಾಲರ ಕಥಾ ಸಂಕಲನ.  ಇದರಲ್ಲಿ ದಟ್ಟವಾದ ಅನುಭವಗಳ ಜಗತ್ತಿದೆ.  ಅವೆಲ್ಲವೂ ನಮ್ಮ ಕಣ್ಣ ಮುಂದೆಯೇ ನಡೆದಂತೆ ಕಾಣುತ್ತವೆ.  ಸ್ಪಷ್ಟವಾದ ಆವರಣದಲ್ಲಿ ಸ್ಪಷ್ಟವಾದ ಪಾತ್ರಗಳಿವೆ. ಇವೆಲ್ಲ ಮುಖಾಮುಖಿಯಾಗಿ ಮಾತಿನಲ್ಲಿ ತೊಡಗಿಸಿಕೊಂಡಂತೆ ಕಾಣುತ್ತದೆ. ಇಲ್ಲಿನ ಕಥೆಗಳೆಲ್ಲಾ ಹೊಸ ಆಯಾಮವನ್ನು ಪಡೆದುಕೊಳ್ಳುತ್ತವೆ. ಒಟ್ಟಿನಲ್ಲಿ ಬೆರಗು ಮೂಡಿಸುವಂತಹ ಕಥೆಗಳು ಇದರಲ್ಲಿವೆ. ಒಟ್ಟೂ ೧೦ ಕಥೆಗಳ ಗುಚ್ಛ ಇದು.   ಹೊಸಾ ಗೆಂಡೆ ನಮ್ಮಾಟಾ  ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ನಾಗವೇಣಿಯ ಪ್ರೀತಿಯಲ್ಲಿ ಬಿದ್ದಿದ್ದ ಉಪನ್ಯಾಸಕ ಪ್ರಭಾಕರ ಇದ್ದಕ್ಕಿದ್ದಂತೆ ರಾಜೀನಾಮೆ ಕೊಟ್ಟು ಹೋಗುತ್ತಾನೆ ನಾಗವೇಣಿ ಅಣ್ಣ ನಾಗೇಶ್ ಮತ್ತು ಪ್ರಭಾಕರ್ ಕ್ಲಾಸ್‌ಮೇಟ್‌ಗಳು, ಜೊತೆಗೆ ಆತ್ಮೀಯರು. ಪ್ರಭಾಕರ್ ಬಿಟ್ಟು ಹೋದ ಸುದ್ದಿ ಹರಡಿ ಎಲ್ಲರಿಗೂ ನಾಗವೇಣಿಯ ಮೇಲೆ ಚರ್ಚೆ ನಡೆಯುತ್ತದೆ. ಮನೆಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ನಾಗವೇಣಿ, ನಾನು ಮದುವೆಯಾದರೆ ಆತನನ್ನೇ ಹೊರತು ಬೇರೆಯವನಲ್ಲ. ಆತ ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸುತ್ತಾಳೆ.  ರಾಜೀನಾಮೆ ಕೊಟ್ಟು ಹೋದ ಪ್ರಭಾಕರ ಮತ್ತೆ ಮರಳಿ ಕಾಲೇಜಿನಲ್ಲಿ ಕೆಲಸಕ್ಕೆ ಸೇರುತ್ತಾನೆ. ಪಾಠಮಾಡಲು ತರಗತಿಗೆ ಬಂದಾಗ ಇಬ್ಬರ ಕಣ್ಣುಗಳು ಒಂದಾಗುತ್ತವೆ. ಪ್ರೀತಿ ಬಲಿ...
This summary is not available. Please click here to view the post.
Image
 ಜ್ಞಾನದ ಕುತೂಹಲ ಹೆಚ್ಚಿಸುವ  ‘ನಾನೂ ವಿಜ್ಞಾನಿಯಾಗುವೆ’ ನಮ್ಮ ಜೀವನದ ಎಲ್ಲಾ ಸ್ತ್ತರಗಳಲ್ಲಿಯೂ ವಿಜ್ಞಾನ ಅನಿವಾರ್ಯ ಎಂಬಂತಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ವಿಜ್ಞಾನದ ಬಗ್ಗೆ ಬಾಲ್ಯದಿಂದಲೇ ವಿಜ್ಞಾನದ ಬಗ್ಗೆ  ತಿಳಿಯಪಡಿಸಬೇಕಾಗಿದೆ. ಲೇಖಕರಾದ, ನಿವೃತ್ತ ಪ್ರಾಂಶುಪಾಲರಾದ ಮತ್ತೂರು ಸುಬ್ಬಣ್ಣ ‘ನಾನೂ ವಿಜ್ಞಾನಿಯಾಗುವೆ’ ಈ ಕೃತಿಯ ಮೂಲಕ ನೇರವಾಗಿ ವಿಜ್ಞಾನದ ಪ್ರಮೇಯ ನಿಯಮಗಳನ್ನು ತಿಳಿಸದಿದ್ದರೂ ವಿಜ್ಞಾನದ ಸ್ವಾರಸಕರ ಅಂಶಗಳನ್ನು ಕಥೆಗಳಲ್ಲಿ ಮಕ್ಕಳು ಅನುಭವಿಸುವಂತೆ ಮಾಡಿದ್ದಾರೆ. ಎಲ್ಲ ಮಕ್ಕಳಲ್ಲೂ ಇರುವ ಏಕೆ, ಹೇಗೆ, ಏನು ಎಂಬ ಪ್ರಶ್ನೆಗಳಿಗೆ ನಾವು ಸರಿಯಾಗಿ ಸ್ಪಂದಿಸಿದರೆ ಎಷ್ಟೆಲ್ಲ ಪ್ರತಿಭೆಗಳು ಅರಳಬಹುದು. ಇಲ್ಲಿನ ಕಥೆಗಳೆಲ್ಲ ತುಂಬಾ ಕುತೂಹಲಕಾರಿ ಹಾಗೂ ಆಸಕ್ತಿಯುತವಾಗಿದ್ದು ಮಕ್ಕಳು ಪದೇಪದೇ ಓದುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಲಿವೆ. ಪುಟ್ಟದಾದ ೧೦ ಕಥೆಗಳು ಇದರಲ್ಲಿವೆ.  ‘ನಾನೂ ವಿಜ್ಞಾನಿಯಾಗುವೆ’ ವಿಜ್ಞಾನಿಯಾಗಬೇಕೆಂಬ ಹಠ ಹಿಡಿದ ಮಗನಿಗೆ ತಂದೆ ಮನೆಯಲ್ಲಿ ಸಣ್ಣಪುಣ್ಣ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸುತ್ತಾ ಆತ ವಿಜ್ಞಾನಿಯಾಗುವಲ್ಲಿ ಇನ್ನಷ್ಟು ಆಸಕ್ತಿ ತುಂಬಿದ ಕಥೆ ಇದು. ‘ಚಂದ್ರಣ್ಣನ  ಅಂಗಳದಲ್ಲಿ’  ಅಪ್ಪ ಹಿಂದಿನ ದಿನ ರಾತ್ರಿ ಮಕ್ಕಳಿಗೆ ಚಂದ್ರಯಾನದ ಬಗ್ಗೆ ಹೇಳಿದ ಕಥೆಯನ್ನು ರಾತ್ರಿ ಮಕ್ಕಳು ಕನಸಿನಲ್ಲಿ ಕಾಣುವುದು ಈ ಕಥೆಯ ಸಾರಾಂಶ. ಚಂದ್ರನ ಮೇಲ್ಮೈ ಬಗ್ಗೆ, ...
