ಕಿವಿ ನಿಮಿರಿ ಸು ವ ಇಲಿಗೆ ಅಂಜಿದ ಹುಲಿ ‘ಇಲಿಗೆ ಅಂಜಿದ ಹುಲಿ’ ಈ ಕೃತಿ ಮಕ್ಕಳ ಕಥಾ ಸಾಹಿತ್ಯಕ್ಕೆ ಸಂಬಂಧಿಸಿದ್ದು. ‘ರಸಿಕ ಪುತ್ತಿಗೆ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಪುತ್ತೂರಿನ ಪಿ. ಸುಬ್ರಹ್ಮಣ್ಯ ಆಚಾರ್ ಬರೆದ ಕೃತಿ ಇದು. ಬಾಲ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿರುವ ರಸಿಕ ಪುತ್ತಿಗೆ ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು. ಮಕ್ಕಳಿಗಾಗಿ ಕಿರು ಕಾದಂಬರಿ, ಅನೇಕ ಕಥೆ ಹಾಗೂ ನೂರಾರು ಶಿಶು ಗೀತೆಗನ್ನು ಅವರು ಬರೆದಿದ್ದಾರೆ. ಪ್ರಸ್ತುತ ‘ಇಲಿಗೆ ಅಂಜಿದ ಹುಲಿ’ ಎಂಬ ಬಾಲಕರ ಕಥಾನಕದಲ್ಲಿ ೧೭ ಕಥೆಗಳಿವೆ. ಇವೆಲ್ಲ ನೀತಿ ಬೋಧಕವೂ, ಮನೋರಂಜಕವೂ ಆದ ಸಾಹಿತ್ಯ ಭಾಗಗಳಾಗಿವೆ. ಶೈಶವ ವಿದ್ಯಾಭ್ಯಾಸಕ್ಕೆ ಸುಗಮದಾರಿ ಎಂದು ಹೇಳಲಾಗುವ ಈ ಬಾಲಕತೆಗಳು ಬಹಳ ಉಪಯುಕ್ತವಾದವು. ಕಥೆಗಳಲ್ಲಿ ಅಲ್ಲಲ್ಲಿ ವಿನೋದ, ಹಾಸ್ಯ, ಜಗಳ, ಕಾರ್ಯ, ಚಲನೆ, ಇತ್ಯಾದಿ ಇವೆ. ಈ ಕೃತಿಯನ್ನು ಓದಿದಾಗ ಅಲ್ಲಿನ ಪಾತ್ರಗಳು ಜೀವಕಳೆ ತುಂಬಿಕೊಂಡಿರುವುದು ಕಣ್ಣ ಮುಂದೆ ಕುಣಿಯುವುದು, ಒಂದಿಷ್ಟು ಅದ್ಭುತ ರಸವಿರುವ ಕಲ್ಪನಾಶಕ್ತಿ ಹೆಚ್ಚಿಸುವ ಕತೆಗಳಿರುವುದು ಕಂಡುಬರುತ್ತದೆ. ಪುನರುಕ್ತಿಗಳು ಮಕ್ಕಳ ಕಥಾಲೋಕದ ಒಂದು ವೈಶಿಷ್ಟ್ಯವಾಗಿದೆ. ಮಕ್ಕಳಿಗೆ ಇಷ್ಟವಾಗುತ್ತದೆ ಎಂಬ ಕಾರಣಕ್ಕೆ ಮನೆ ಮಾತಿನ ಶಬ್ದ ಇಲ್ಲಿ ಪ್ರಯೋಗಿಸಲ್ಪಟ್ಟಿದೆ . ವಾಕ್ಯಗಳು ಅತಿ ಚಿಕ್ಕವಾಗಿವೆ. ಪಕ್ಷಿಗಳು, ಪ್ರಾಣಿಗಳು, ಕೀಟಗಳು ಎಂದರೆ ಮಕ್ಕಳಿಗೆ ಹೆಚ್...