Posts

Showing posts from July, 2025
Image
 ಗ್ರಾಮ ಜೀವನದ  ಚೆಲುವು ಕಟ್ಟಿಕೊಡುವ ‘ಕಥೆ ಜಾರಿಯಲ್ಲಿರಲಿ’  ‘ಕಥೆ  ಜಾರಿಯಲ್ಲಿರಲಿ’ ಈ ಕಥಾ ಸಂಕಲನವು ೨೦೨೫ರ ‘ಈ ಹೊತ್ತಿಗೆ’ ಕಥಾಪ್ರಶಸ್ತಿ  ಪಡೆದದ್ದಾಗಿದೆ. ಇದರ ಲೇಖಕಿ ಶಿರಸಿಯ ಪೂರ್ಣಿಮಾ ಭಟ್ ಸಣ್ಣಕೇರಿ. ಇಲ್ಲಿನ ಕಥೆಗಳ ರಚನೆ  ಗಟ್ಟಿತನದಿಂದ ಕೂಡಿದ್ದು, ಹಳ್ಳಿ ಜೀವನದ ಸೊಗಡು ಹೆಚ್ಚಾಗಿ ಕಾಣಿಸುತ್ತಿದೆ. ಇಲ್ಲಿರುವ  ಎಂಟು ಕಥೆಗಳಲ್ಲಿ  ಹೊಸತನವಿದೆ,   ವಿಶಿಷ್ಟತೆಯಿದೆ. ಕಥಾ ವಸ್ತುವು ನಿರ್ವಹಣೆ ಮತ್ತು   ಭಾಷೆಯ  ಪ್ರಯೋಗಶೀಲತೆಯನ್ನು ಒಳಗೊಂಡಿವೆ.    ಕೃತಿಯನ್ನು ಓದಿದ ಬಳಿಕೆ ಅಲ್ಲಿನ  ಕಥೆಗಳೇ ನಮ್ಮನ್ನು ಆವರಿಸಿಬಿಡುತ್ತವೆ. ವಿಶೇಷವಾಗಿ ಉತ್ತರ ಕನ್ನಡದ ಅದರಲ್ಲೂ ಶಿರಸಿ  ತಾಲೂಕಿನ ಸುತ್ತಮುತ್ತದ ಗ್ರಾಮಗಳ ಹೆಸರು ಇದರಲ್ಲಿದೆ.  ಇಲ್ಲಿನ ಕಥೆಗಳೆಲ್ಲ ಲೇಖಕಿಯ  ಸುತ್ತಮುತ್ತಲ ಬದುಕುಗಳನ್ನು ತೆರೆದಿಡುತ್ತವೆ. ಸರಳ ವಿಷಯಗಳಾದರೂ ಅಲ್ಲಿನ ಸಂಪ್ರದಾಯ,  ಅವುಗಳ ವಿರುದ್ಧ್ದ ಮಾತನಾಡುವುದು, ಅದನ್ನು ಕಥಾನಾಯಕಿ ಸಮರ್ಥಿಸಿಕೊಳ್ಳುವುದನ್ನು  ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಕಥನ ರೂಪುಗೊಳ್ಳುವ ಮಾಂತ್ರಿಕ ಪ್ರಕ್ರಿಯೆಯನ್ನು  ಲೇಖಕಿ ತೋರಿಸಿದ್ದಾರೆ. ಬರವಣಿಗೆ ಹಾಗೂ ಬದುಕಿನ ಸೌಂದರ್ಯ ಇಲ್ಲಿದೆ.  ಕಥೆ  ಕಟ್ಟುವಲ್ಲಿನ  ಎಚ್ಚರ ಗಮನ ಸೆಳೆಯುತ್ತದೆ. ಮೊದಲನೆಯ ಕಥೆ ‘ಕತೆ ...