Image
 ಮೌಢ್ಯಕ್ಕೆ  ಹಿಡಿದ ಕನ್ನಡಿ ‘ಮನೀಷೆ’ ಮನೀಷೆ ಇದು ಕಥೆಗಾರ ವಸುಧೇಂದ್ರ ಅವರ ಕೃತಿ. ಮೌಢ್ಯ ಕುರಿತಾಗಿ ಇರುವ ಬರಹಗಳೇ ಇದರಲ್ಲಿವೆ. ಮಠ, ಜಾತಿಯ ಹೆಸರಲ್ಲಿ ನಡೆಯುತ್ತಿರುವ ಮಡಿ, ಮೈಲಿಗೆಗಳ ಬಗ್ಗೆ ಸುಂದರವಾಗಿ ಕಥೆಗಳನ್ನು ಇಲ್ಲಿ ಹೆಣೆದಿದ್ದಾರೆ. ಅತಿ ಸರಳ ಬಾಷೆಯಲ್ಲಿ ನಮ್ಮನ್ನು ಓದಿಸಿಕೊಂಡು ಹೋಗುವ ಕಥೆಗಳಿವು. ಮೌಢ್ಯದ ಪರಿಣಾಮದಿಂದ ಏನೇನು ಸಂಭವಿಸುತ್ತದೆ, ಇನ್ನೊಬ್ಬರ ಮನಸ್ಸಿಗೆ, ಜೀವನದ ಮೇಲೆ ಹೇಗೆ ಒರಿಣಾಮ ಬೀರುತ್ತದೆ ಎನ್ನುವುದನ್ನೂ ಕೆಲವು ಕಥೆಗಳಲ್ಲಿ ಚಿತ್ರಿಸಿದ್ದಾರೆ. ಇನ್ನೂ ಇಂತಹ ಸ್ಥಿತಿ ಇರುವುದರಿಂದ ಮನಸ್ಸನ್ನು ಕೃತಿ ಕಲಕುತ್ತದೆ. ಒಂದು ಅತ್ಯುತ್ತ್ತಮ ಕೃತಿಯಾಗಿ ಇದು ಹೊರಹೊಮ್ಮಿದೆ.  ‘ನಮ್ಮ ವಾಜೀನ್ನೂ ಆಟಕ್ಕೆ ಸೇರಿಸಿಕೊಳ್ರೋ’  ಈ ಕಥೆಯಲ್ಲಿ ಬಿಳಿ ತೊನ್ನು ಇರುವ ಬಾಲಕನೊಬ್ಬ ಸಂಪ್ರದಾಯವಾದಿಗಳಿಂದ ಅವಮಾನಕ್ಕೀಡಾಗುವುದು, ಮಠದಲ್ಲಿ ರಾಯರ ಆರಾಧನೆ ವೇಳೆ ಆತನಿಗೆ ಊಟಕ್ಕೆ ಬಡಿಸಲು ಬಿಡದೆ ಅವಮಾನಿಸುವುದು, ಹಸಿವಿನಿಂದ ಬಳಲುತ್ತಿದ್ದ ಆತನ ತಾಯಿ ಕಮಲವ್ವ ಕೂಡ ಮೌನದಿಂದ ಮಗನೊಟ್ಟಿಗೆ ಹಾಗೆಯೇ ಮರಳಿ ಊರಿಗೆ ಬರುವುದು ಕಥೆಯ ಈ ತಿರುಳಾಗಿದೆ. ಮನೀಷೆ’  ಈ ಕತೆಯಲ್ಲಿ ಒಬ್ಬ ವ್ಯಕ್ತಿಯನ್ನು ಮನಸ್ಸಿನ ವಿಭಿನ್ನ ಭಾವನೆಗಳು ಹೇಗೆ ಗೊಂದಲಕ್ಕೆ, ಸಿಟ್ಟಿಗೆ, ಉದ್ವೇಗಕ್ಕೆ ತಳ್ಳುತ್ತವೆ ಎನ್ನುವುದನ್ನು ಸುಬ್ರಹ್ಮಣ್ಯ ಎನ್ನುವವನ ಮೂಲಕ ಚಿತ್ರಿಸಿದ್ದಾರೆ. ಸುಬ್ರಹ್ಮಣ್ಯ ಕಾರ್ಖಾನೆಯ ಕೆಲಸಕ್ಕೆ ಹೊರಡುವಾ...
