Posts

Showing posts from August, 2025
Image
 ಕಾವ್ಯದ  ಬೆರಗನ್ನು ತೋರಿಸುವ ‘ಸಂತೆಯೊಳಗಿನ ಏಕಾಂತ’ ‘ಸಂತೆಯೊಳಗಿನ ಏಕಾಂತ’ ಇದೊಂದು ಕವನ ಸಂಕಲನ, ಕಲಾವಿದೆ ಹಾಗೂ ಸಂಘಟಕಿ, ಕವಯತ್ರಿ ಪೂರ್ಣಿಮಾ ಸುರೇಶ್ ಇದರ ಲೇಖಕರು. ಈ ಕೃತಿಯಲ್ಲಿನ ಕವಿತೆಗಳಲ್ಲಿ ಅರ್ಥಕ್ಕಿಂತ ಅನುಭೂತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಪುರುಷ ಸಮಾಜದ ವಿರುದ್ಧ ಪ್ರಬಲವಾಗಿ ದ್ವನಿ ಎತ್ತಿರುವುದು ಕಂಡುಬರುತ್ತದೆ. ಹೆಣ್ಣಿಗೆ ಪುರುಷ ಬೇಕು ನಿಜ, ಆದರೆ  ಅವನು ಪತಿಯಾಗಿ ಅಧಿಕಾರ ಕೇಂದ್ರದಲ್ಲಿರುವುದಕ್ಕಿಂತ ಸಖನಾಗಿ ಸಮಾನ ನೆಲೆಯಲ್ಲಿ ಪ್ರೀತಿಸಬೇಕೆಂಬ ಹಂಬಲವಿದ್ದಂತಿದೆ. ವ್ಯವಸ್ಥೆಯ ನೋವನ್ನು ಕೆಲವು ಕವನಗಳಲ್ಲಿ ಚಿತ್ರಿಸಿದ್ದಾರೆ. ಸಂಭಾಷಣೆಯಂತಹ, ಅಂತರ್‌ಸಂವಾದದಂತಹ  ಸಾಕಷ್ಟು ಕವನಗಳು ಇಲ್ಲಿ ಪ್ರವಹಿಸಿವೆ. ಕವಿತೆಗಳ ರಚನಾ ವಿನ್ಯಾಸದಲ್ಲಿ ದೃಶ್ಯವತ್ತಾದ ಚಿತ್ರ ಹಾಗೂ ಅರ್ಥವತ್ತಾದ ಲಯ ಕಂಡುಬರುತ್ತದೆ. ಕನ್ನಡ ಪರಂಪರೆಯ ಕಾವ್ಯ ಸತ್ವ ಗುಣವೂ ಇಲ್ಲಿದೆ ಕವಿತೆಗಳಲ್ಲಿ ಹೊರನೋಟಕ್ಕೆ  ಅರ್ಥವಾಗುವಂತಹವು ಕೆಲವಿದ್ದರೆ, ಇನ್ನೂ ಕೆಲವು  ಮೂರನೆಯ ಕಣ್ಣಿನಿಂದ ಕಂಡು ಅರ್ಥ ಮಾಡಿಕೊಳ್ಳುವ ಕಿಂಡಿಗಳಿವೆ. ಜೊತೆಗೆ ಬೆರಗಿದೆ, ರೊಮ್ಯಾಂಟಿಕತೆಯಿದೆ, ಮಾಗಿದ ಹಣ್ಣಿನ ಸಿಹಿಪದರವಿದೆ, ತಿರುಳೂ ಇದೆ. ಕವಿತೆ ಓದಿದಾಗ ಇದು ಅರ್ಥವಾಗುತ್ತದೆ.  ಪ್ರಸ್ತುತ ಕವನ ಸಂಕಲನದಲ್ಲಿ ೩೮ ಕವನಗಳಿವೆ. ಇವುಗಳಲ್ಲಿ ಕೆಲವು ಕಾವ್ಯ ಜಗತ್ತಿನ ಪ್ರಧಾನವಾದ ಬೆರಗನ್ನು ತೋರಿಸಿದರೆ ಮತ್ತೆ ಕೆಲವು...