Image
 ಎಂದೂ ಮರೆಯದ ವ್ಯಕ್ತಿತ್ವದ ‘ಇದ್ದರಿಂಥವರೆಮ್ಮ ನಡುವಲಿ’ ‘ಇದ್ದರಿಂಥವರೆಮ್ಮ ನಡುವಲಿ’  ಈ ಕೃತಿ ಕೆಲವು ಸಾಧಕ ವ್ಯಕ್ತಿಗಳ ಜೀವನದ ವ್ಯಕ್ತಿತ್ವದ ನೋಟವನ್ನು ಕಟ್ಟಿಕೊಡುವಂಥದ್ದು. ಕೆಲವರು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವವನ್ನು ಉಳಿಸಿ ಹೋಗುತ್ತಾರೆ. ಅಂತಹವರ ಕುರಿತಾಗಿ ಲೇಖಕ ವಿಶ್ವಾಸ್ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಹದಿನಾಲ್ಕು ವ್ಯಕ್ತಿ ಚಿತ್ರಣವಿದೆ. ಇಲ್ಲಿನ ವ್ಯಕ್ತಿಗಳಲ್ಲಿ ತಾವು ಕಂಡ ಪ್ರತಿಯೊಂದು ಒಳ್ಳೆಯ ಅಂಶಗಳನ್ನು ಲೇಖಕರು ದಾಖಲಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದವರು. ಅವರ ಹೊರತಾಗಿಯೂ ಕೆಲವರನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.  ಈ ಸಾಧಕರ ಅನುಭವಗಳನ್ನು ಮತ್ತು ಅವರೊಂದಿಗೆ ಒಡನಾಡಿದ ದಿನಗಳ್ನು ಲೇಖಕರನ್ನು ಆಕರ್ಷಿಸಿದ್ದರಿಂದ ಸಾರ್ವಜನಿಕರಿಗೂ ಒಂದಷ್ಟು ಪ್ರೇರಣೆಯಾಗಬಹುದು ಎನ್ನುವ ಉದ್ದೇಶದಿಂದ ಅವರ ಬಗ್ಗೆ ಕೃತಿ ರಚಿಸಿದ್ದಾರೆ.  ಮೊದಲನೆಯದಾಗಿ, ‘ವಾಮನರೂಪಿ ತ್ರಿವಿಕ್ರಮ’ ಯಾದವ್‌ರಾವ್ ಜೋಶಿ. ಇವರು ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರರ ಸಂಪರ್ಕಕ್ಕೆ ಬಂದು  ಸ್ವಯಂಸೇವಕರಾದವರು. ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಹೊಂದಿದ್ದರೂ ದೇಶಕ್ಕಾಗಿ ಅದೆಲ್ಲವನ್ನು ಬಿಟ್ಟು ಬಂದವರು. ಎಲ್ ಎಲ್ ಬಿ ಓದಿದ್ದರೂ  ಆರ್ ಎಸ್ ಎಸ್ ಪ್ರಚಾರ ಕಾರ್ಯವನ್ನು ಆರಂಭಿಸಿ ಕರ್ನಾಟಕದಲ್ಲಿ ಅದನ್ನು ಕಟ್ಟಿ ಬೆಳೆಸಿದವರು. ಸಂಸ್ಕ...
Image