Image
    ಬದುಕಿನ ಸಂಗತಿಗಳನ್ನು ಕಾಡುವ ‘ಬದುಕು ಜಟಕಾ ಬಂಡಿ’ ‘ಬದುಕು ಜಟಕಾ ಬಂಡಿ’ ಇದು ಜೀವನ್ಮುಖಿ ವೈವಿಧ್ಯಮಯ ಕಥೆಗಳ ಸಂಕಲನ. ಅನಂತ ಕುಣಿಗಲ್ ಇದರ ಕರ್ತೃ. ಇಲ್ಲಿನ ಕಥೆಗಳು ಮತ್ತು ಪಾತ್ರಗಳು ಮಾತನಾಡುತ್ತವೆ. ಪಾತ್ರಗಳು ಕಣ್ಣಿಗೆ ಕಟ್ಟಿದಂತೆ ನಮ್ಮೆದುರು ನಿಲ್ಲುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆಗಳಿವು. ಈ ಸಂಕಲನ ಸಮಾಜದ, ಜನರ ಬದುಕಿನ ಬಗ್ಗೆ ಇರುವ ಲೇಖಕರ ಕಾಳಜಿಯನ್ನು ಎತ್ತಿಹಿಡಿಯುತ್ತದೆ. ಕೃತಿಯಲ್ಲಿ ಎರಡು ರೀತಿಯ ಕಥೆಗಳಿವೆ. ಒಂದು ಸಣ್ಕಥೆ ಮತ್ತೊಂದು ಪುಟ್ಕಥೆ. ಎರಡರಲ್ಲೂ ತಲಾ ೧೦ ಕಥೆಗಳಿವೆ. ಪುಟ್ಕಥೆಗಳು ಹೆಸರಿಗೆ ತಕ್ಕಂತೆ ಇದ್ದು, ಕೊನೆಯಲ್ಲಿ ಒಂದು ಸಂದೇಶವನ್ನು ಸಾರುತ್ತವೆ. ಸುಲಭದಲ್ಲಿ ಓದುಗರನ್ನು ಆಕರ್ಷಿಸುತ್ತಿವೆ. ಒಂದು ಹೋರಾಟದ ಕಥೆ ಕರ್ನಾಟಕದ ಬಯಲುಸೀಮೆ ಪ್ರಾಂತ್ಯದ ಬ್ಯಾಟರಾಯನಪುರ ಎಂಬ ಹಳ್ಳಿಗೆ ಬ್ರಿಟಿಷರಿಂದ ಬೋರಪ್ಪ ಎನ್ನುವನು ಮುಕ್ತಿ ದೊರೆಯಲು  ನಡೆಸಿದ ಹೋರಾಟದ ಕಥನ ಇದು. ಗಿರಿಜನ ಜಾತಿಗೆ ಸೇರಿದ ಬೋರಪ್ಪ ಊರ ಹೊರಗೆ ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡಿದ್ದರೂ, ಊರ ಹೋರಾಟಗಳಲ್ಲಿ, ಚರ್ಚೆಗಳಲ್ಲಿ, ಸಂಧಾನ ಕಾರ್ಯಕ್ರಮಗಳಲ್ಲಿ ಹಾಜರಿರುತ್ತಿದ್ದನು. ಬ್ರಿಟಿಷರ ವಿರುದ್ಧ ಕೆಂಡ ಕಾರುತ್ತಿದ್ದ ಈತ ಬ್ರಿಟಿಷ ಅಧಿಕಾರಿಗಳು ಊರಿಗೆ ಬಂದಾಗ ನಮಸ್ಕಾರ ಮಾಡಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಕೆನ್ನೆ ಮೇಲೆ ಹೊಡೆದಿದ್ದರು. ಆತ ಅವರ ಮುಖಕ್ಕೆ ಉಗಿದ್ದಿದ್ದನು. ಇದರಿಂದ ಸಿಟ್ಟಿಗೆದ್ದ ಬ್ರಿಟಿಷ್ ಅಧ...
Image
 ಅನುಭವದ ಅಮೃತ ಬಿಂದುಗಳು ‘ಜ್ಞಾನದೀಪ’  ಇದು  ೧೦೮ ಸೂಕ್ತಿಗಳ ಚಿಂತನ ಮಂಥನ. ಕನ್ನಡ ಪಂಡಿತರೂ, ಹಿಂದಿ ಪ್ರವೀಣರೂ, ಸಂಸ್ಕೃತ  ವಿದ್ವಾಂಸರೂ, ಪ್ರಾಧ್ಯಾಪಕರೂ ಆಗಿದ್ದ ದಿ.  ವಿ ಎನ್ ಭಟ್ ಬೆತ್ತಗೇರಿ ಇವರು ರಚಿಸಿದ  ಕೃತಿ ಇದು. ಹೆಸರೇ ಹೇಳುವಂತೆ ‘ಜ್ಞಾನದೀಪ’ ಇದು ಅಪೂರ್ವ ಸುಭಾಷಿತಗಳಿಂದ ಒಡಗೂಡಿ ಅವುಗಳ  ಕನ್ನಡ ಅರ್ಥವನ್ನು ಸಹಿತ ಕಟ್ಟಿಕೊಟ್ಟಿದೆ.  ಕೃತಿಯಲ್ಲಿರುವ ಜ್ಞಾನದೀಪಗಳೆಲ್ಲವೂ  ಜೀವನಾನುಭವದಿಂದ ಕೂಡಿದ ಮತ್ತು ಜೀವನಾನುಭವವನ್ನು ಕಟ್ಟಿಕೊಡುವಂತವು. ಹಿತವಾದ  ಸುಭಾಷಿತಗಳನ್ನು ಆಯ್ದು ಬದುಕಿನ ಅನುಭವಗಳನ್ನು ಮಿತವಾದ ಬರಹಗಳಿಂದ ಓದುಗರಿಗೆ  ನಿವೇದಿಸಿದ ಲೇಖಕರ ಕೆಲಸವನ್ನು ಇಲಿ ಮೆಚ್ಚಲೇಬೇಕು. ವಿದ್ವಾನ್ ವಿ. ಎನ್. ಭಟ್ಟರು  ಜ್ಞಾನದೀಪದ ಮೂಲಕ ಅಸಂಖ್ಯಾತ ಓದುಗರಲ್ಲಿದ್ದ ಕತ್ತಲೆಯನ್ನು ದೂರ ಮಾಡಿದ್ದಲ್ಲದೆ ಕತ್ತಲೆ  ಭಯವನ್ನೂ ಕಳೆದಿದ್ದಾರೆ. ಬೆಳಕಿನ ಭರವಸೆಯನ್ನು ನೀಡಿದ್ದಾರೆ. ಇಂದಿನ ನಮ್ಮ ಭಾರತೀಯ  ಸಂದರ್ಭದಲ್ಲಿ ಇವೆರಡೂ ಅಗತ್ಯವಾಗಿದೆ.  ‘ಜ್ಞಾನದೀಪ’ ಅತ್ಯಂತ ಜನಪ್ರಿಯ ಕೃತಿ.  ಇದಕ್ಕೆ ಕಾರಣವೇನೆಂದರೆ ವಿ ಎನ್ ಭಟ್ಟರಲ್ಲಿದ್ದ ವಿದ್ವತ್ತು ಮತ್ತು ಕಾವ್ಯದೃಷ್ಟಿ  ಇದರಲ್ಲಿ ಮಿಳಿತಗೊಂಂಡಿದೆ. ಸುಮಾರು ಐದಕ್ಕೂ ಹೆಚ್ಚು ಮರುಮುದ್ರಣವನ್ನು ಕಂಡಿರುವ ಈ  ಕೃತಿಯಲ್ಲಿ ಭಟ್ಟರ ವಿಸ್ತಾರವಾದ ಓದು, ಮಾನವೀಯ ಅನುಕಂಪ ...