Image
 ಗ್ರಾಮೀಣ ಮುಗ್ಧಮನಃಸ್ಥಿಗಳ ಕಥಾಜಗತ್ತು ‘ನಿಲುಗನ್ನಡಿ’  ‘ನಿಲುಗನ್ನಡಿ’ ಇದು  ರೇಣುಕಾ ಕೋಡಗುಂಟಿ ರಚಿತ ಕಥಾಸಂಕಲನ. ಇದರಲ್ಲಿ ೧೨ ಕಥೆಗಳಿವೆ, ಜನತೆಯ ತಾಜಾ ಬದುಕಿನ ಆಶ್ಚರ್ಯಕರ ಸೂಕ್ಷ್ಮಗಳನ್ನು ಇಲ್ಲಿನ ಕಥೆಗಳಲ್ಲಿ ಪರಿಣಾಮಕಾರಿಯಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿಯ ಪರಿಸರದ ಪ್ರಾದೇಶಿಕ ಭಾಷೆಯಲ್ಲಿ ಇಲ್ಲಿನ ಕಥೆಗಳಿವೆ. ಲೇಖಕಿ ಗ್ರಾಮೀಣ ಪ್ರದೇಶದ ಬಗೆಗಿನ ಕಾಳಜಿಯನ್ನು ಇಲ್ಲಿ ಚಿತ್ರ್ರಿಸಿದ್ದಾರೆ. ಜಾಗತೀಕರಣದಿಂದ ಬದಲಾದ ಹಳ್ಳಿಗಳ ಚಹರೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.   ಆತ್ಮೀಯವಾಗಿ ಒಡನಾಡಿರುವ ಇಲ್ಲಿನ ಕಥೆಗಳೆಲ್ಲ ಓದುಗರನ್ನು ಆಕರ್ಷಿಸುವಂಥವು ಮತ್ತು ಸಲೀಸಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಕೃತಿಯಲ್ಲಿ ನೆಲಮೂಲ ನಂಬಿಕೆಗಳಿಗೆ ಕಥೆಗಳು ಇವೆ. ಈ ಕಥೆಗಳ ಕನ್ನಡಿಯಲ್ಲಿ ಗ್ರಾಮೀಣ ಧೀರೋದಾತ್ತ ಮಹಿಳೆಯ ಹಲವು ಮುಖಗಳ ಪ್ರತಿಬಿಂಬಗಳನ್ನು ಕಾಣಬಹುದು. ಹಳ್ಳಿಯ ಅನಕ್ಷರಸ್ಥ ಜನರ ಜೀವನದ ನಂಬಿಕೆಗಳು, ಸಾಂಸ್ಕೃತಿಕ ಆಚರಣೆಗಳು, ನಲಿವುಗಳು, ಅವರು ಬದುಕಿನಲ್ಲಿ ಬೆರೆತುಕೊಂಡ ಬಗೆ, ಸಮಾಜದಲ್ಲಿ ಎದುರಾಗುವ ಸಮಸ್ಯೆಗಳಿಗೆ ಎದೆಗುಂದದೆ ಎದ್ದುನಿಂತು ಹೋರಾಡುವ ಗಟ್ಟಿಗಿತ್ತಿಯರ ಪಾತ್ರಗಳನ್ನು ಇಲ್ಲಿ ಲೇಖಕಿ ಸುಂದರವಾಗಿ ನೇಯ್ದಿದ್ದಾರೆ.  ಮೊದಲ ಕಥೆ ‘ಜಾತ್ರಿ’ ಇದರಲ್ಲಿ ಊರಿನ ಕಟ್ಟಿದುರುಗಮ್ಮ ದೇವರ ಜಾತ್ರೆಯು ಪ್ರತಿವರ್ಷ ಎಳ್ಳಮಾವಾಸ್ಯೆಯಂದು ನಡೆಯುವಾಗ ಸುತ್ತಮುತ್...
