ಸ್ಥಾಪಿತ ಸಂಪ್ರದಾಯದ ಸವಾಲು ಎತ್ತಿ ತೋರಿಸುವ ‘ತಲೆದಂಡ’ ‘ತಲೆದಂಡ’ ಇದು ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಹೆಸರಾಂತ ನಾಟಕ ಕೃತಿ. ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ, ಆ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿಯೇ ಇದರ ಕಥಾ ವಸ್ತು. ೧೨ ನೇ ಶತಮಾನದಲ್ಲಿನ ಒಂದು ಕ್ರಾಂತಿಕಾರಿ ಚಳುವಳಿಯು ಕಠಿಣ ಜಾತಿ ವ್ಯವಸ್ಥೆಯನ್ನು ನಾಟಕ ಪ್ರಶ್ನಿಸುತ್ತದೆ. ಇದು ನಂಬಿಕೆ, ಸಾಮಾಜಿಕ ನ್ಯಾಯ ಮತ್ತು ಉತ್ತಮ ಪ್ರಪಂಚಕ್ಕಾಗಿ ಹೋರಾಟದ ಬಗ್ಗೆ ಒಂದು ಪ್ರಬಲ ಕಥೆಯಾಗಿದೆ. ಜೊತೆಗೆ ಇಂದಿಗೂ ಪ್ರತಿಧ್ವನಿಸುತ್ತ್ತಿದೆ. ಬಸವಣ್ಣ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ಕ್ರಾಂತಿಕಾರಿ ನಾಯಕ. ಆತ ವರ್ಚಸ್ವಿ ಮತ್ತು ಆಧ್ಯಾತ್ಮಿಕ ವ್ಯಕ್ತಿ. ಅವನ ಕಥೆ ಇಂದಿಗೂ ಬದಲಾವಣೆ ಮತ್ತು ಭರವಸೆಯನ್ನು ಪ್ರೇರೇಪಿಸುತ್ತದೆ. ನಾಟಕದ ವಿಷಯ: ೧೨ ನೇ ಶತಮಾನದ ಕರ್ನಾಟಕದ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಘಟನೆಗಳೇ ಇಲ್ಲಿನ ವಿಷಯ. ಜಾತಿ ಮತ್ತು ಪೂರ್ವಾಗ್ರಹದ ಸಂಕೋಲೆಗಳಿಂದ ಮುಕ್ತವಾದ ಸಮಾಜವನ್ನು ಸೃಷ್ಟಿಸುವ ಕನಸು ಕಾಣುವ ದಾರ್ಶನಿಕ ನಾಯಕ ಭಕ್ತಿ ಭಂಡಾರ ಬಸವಣ್ಣ ಇಲ್ಲಿ ದೊರೆ ಕಳಚೂರ್ಯ ವಂಶದ ಅಂದರೆ ಕ್ಷೌರಿಕ ವಂಶದ ಬಿಜ್ಜಳನಿಗಿಂತ ಉನ್ನತ ಸ್ಥಾನದಲ್ಲಿ ಕಾಣುತ್ತಾನೆ. ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಭಂಡಾರದ ಪ್ರಧಾನಿ. ಬಿಜ್ಜಳನ ಮಗ ಯುವರಾಜ ಸೋವಿದೇವ ಬಸವಣ್ಣನಿಲ್ಲದ ಸಂದರ್ಭದಲ್ಲಿ ಭಂಡಾರದ ಬಾಗಿಲು ತೆರೆಸಲೆತ್ನಿಸುವಲ್ಲ...