Image
 ಮರೆತುಹೋಗುತ್ತಿರುವ ಸಂಸ್ಕೃತಿ ನೆನಪಿಸುವ  ‘ಕಜ್ಜಾಯ’  ‘ಕಜ್ಜಾಯ’ ಇದು ಸುನಂದಾ ಬೆಳಗಾಂವಕರ್ ಅವರ ಲಲಿತ ಪ್ರಬಂಧಗಳ ಸಂಕಲನ. ಇಲ್ಲಿ ೧೦ ಪ್ರಬಂಧಗಳಿವೆ. ಒಂದಕ್ಕಿಂತ ಒಂದು ಚೆನ್ನಾಗಿವೆ. ಧಾರವಾಡ ಕನ್ನಡದಲ್ಲಿರುವ ಇಲ್ಲಿನ ಭಾಷೆ ಬೇಸರ ತರಿಸುವುದಿಲ್ಲ. ಮೂರ್ನಾಲ್ಕು ದಶಕಗಳ ಹಿಂದಿನ ಧಾರವಾಡ ಮತ್ತು ಸುತ್ತಮುತ್ತಲಿನ ಜನಜೀವನವನ್ನು ಇಲ್ಲಿ ಬಿಂಬಿಸಲಾಗಿದೆ.   ಜನರ ಸುಸಂಸ್ಕೃತ ನಡವಳಿಕೆ, ಅವರ ವೃತ್ತಿಯಲ್ಲಿನ ನಿರಂತರತೆ, ಅಲ್ಲಿನ ಊಟ- ತಿಂಡಿಗಳ ವಿಶಿಷ್ಟತೆ, ಪ್ರತಿ ಪ್ರಬಂಧದಲ್ಲಿದೆ. ಲೇಖಕಿ ತನ್ನ ತಂದೆ- ತಾಯಿ- ಅಜ್ಜಿ- ನೆರೆಯವರಿಂದ ಬಂದ ಅನುಭವಗಳನ್ನೆಲ್ಲ ಇಲ್ಲಿ ಧಾರೆ ಎರೆದಿದ್ದಾರೆ. ಈ ಲಲಿತ ಪ್ರಬಂಧಗಳೆಲ್ಲ  ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದವು. ತಮ್ಮ ಬಾಲ್ಯದಿನಗಳ ಅನುಭವಗಳ ಬುತ್ತಿಯೇ ಇಲ್ಲಿ ಕಜ್ಜಾಯವಾಗಿದೆ. ಅತಿ ಸರಳ ಭಾಷೆ, ವಿಷಯ ಸಮೃದ್ಧಿಯೇ ಕಜ್ಜಾಯವನ್ನು ಓದುವಂತೆ ಮಾಡುತ್ತದೆ. ಒಂದು ಕಾಲದ ಸಂಸ್ಕೃತಿಯನ್ನು ಅತ್ಯಂತ ಸುಂದರವಾಗಿ, ಚಮತ್ಕಾರಿಕವಾಗಿ ಈ ಪ್ರಬಂಧ ಸಂಕಲನದಲ್ಲಿ ಲೇಖಕಿ ಕಟ್ಟಿಕೊಟ್ಟಿದ್ದಾರೆ. ಮಣ್ಣು  ಇದರಲ್ಲಿ ಲೇಖಕಿ ಮೂರು ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ, ಧಾರವಾಡದ ಮಣ್ಣು, ಶ್ರಾವಣದ ಮಳೆ ಮತ್ತು ಮೂರ್ತಿ ತಯಾರಿಸುವ ದಾನಪ್ಪ ಅವರ ಸಂಸಾರದ ಕಥೆ. ಇವು ಮೂರು ಮಣ್ಣಿಗೆ ಅಂಟಿಕೊಂಡ ಕಥೆಗಳು. ಶ್ರಾವಣದ ಮಳೆ ಧಾರವಾಡದಲ್ಲಿ ಧಾರಾಕಾರವಾಗಿ ಬೀಳುತ್ತಿದ್ದಾ...