      ನೆನಪು, ಹಳ್ಳಿಯ ಸೊಗಡಿನ ‘ಡಾಕ್ಟರ್ ಹೆಂಡತಿ’ ಗ್ರಾಮೀಣ ಭಾರತದಲ್ಲಿ ಕೆಲಸ ಮಾಡುವ ವೈದ್ಯರು, ಅವರ ಪತ್ನಿ ಮತ್ತು ಕುಟುಂಬದವರು ಕಂಡುಂಡ ಅನುಭವದ ಚಿತ್ರಣವೇ ಡಾಕ್ಟರ್ ಹೆಂಡತಿ. ಸರೋಜಿನಿ ಪಡಸಲಗಿ ಅವರು ಈ ಕೃತಿ ರಚಿಸಿದ್ದ್ದಾರೆ.  ಈ ಕೃತಿಯಲ್ಲಿ ಸರೋಜಿನಿ ಅವರು ಒಬ್ಬ ವೈದ್ಯರ ಪತ್ನಿಯಾಗಿ ಪತಿ ವರ್ಗಾವಣೆಗೊಂಡಲ್ಲೆಲ್ಲ ಅವರ ಹಿಂದೆ ಕುಟುಂಬ ಸಮೇತ ಹೋಗಿ ಅಲ್ಲಿ ಮನೆ ಮಾಡಿ, ಅನುಭವಿಸಿದ ಕಷ್ಟ- ನಷ್ಟ, ಪಡೆದ ಪ್ರೀತಿ-ವಾತ್ಸಲ್ಯ, ಅಕ್ಕಪಕ್ಕದವರೊಂದಿಗಿನ ಕಳೆದ ಕಾಲ, ಆರೋಗ್ಯ ಕೇಂದ್ರಗಳ ನರ್ಸ್‌ಗಳ ಒಡನಾಟ, ವೈದ್ಯರ  ಜೊತೆ ಬರುವ ಅಧಿಕಾರಿಗಳ, ಸಿಬ್ಬಂದಿಗಳ ನೆನಪನ್ನೆಲ್ಲ ಬಿಚ್ಚಿಟ್ಟಿದ್ದ್ದಾರೆ. ಇದನ್ನು ಓದಿದಾಗ ಗ್ರಾಮೀಣ ಭಾರತದ ಕಥನ  ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಹಳ್ಳಿಯ ಸೊಗಡಿನಲ್ಲೇ ಬರಹಗಳಿವೆ.  ಇದು ಓದಿಸಿಕೊಂಡು ಹೋಗುವಲ್ಲಿ ಸಫಲವಾಗಿದೆ.  ಜೀವನ ಪ್ರೀತಿ ಮತ್ತು ಜೀವನ ದೃಷ್ಟಿ ಇದರಲ್ಲಿ ಮಿಳಿತವಾಗಿದೆ.   ಹಳ್ಳಿಯ ಮುಗ್ಧರ  ಕಣ್ಣಲ್ಲಿ ಕಾಣುವ ಪ್ರೀತಿ, ಅನುಭವಗಳ ನಡುವೆ ಏನನ್ನೂ ಕೊಡಲಾರದವರು ಹರಸಿ, ಹಾರೈಸುವ ಚಿತ್ರಣ ಇಲ್ಲಿದೆ.  ಈಗಿನ ಹಾವೇರಿ ಜಿಲ್ಲೆಯ ಬಂಕಾಪುರದಿಂದ, ತಿಳುವಳ್ಳಿ, ಗರಗ ಮೊದಲಾದ ಗ್ರಾಮಗಳಿಗೆ ವೈದ್ಯರು ವರ್ಗಾವಣೆಗೊಳ್ಳುತ್ತ್ತಾರೆ. ಈ ಗ್ರಾಮಗಳಲ್ಲಿನ ವೈಶಿಷ್ಟ್ಯವನ್ನು ಸರೋಜಿನಿಯವರು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಬ...
Image
 ವರದಾ ತೀರದ ಕಥೆಗಳು’ ‘ವರದಾ  ತೀರದ ಕಥೆಗಳು’ ಇದು ಕಥಾ ಸಂಕಲನ. ಪತ್ರಕರ್ತ ರವೀಂದ್ರ ಮುದ್ದಿ ಇದರ ಲೇಖಕರು.  