Image
 ಜೋಡಿಹಕ್ಕಿಗಳ ಸುಂದರ ಪ್ರೇಮಕಥೆಯ  ಸ್ಪರ್ಶ’  ಈ ಕಥಾ ಸಂಕಲನ  ಜೋಡಿಹಕ್ಕಿಗಳ ಸುಂದರ ಪ್ರೇಮಕಥೆಯ ಕಿರು ಕಾದಂಬರಿ. ಕೃತಿಯ ರಚನೆಕಾರರು ಮುರುಡೇಶ್ವರದ ನೀವಿಯಾ ಗೋಮ್ಸ್. ಇವರು ಎಂಬಿಎ ಪದವೀಧರರು. ಜೊತೆಗೆ ಮೊಟ್ಟಮೊದಲ ಕಾದಂಬರಿ. ಇಬ್ಬರು ಪ್ರೇಮಿಗಳು ಒಬ್ಬರ ಮೇಲೆ ಒಬ್ಬರು ನಂಬಿಕೆ, ಪ್ರೀತಿ ಇಟ್ಟು ಯಾವ ಅಂತಸು- ಆಸ್ತಿಯನ್ನು ಲೆಕ್ಕಿಸದೆ ಇದ್ದರೂ ಸಹ ಮದುವೆಯಾಗಲು ಎದುರಿಸಬೇಕಾದ ಸವಾಲು, ನಂತರ ಅದು ಸುಲಭದಲ್ಲಿ ಬಗೆಹರಿಯುವುದನ್ನು ಇಲ್ಲಿ  ತೆರೆದಿಟ್ಟಿದ್ದಾರೆ. ಕಾದಂಬರಿಯಲ್ಲಿ ಪ್ರೀತಿಯ ಆಳ, ಭಾವನೆಯನ್ನು ಲೇಖಕಿ ಚೆನ್ನಾಗಿ ಚಿತ್ರಿಸಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ಹುಟ್ಟಿದ ಪ್ರೀತಿಯೆಂಬ ಮೊಗ್ಗು ಅರಳುವುದು, ಕೊನೆಯವರೆಗೆ ಅದು ಸುವಾಸನೆ ಬೀರುವುದು, ಸಾಕಷ್ಟು ಶ್ರೀಮಂತ ಯುವಕ, ಅಷ್ಟೇನೂ ಸ್ಥಿತಿವಂತರಲ್ಲದ ಸಾಮಾನ್ಯ ಕುಟುಂಬದ ಸುಂದರ ಯುವತಿಯನ್ನು ಪ್ರೀತಿಸಿದರೂ ಕೊನೆಯವರೆಗೂ ಆ ಪ್ರೀತಿಗೆ ಗೌರವ ನೀಡಿ ಅದರ ಮೇಲೆ ಗೆಲುವು ಸಾಧಿಸುವುದನ್ನು ಅತ್ಯಂತ ಮನೋಹರವಾಗಿ ನಿರೂಪಿಸಿದ್ದಾರೆ. ಯುವಕ-ಯುವತಿಯಲ್ಲಿನ ಪ್ರೀತಿಯ ತಾಕಲಾಟ, ಮನೆಯಲ್ಲಿ ವಿರೋಧ ಬರಬಹುದೆಂಬ ಭಯದಲ್ಲಿರುವ ಯುವಕ, ನಿರೀಕ್ಷಿಸಿದಂತೆ ಕಟ್ಟುನಿಟ್ಟಿನ, ಸಂಪ್ರದಾಯವಾದಿ ತಾಯಿಯ ವಿರೋಧ, ಆದರೆ ತಂದೆಯ ಮಾತಿನಿಂದ ತಾಯಿಯೂ ಈ ಪ್ರೀತಿಯನ್ನು ಒಪ್ಪಿ ಮಗನ ಮದುವೆಗೆ ಮುಂದಾಗುವುದು ಇಲ್ಲಿನ ಕಥಾ ಹಂದರ.      ಶಿಶಿರ್ ಮತ್ತು ಸ್ಪಂದನಾ ಇಲ್...