Image
 ಸೃಜನಶೀಲ ಸಾಹಿತ್ಯ ಸೌಂದರ್ಯದ ಅನಾವರಣ   ‘ತಾವರೆಯ ತೇರು’ ‘ತಾವರೆಯ ತೇರು’ ಹೆಸರು ಹೇಳುವಂತೆ ಇದೊಂದು ಕಾವ್ಯ ಪ್ರತಿಮೆ, ವಿಮರ್ಶಾ ಸಂಕಲನ. ವಿಮರ್ಶಕ , ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜ್ ಕೃತಿಯ ಕೃರ್ತ. ಇದರಲ್ಲಿ ಒಟ್ಟು ೨೨ ವಿಮರ್ಶಾ ಬರಹಗಳಿವೆ.  ಇಲ್ಲಿರುವ ಎಲ್ಲಾ ಲೇಖನಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ವಿವಿಧ ಮುಖಗಳನ್ನು ವಿಮರ್ಶಿಸುತ್ತವೆ. ಇಲ್ಲಿ ಕವಿರಾಜಮಾರ್ಗ ಪೂರ್ವದಿಂದ ಹಿಡಿದು ಆಧುನಿಕ ಯುಗದವರೆಗಿನ ಕನ್ನಡ ಕಾವ್ಯಗಳ ಕುರಿತ ಸಹೃದಯ ವಿವೇಚನೆ ಇದೆ. ಅಲ್ಲಮಪ್ರಭುವಿನ ಬೆಡಗಿನ ವಚನ, ಕನಕ ಪುರಂದರರ ಕೀರ್ತನೆ, ನಯಸೇನ, ರಾಘವಾಂಕರ ಕಾವ್ಯ, ಕುವೆಂಪು, ಡಿವಿಜಿ, ಎಸ್ ವಿ ಪರಮೇಶ್ವರ ಭಟ್ಟರು, ಬನ್ನಂಜೆ ಗೋವಿಂದಾಚಾರ್ಯ, ವೀರಪ್ಪ ಮೊಯ್ಲಿ, ಅಂಬಾತನಯ ಮುದ್ರಾಡಿ  ಹೀಗೆ ಪ್ರಾಚೀನರಿಂದ ಅರ್ವಾಚೀನದವರೆಗಿನ ಕಾವ್ಯ ಯಾತ್ರೆಗಳಿವೆ. ಕನ್ನಡ ಮನಸ್ಸಿನ ಸೃಜನಶೀಲ ಸಾಹಿತ್ಯ ಸೌಂದರ್ಯವನ್ನು ಅನಾವರಣ ಮಾಡಿದ್ದಾರೆ.   ‘ತಾವರೆಯ ತೇರು’  ಇದು ಕುವೆಂಪು ಅವರ ಒಂದು ಕವನ ಸಂಕಲನ.  ನಿನ್ನ ಮೌನದ ಅರ್ಥವೇನಿಹುದೋ ಅದನರಿಯೆ ನಮ್ಮ ತಾವರೆ ತೇರು ತೇಲುತಿಹುದು   ಈ ಸಾಲುಗಳಲ್ಲಿರುವ ಅರ್ಥ ಗಮನಾರ್ಹಹವಾದು. ಮಂದಹಾಸ ಬೀರುತ್ತಿರುವ ಕಲಾ ಸುಂದರಿ ಮಾತನಾಡದೆ ಮೌನಿಯಾಗಿರುವುದೇಕೆ ಎಂಬುದರ ಅಂತರಾರ್ಥ ಕವಿ ತಿಳಿದಿಲ್ಲ.  ಈ ಮೌನದ ರಹಸ್ಯವನ್ನು ಶೋಧಿಸಲು ಕವಿ ಹೃದಯ ಮುಂದಾಗಿರುವುದನ್ನು ಇಲ್ಲಿ...
Image
 ಸ್ವಾತಂತ್ರ್ಯವೇ ಬಾಳಿನ ಬೆಳಕು ಪೊನ್ನಮ್ಮಾಳ್ ಎಂಬ  ಹೆಣ್ಣು ಹುಲಿ  ಭಾರತದ ಸ್ವಾತಂತ್ರ್ಯ ಚಳವಳಿಯ ಅಗ್ನಿಕುಂಡಕ್ಕೆ ಕರ್ನಾಟಕದಿಂದ ಧುಮುಕಿದ ಪ್ರಥಮ ಮಹಿಳೆ. ‘ದ ಹಿಂದು’ ವರದಿಗಾರರಾಗಿದ್ದ ತಂದೆ ಮಣಿ ಅವರಿಂದ ಸ್ವಾತಂತ್ರ್ಯ ದೀಕ್ಷೆ ಪಡೆದು ಅವರು ಸಾಗಿದ ಅಗ್ನಿಪಥದಲ್ಲಿ ದಿಟ್ಟವಾಗಿ ಮುನ್ನಡೆದವರು. ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಹೆಣ್ಣು ಹುಲಿಯಾಗಿ ಘರ್ಜಿಸಿದ ಹುಡುಗಿ. ಬ್ರಿಟಿಷ್ ಸರ್ಕಾರದ ಎದೆ ನಡುಗಿಸಿದ ಹಾಗೂ ಭೂಗತರಾಗಿ ಎರಡು ವರ್ಷ  ಜೈಲುವಾಸ ಅನುಭವಿಸಿದವರು. ಸ್ವಾತಂತ್ರ್ಯ ನಂತರವೂ ಚಳವಳಿಗಳನ್ನು ನಿಲ್ಲಿಸದೆ ಹೋರಾಟಗಳಲ್ಲಿ ತೊಡಗಿಕೊಂಡು ಜೀವನ ಪರ್ಯಂತ ವಿವಿಧ ಚಳವಳಿಗಳ ಮೂಲಕ ಬದುಕಿದವರು. ಜನಪರವಾಗಿ ಹೋರಾಡಿದವರು. ಇವರೇ ಟಿ ಎಸ್ ಪೊನ್ನಮ್ಮಾಳ್.  ಇಂತಹ ಸ್ವಾತಂತ್ರ್ಯ ಹೋರಾಟಗಾರ್ತಿಯ ಜೀವನಗಾಥೆ ಬೆಳಕಿಗೆ, ಪ್ರಚಾರಕ್ಕೆ ಬರದೇ ಇರದಿರುವುದು ನಿಜಕ್ಕೂ ಬೇಸರದ ಸಂಗತಿ. ಸ್ವಾತಂತ್ರ್ಯ ಹೋರಾಟಗಾರರು, ಸಮಾಜವಾದಿಗಳೇ ತುಂಬಿದ್ದ, ಚಳವಳಿಗಳ ತವರೂರಾದ ಮಲೆನಾಡಿನ ಶಿವಮೊಗ್ಗದಲ್ಲಿ ಈ ಚಳವಳಿಯನ್ನು ತನ್ನ ಒಡಲಿಗೆ ಹಾಕಿಕೊಂಡು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ ಧೀರ ಮಹಿಳೆ. ಶಾಂತವೇರಿ ಗೋಪಾಲಗೌಡರ ಒಡನಾಟದವರು. ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣ ಚಳವಳಿ, ಸಮಾಜವಾದಿ ಹೋರಾಟ, ಕಾಗೋಡು ಹೋರಾಟ, ಕುದುರೆಮುಖ ಗಣಿಗಾರಿಕೆ ವಿರುದ್ಧದ ಹೋರಾಟ, ತುಂಗಾ ಮೂಲ ಉಳಿಸಿ ಚಳವಳಿ...  ಒಂದೇ ಎರಡೇ?  ...