ಕೃತಿಯಲ್ಲಿ ಲೇಖಕರು ಬಾಲ್ಯದಲ್ಲಿ ತಾನು ತನ್ನೂರಿನಲ್ಲಿ ಕಂಡವರನ್ನು ಕಥೆಯ ರೂಪದಲ್ಲಿ  ದಾಖಲು ಮಾಡಿದ್ದಾರೆ ಇಲ್ಲಿನ ಬರಹಗಳಲ್ಲಿ ಕೆಲವು ಕಥೆಗಳಾದರೆ, ಇನ್ನು ಕೆಲವು ವ್ಯಕ್ತಿ  ಚಿತ್ರಗಳಾಗಿವೆ. ಮತ್ತೆ ಕೆಲವು ಅಕ್ಕರೆಯ ಟಿಪ್ಪಣಿಗಳಂತೆ ಕಾಣುತ್ತವೆ. ಆದರೆ ಎಲ್ಲವನ್ನೂ  ಒಟ್ಟುಗೂಡಿಸಿ ನೋಡಿದಾಗ ಲೇಖಕರ ಜೀವನ ಪ್ರೀತಿ, ತಾನು ಕಂಡ ವ್ಯಕ್ತಿಗಳನ್ನು  ದಾಖಲಿಸುವುದಕ್ಕೆ ಮುಖ್ಯ ಕಾರಣವಾಗಿರುವುದು ಕಂಡುಬರುತ್ತದೆ.  ಈ ಕೃತಿಯಲ್ಲಿ ಬರುವ  ವ್ಯಕ್ತಿಗಳೆಲ್ಲ ಲೇಖಕರ ಮೇಲೆ ಪ್ರಭಾವ ಬೀರಿದವರಾಗಿದ್ದಾರೆ ಈ ಕೃತಿಯ ವಿಷಯ ಗ್ರಹಿಕೆಗೆ  ಹಿಡಿದ ಕನ್ನಡಿಯಾಗಿದೆ. ಅವರ ಹುಟ್ಟೂರು ಹಾವೇರಿ  ಜಿಲ್ಲೆಯ ವರದಾ ನದಿಯ ಅಂಚಿನಲ್ಲಿರುವ  ಹಾಲಗಿ ಗ್ರಾಮ. ಇಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳನ್ನು ರಸವತ್ತಾಗಿ  ಕಟ್ಟಿಕೊಟ್ಟಿದ್ದಾರೆ ಕೆಲವು ಸಂಗತಿಗಳು ಮನಸ್ಸಿಗೆ ತಂಪೆರೆಯುತ್ತವೆ ಮತ್ತೆ ಕೆಲವು  ಕಚಗುಳಿ ಇಟ್ಟರೆ ಇನ್ನೂ ಕೆಲವು ಕಾಡುತ್ತಲೇ ಇರುತ್ತವೆ.  ಕೃತಿಯಲ್ಲಿ ಒಟ್ಟು ೧೨ ವಿವಿಧ  ಕಥೆಗಳಿವೆ. ಇವೆಲ್ಲವೂ ನಮ್ಮನ್ನು ಒಂದರ ಹಿಂದೆ ಒಂದರಂತೆ ಓದಿಸಿಕೊಂಡು ಹೋಗುವಲ್ಲಿ  ಯಶಸ್ವಿಯಾಗುತ್ತವೆ. ಧಾರವಾಡ ಕನ್ನಡದ ಮಾತುಗಳು ಓದುವಾಗ ಖುಷಿಕೊಡುತ್ತವೆ....
Image
 ಎಲ್ಲರಿಗೂ ಇಷ್ಟವಾಗುವ ಇಷ್ಟಾರ್ಥ ಮತ್ತು  ಇತರ ನಾಟಕಗಳು ‘ಇಷ್ಟಾರ್ಥ ಮತ್ತು  ಇತರ ನಾಟಕಗಳು’ ಈ ನಾಟಕದ ಕೃತಿಯನ್ನು ಬರೆದವರು ‘ಪರ್ವತವಾಣಿ’ ಕಾವ್ಯನಾಮದ ಪಿ. ನರಸಿಂಗರಾವ್ ಅವರು. ಇದನ್ನು ಸಂಪಾದಿಸಿದವರು ಅವರ ಸೊಸೆ ಕೆ. ಎಂ.ವಿಜಯಲಕ್ಷ್ಮೀ. ಇದರಲ್ಲಿ ಇಷ್ಟಾರ್ಥದ ಜೊತೆಗೆ ಮುಕುತಿ- ಮೂಗುತಿ, ಆಶೀರ್ವಾದ, ಸತಿ ಸಾವಿತ್ರಿ ಸೇರಿದಂತೆ ಒಟ್ಟು ನಾಲ್ಕು ನಾಟಕಗಳಿವೆ. ಅತ್ಯಂತ ಸುಂದರವಾದ ಕಿರು ನಾಟಕಗಳಿವು. ಶಾಲಾ- ಕಾಲೇಜಿನಲ್ಲಿ ಮಕ್ಕಳು ಆಡಲು ಉತ್ತಮ ಆಗಿವೆ. ‘ಇಷ್ಟಾರ್ಥ’ ನಾಟಕದಲ್ಲಿ  ಜಪಮಣಿಯೊಂದು