Image
 ಹೆಣ್ಣಿನ ಬದುಕಿನ ತವಕ-ತಲ್ಲಣದ  ‘ಎದೆಗೆ ಬೆಂಕಿ ಬಿದ್ದಾಗಿನ ಬೆಳಕು’  ಪದ್ಮಿನಿ ನಾಗರಾಜು ಅವರು ತಮ್ಮ  ಮಹಿಳಾಪರ ಚಿಂತನೆಗಳ ಕೃತಿ ‘ಎದೆಗೆ ಬೆಂಕಿ ಬಿದ್ದಾಗಿನ ಬೆಳಕು’ ಕೃತಿಯಲ್ಲಿ ಆಧುನಿಕ ಮಹಿಳೆ ಎದುರಿಸುತ್ತಿರುವ ಸವಾಲು, ಶೋಷಣೆ, ದೌರ್ಜನ್ಯದ ನಾನಾ ಮುಖಗಳನ್ನು ಉದಾಹರಣೆ ಮತ್ತು ಅಂಕೆ-ಸಂಖ್ಯೆಗಳ ಮೂಲಕ ತೆರೆದಿಟ್ಟಿದ್ದಾರೆ. ಅಸುರಕ್ಷಿತ ಜಗತ್ತು, ಹೆಣ್ಣಿಗೆ ಮರೀಚಿಕೆಯಾದ ನ್ಯಾಯ, ಅಮಾನವೀಯ ವರ್ತನೆಗಳು, ತಂತ್ರಜ್ಞಾನ ಮೂಲಕ ಶೋಷಣೆ ಮೊದಲಾದ  ಬರಹಗಳಲ್ಲಿ  ಧರ್ಮದ ಹೆಸರಿನಲ್ಲಿ ಶೋಷಣೆ , ಆಷಾಢಭೂತಿ ದೇವಮಾನರು   ದೌರ್ಜನ್ಯ ಹೇಗೆ ನಡೆಯುತ್ತಿದೆ ಎನ್ನುವುದನ್ನು ಚಿತ್ರಿಸಿದ್ದಾರೆ.  ‘ ಆಧುನಿಕ ಮಹಿಳೆ ಎದುರಿಸುತ್ತಿರುವ ಸವಾಲುಗಳು’ ಎಂಬ ಮೊದಲ ಅಧ್ಯಾಯದಲ್ಲೇ  ಹೊಸ ಹೊಸ ಸಮಸ್ಯೆಗಳ ಮೂಟೆ  ಹೊತ್ತು ನಡೆಯುವವಳು ಹೆಣ್ಣು ಮಾತ್ರವೇ ಎಂದು ಹೇಳಿದ್ದಾರೆ. ಜೊತೆಗೆ ಹುಟ್ಟಿನಿಂದ ವಿವಿಧ ಹಂತದಲ್ಲಿ ಅಂದರೆ,  ಬೆಳೆಯುವ, ಕಲಿಕೆಯ, ದುಡಿಮೆಯ, ಗೃಹಿಣಿಯಾಗಿ ಮತ್ತು ಸಾರ್ವಜನಿಕ ಸ್ಥಳದಲ್ಲಿ, ಮಾಧ್ಯಮಗಳಲ್ಲಿ  ತಾರತಮ್ಯ ಎದುರಿಸುತ್ತಿರುವುದನ್ನು, ಕೆಟ್ಟದಾಗಿ ಚಿತ್ರಿತಳಾಗುತ್ತಿರುವ ಕಟುಸತ್ಯವನ್ನು ತೆರೆದಿಟ್ಟಿದ್ದಾರೆ.       ಹೆಣ್ಣಿಗೆ ನ್ಯಾಯ ಮರೀಚಿಕೆ’ ಎನ್ನುವ ಅಧ್ಯಾಯ ಎಲ್ಲರ ಕಣ್ತೆರೆಸುವಂತಿದೆ. ಆ ಅಧ್ಯಾಯದ ಅಂತ್ಯದಲ್ಲಿ,  ‘ಹೆಣ್ಣ...
Image
 ಮಾನಸಿಕ ಒತ್ತಡಕ್ಕೆ  ಪರಿಹಾರ ನೀಡುವ ಕೃತಿ ‘ಮಾನಸಿಕ ಒತ್ತಡದಿಂದ ಪಾರಾಗುವುದು ಹೇಗೆ?’ ಪ್ರಸ್ತುತ ಕೃತಿ ದಿನವಿಡೀ ವಿಪರೀತ ಮಾನಸಿಕ ಒತ್ತಡಕ್ಕೆ ಸಿಲುಕಿರುವವರಿಗೆ ಒಂದು ಪರಿಹಾರವನ್ನು ನೀಡುವಂತದ್ದು. ಮಾನಸಿಕ ಒತ್ತಡ ಎಂದರೇನು? ಸಮಾಜ ಆಧುನಿಕವಾಗುತ್ತಿರುವಂತೆ ಮಾನಸಿಕ ಒತ್ತಡದ ಸುದ್ದಿ ಹೆಚ್ಚಾಗಿ ಕೇಳಿ ಬರುತ್ತಿರುವುದೇಕೆ? ೨೦ನೇ ಶತಮಾನದ ಹಲವಾರು ಪಿಡುಗುಗಳಲ್ಲಿ ಮಾನಸಿಕ ಒತ್ತಡ ಪ್ರಮುಖವಾದದ್ದು ಏಕೆ? ಇಂಥ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲವೇ? ಅವುಗಳನ್ನು ತಡೆಗಟ್ಟಿ ನಿರಾಳರಾಗಲು ಹೇಗೆ ಸಾಧ್ಯ ಎನ್ನುವುದನ್ನು ಈ ಕೃತಿ ವಿವರಿಸುತ್ತದೆ.  ಈ ಕೃತಿಯನ್ನು ಧಾರವಾಡ ಪ್ರೊ. ಆರ್ ವಿ ಕಟ್ಟಿಮನಿ ರಚಿಸಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವ ಪದ ಸ್ಟ್ರೆಸ್. ಕನ್ನಡದಲ್ಲಿ ಮಾನಸಿಕ ಒತ್ತಡ ಎಂದು ಇದನ್ನು ಅರ್ಥೈಸುತ್ತಾರೆ. ಈ ಸಮಸ್ಯೆ ಆಧುನಿಕ ಮಾನವನನ್ನು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚಾಗಿ ಕಾಡತೊಡಗಿದೆ. ಆಧುನಿಕ ಜೀವನ ಹಲವಾರು ಅನಿವಾರ್ಯ ಒತ್ತಡಗಳನ್ನು ಹೇರುತ್ತಿದೆ.  ಅದರ ಪ್ರಭಾವ ಹೆಚ್ಚು ಕಡಿಮೆ ಇಡೀ ಕುಟುಂಬದ ಮೇಲೆ ಎದುರಾಗುತ್ತ್ತಿದೆ. ಅಂತಹ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಮಾರ್ಗೋಪಾಯಗಳು ಸಾಕಷ್ಟು ರೂಪುಗೊಂಡಿವೆ.  ಮನಸ್ಸನ್ನು, ಶರೀರವನ್ನು, ನಿರ್ಮಲಗೊಳಿಸಲು ನೆರವಾಗುವಂತಹ ಹಲವಾರು ಉಪಯುಕ್ತ ವಿಧಾನಗ...
 ನಗರ ಜೀವನದ  ಕಷ್ಟಗಳನ್ನು ವಿವರಿಸುವ ತೂಫಾನ್ ಮೇಲ್  ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ಅವರ ಕೃತಿ ತೂಫಾನ್. ಈ ಕೃತಿಯಲ್ಲಿ ಒಟ್ಟೂ ೧೧ ಕಥೆಗಳಿವೆ. ಎಲ್ಲಾ ಕಥೆಗಳೂ ಅವರು ಮುಂಬೈನಿಂದ ಬೆಂಗಳೂರಿಗೆ ಬಂದ ನಂತರ ಬರೆದವಾದರೂ ಮುಂಬೈ ಕೇಂದ್ರಿತ ಕಥೆಗಳಾಗಿವೆ. ಎರಡು- ಮೂರು ಕಥೆಗಳಲ್ಲಿ ಮುಂಬೈನಿಂದ  ಗೋಕರ್ಣವನ್ನು ತೋರಿಸುತ್ತ್ತಾರೆ. ಈ ಕಥೆಗಳುಲ್ಲಿ ಅವರ ವಿಶಿಷ್ಟ ನೋಟವನ್ನು ಕಾಣಬಹುದು. ನಗರ ಜೀವನ, ಅಲ್ಲಿಗೆ ತೆರಳುವ ಹಳ್ಳಿ ಜನರು, ಅದಕ್ಕೆ ಹೊಂದಿಕೊಳ್ಳಲಾಗದ ಪರಿಸ್ಥಿತಿ, ಕೆಲವರು ಮತ್ತೆ ಊರಿಗೆ ಮರಳುವುದು, ಇದನ್ನೆಲ್ಲ ಅವರದೇ ನೋಟದಲ್ಲಿ ಸುಂದರವಾಗಿ ಇಲ್ಲಿ ಚಿತ್ರಿಸಿದ್ದಾರೆ.  ಅವರ ಕಥೆಗಳಲ್ಲಿನ ಚಲನೆ, ಲಯ,  ಹೊಮ್ಮುವ ಚೈತನ್ಯ ಓದುಗರನ್ನು ಸೆಳೆಯುತ್ತದೆ. ಆದ್ದರಿಂದ ಎಲ್ಲ ಕಥೆಗಳೂ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ನೋ ಪ್ರೆಸೆಂಟ್ಸ್ ಪ್ಲೀಸ್ ೨೨ರ ಹರಯದ ಪೋಪಟ್ ಬಾಲ್‌ಪೆನ್  ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅಸಾವರಿ ಲೋಖಂಡೆ ಜೊತೆಗಿನ ತನ್ನ ತನ್ನ ಮದುವೆಗೆ ಆಮಂತ್ರಣ ಪತ್ರಿಕೆಯನ್ನು ಆಯ್ಕೆ ಮಾಡಲು ಒಂದಷ್ಟು ನಮೂನೆಯನ್ನು ಆಯ್ದು ಅದನ್ನು ಮುದ್ರಣಕ್ಕೆ ಕೊಡಲು ಪುಸ್ತಕದ ಅಂಗಡಿಯ ತ್ರಿಪಾಠಿ ಹತ್ತಿರ ಆಮಂತ್ರಣ ಬರೆಸಿಕೊಳ್ಳುತ್ತಾರೆ. ಆಮಂತ್ರಣದ ಕೊನೆಯಲ್ಲಿ ಹೆಸರು ಹಾಕುವಾಗ ಅಸಾವರಿ ಲೋಖಂಡೆ ಎದುರು ತನ್ನ ಹೆಸರು ಪೋಪಟ್ ಎಂದು ಬರೆಯುವುದು ತೀರಾ ಜುಜುಬಿ ಆಗಿ ಆತನಿಗೆ ಕಾಣುತ್ತದೆ. ಅಂದರ...
Image
  ಕತೆ ಪುಸ್ತಕ ಲೇಖಕರು- ಜೋಗಿ   ಪ್ರಸ್ತುತ ಕೃತಿ ಜೋಗಿಯವರ ಸಣ್ಣ ಕಥೆಗಳ ಸಂಕಲನಾಗಿದೆ. ಇದರಲ್ಲಿ ಒಟ್ಟೂ ೧೧ ಕಥೆಗಳಿವೆ. ತೀರಾ ಆಪ್ತ ಶೈಲಿಯಲ್ಲಿ, ನಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನೇ ಇಲ್ಲಿ ಕಥೆಯಾಗಿಸಿದ್ದಾರೆ. ಆದ್ದರಿಂದ ಇವು ನಮ್ಮನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ, ಜೊತೆಗೆ ಕಥಾಲೋಕದಲ್ಲಿ ಮುಳುಗಿಸುವ ಶಕ್ತಿಯನ್ನು ಹೊಂದಿವೆ. ಸಣ್ಣಕಥೆಗಳ ಜಗತ್ತು ಅಸಂಖ್ಯಾತ ಸಾಧ್ಯತೆಗಳ ಪ್ರಯೋಗಶಾಲೆಯಾಗಿದೆ ಎನ್ನುವ ಮೂಲಕ ತಮಗೆ ತೋಚಿದ ಪ್ರಯೋಗಗಳನ್ನೆಲ್ಲಾ ಇಲ್ಲಿ ಲೇಖಕರು ಮಾಡಿದ್ದಾರೆ. ಈ ಕಥೆಗಳು ತಮಗೆ ಸಂತೋಷ ಕೊಟ್ಟಂತಹವು ಎಂದು ಸ್ವತಃ ಲೇಖಕರೇ ಹೇಳಿಕೊಂಡಿದ್ದಾರೆ.     ಸದಾಶಿವ ಲವ್ಸ್ ನೂತನ್  ಅಪಾರ್ಟ್ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದ ೭೫ರ ಹರಯದ ಸದಾಶಿವನಿಗೆ ಹುಟ್ಟಿದ ದಿನದ ನಿಮಿತ್ತ ಅಪರಿಚಿತರಾರೋ ಬೆಕ್ಕಿನ ಮರಿಯುಳ್ಳ ಪಾರ್ಸೆಲ್  ಕಳಿಸಿದ್ದನ್ನು ಪ್ರೀತಿಯಿಂದ ಸಾಕುತ್ತಿದ್ದಾಗ ವಾಸಸ್ಥಳದ  ಮಾಲೀಕ ಅದನ್ನು ಹೊರಹಾಕುವಂತೆ ಸೂಚಿಸುತ್ತಾನೆ. ಈ ಬೆಕ್ಕಿಗೆ ತನ್ನ ಪ್ರೀತಿಯ ನಟಿ ನೂತನ ಹೆಸರನ್ನು ಸದಾಶಿವ ಇಟ್ಟಿರುತ್ತಾನೆ. ಬೆಕ್ಕಿನ ಮರಿಯನ್ನು ಅಪಾರ್ಟ್ಮೆಂಟ್‌ನಿಂದ ಹಾಕಲು ಸದಾಶಿವ ಸಿದ್ಧ್ದನಿರುವುದಿಲ್ಲ. ಅಟ್ಲಾಂಟಾದಲ್ಲಿರುವ ಸದಾಶಿವನ ಮಗ ವಿನಯ ಚಂದ್ರನಿಗೆ ಮಾಲೀಕ ಶ್ರೀನಿವಾಸಯ್ಯ ಕರೆ ಮಾಡಿ ಒಂದೋ ಬೆಕ್ಕಿನಮರಿಯನ್ನು ಹೊರಹಾಕಬೇಕು. ಇಲ್ಲವೇ ಸದಾಶಿವ ಮನೆ ಖಾಲಿ ಮಾಡಬೇಕೆಂದು ತ...
Image
 ರಂಗ-ಜೀವನರಂಗದ ಬೆಸುಗೆ ‘ರಂಗ ರಂಗೋಲಿ ’ ‘ರಂಗ ರಂಗೋಲಿ’ ಇದು ರಂಗಕಲಾವಿದೆ ಪೂರ್ಣಿಮಾ ಸುರೇಶ್ ಅವರ ಅಂಕಣ ಬರಹದ ಕೃತಿ. ಇದರಲ್ಲಿ ರಂಗ ಮತ್ತು ಜೀವನರಂಗದ ಬೆಸುಗೆಯಿದೆ.  ರಂಗಭೂಮಿಯ ತಮ್ಮ ಅನುಭವಗಳನ್ನು ಇಲ್ಲಿ ತಮ್ಮದೇ ಆದ ವಿಶಿಷ್ಟ ಭೂಮಿಕೆಯಲ್ಲಿ ಸೆರೆಹಿಡಿದಿದ್ದಾರೆ. ರಂಗಮಂಟಪದ ಭಯದ ಕತ್ತಲು ಆವರಿಸಿಕೊಂಡಿದ್ದ  ಬಾಲಕಿಯೊಬ್ಬಳು  ಮುಂದೆ ರಂಗುರಂಗಾದ ರಂಗದ ಬೆನ್ನು ಹತ್ತಿದ ಬರಹಗಳು ಇದರಲ್ಲಿವೆ. ರಂಗದ  ಕಥೆಯನ್ನು ಹುಡುಕಿ ತೆಗೆದು  ಅದಕ್ಕೊಂದು ಘನೀಕೃತ ಸ್ವರೂಪವನ್ನು ಕೊಟ್ಟು ಅಭೂತಪೂರ್ವವಾಗಿ ತೆರೆಯ ಮೇಲೆ  ತಂದ ಬಗ್ಗೆ ವಿವರವಿದೆ.  ಇಲ್ಲಿನ ಪ್ರತಿ ಬರಹದಲ್ಲೂ ಒಂದು ಜೀವಂತಿಕೆ ಇದೆ, ಬದುಕಿನ ಪಾಠವಿದೆ, ಕಲಿತದ್ದನ್ನು ದಾಖಲಿಸುವ ಸಾಕ್ಷಿಪ್ರಜ್ಞೆ ಇದೆ, ಅನುಭವದ ಸಾರವನ್ನು ಹಿಡಿದಿರುವ ಗಟ್ಟಿತನವಿದೆ. ಆದ್ದರಿಂದಲೇ ಈ ಕೃತಿ ನಮಗೆ ಅಪ್ಯಾಯಮಾನವಾ ಗುತತದೆ. ಕೃತಿಯಲ್ಲಿ ಒಟ್ಟೂ ೨೯ ಅಂಕಣ ಬರಹಗಳಿವೆ. ಮೊದಲ ಬರಹ ‘ನಾಂದಿ ಪದ್ಯ’ದಲ್ಲಿ  ತನ್ನ ನಾಟಕ ಬದುಕಿನ ಮೊದಲ ಪುಟಗಳನ್ನು ಲೇಖಕಿ ತೆರೆದಿಟ್ಟಿದ್ದಾರೆ. ಊರಲ್ಲಿ ಮತ್ತು ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಹರಕೆ ಬಯಲಾಟಕ್ಕೆ ಅಜ್ಜಿ ಜೊತೆ ಹೋಗುತ್ತಿದ್ದುದು, ಸಂಜೆ ಶಾಲೆಯಿಂದ ಮನೆಗೆ ಬಂದ ನಂತರ ಹೊಸ ಪಾತ್ರಗಳಲ್ಲಿ ಅರಳುವುದು, ಕಲ್ಪನೆಯ ಪ್ರಪಂಚ ತೆರೆದು ತೋರಿಸಿದ ಅಜ್ಜಿ ಕುಣಿತಕ್ಕೆ ನಗುವುದು, ಪಾಠ ಪುಸ್ತಕ ಎಲ್ಲಿ ಉಂಟು ಎಂದು ಕೇಳ...