ಇಷ್ಟಾರ್ಥ ಈಡೇರಿಸುತ್ತದೆ ಎಂದು ನಂಬಿ ಅದರಿಂದ ದುರಾಸೆಗೆ ಬಿದ್ದ  ಕುಟುಂಬವೊಂದು ದುರಂತ ಕಂಡ ಕಥೆ ಇದೆ. ‘ಮುಕುತಿ-ಮೂಗುತಿ’ಯಲ್ಲಿ ಮೋಕ್ಷ ತೋರಿಸಲು ವೃದ್ಧ ಬ್ರಾಹ್ಮಣ ಮತ್ತು ವಟು ರೂಪದಲ್ಲಿ ಬಂದ ಪಾಂಡುರಂಗ ವಿಠಲನನ್ನು ಅವಮಾನಿಸಿ, ನಿಂದಿಸಿದ ಆಭರಣ ವ್ಯಾಪಾರಿ ನಂತರ ಅವರ ನೈಜ ರೂಪ ಗೊತ್ತಾದಾಗ ಪಶ್ಚಾತ್ತಾಪಪಟ್ಟು ಹರಿದಾಸನಾಗುವ ಕಥೆ ಇದೆ. ‘ಆಶೀರ್ವಾದ’ ಹಾಸ್ಯ ನಾಟಕವಾಗಿದ್ದು, ಗಂಭೀರವಲ್ಲದ ಜಗಳದ ಮಧ್ಯೆಯೇ ಯವತಿ-ಯುವಕ ಮದುವೆಯಾಗುವುದರ ಬಗ್ಗೆ ಇದೆ. ‘ಸತಿ ಸಾವಿತ್ರಿ’ ನಾಟಕವು ಯಮನನ್ನೇ ಸೋಲಿಸಿ ತನ್ನ ಗಂಡ ಸತ್ಯವಾನನನ್ನು ಉಳಿಸಿಕೊಂಡ ಸಾವಿತ್ರಿಯ ಕುರಿತಾದ್ದು.  ಅತಿ ಸರಳವಾದ, ಸುಲಭದಲ್ಲಿ ಅರ್ಥವಾಗುವ ಈ ನಾಟಕಗಳು ಓದುತ್ತ ಹೋದಂತೆ ಕುತೂಹಲ ಹುಟ್ಟಿಸುತ್ತವೆ. ನಾಟಕ ಓದು ಮುಗಿದ ಮೇಲೆ ಅದರ ನೆನೆಪು ಸದಾ ...
Image
 ರಾಮಾಯಣದ ತತ್ವ, ಆದರ್ಶ ನೆನಪಿಸುವ ‘ರಾಮರಾಜ್ಯ’   ‘ರಾಮರಾಜ್ಯ’ ಇದು ದಿವಂಗತ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರ ನಾಟಕ ಕೃತಿ. ಶ್ರೀರಾಮನ ಚಿತ್ರಣದ ಒಂದು ಸುಂದರ ಕಾವ್ಯಕಲಾಕೃತಿ. ರಾವಣನ ವಧೆಯ ನಂತರ ಅಯೋಧ್ಯೆಯಲ್ಲಿ ಪಟ್ಟಾಭಿಷಕ್ತ್ತನಾದ ರಾಮನ ಚರಿತೆ ಇಲ್ಲಿಯ ವಸ್ತು. ರಾಮ ಎಂದಿನಂತೆ ಒಂದು ದಿನ ಆಸ್ಥಾನಕ್ಕೆ ಬರುವಲ್ಲಿಂದ ತೊಡಗಿ  ಲವಕುಶ ಕಾಳಗದವರೆಗಿನ ಘಟನೆಗಳು ಈ ನಾಟಕದಾದ್ಯಂತ ಒಪ್ಪವಾಗಿ, ಸಂಕ್ಷಿಪ್ತವಾಗಿ ಪೋಣಿಸಲ್ಪಟ್ಟಿವೆ.  ಇಲ್ಲಿನ ನಾಟಕ ಆರಂಭವಾಗುವುದು  ರಾಮನ ಪಟ್ಟಾಭಿಷೇಕದ ತಯಾರಿಯಿಂದ ಅಲ್ಲ, ರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿ ಬಂದು ಪಟ್ಟಾಭಿಷೇಕವಾಗಿ ತನ್ನ ತಾಯಿ ಕೌಸಲ್ಯ ಭೇಟಿಗೆ ಬಂದಾಗ ಆರಂಭವಾಗುತ್ತದೆ. ಅಲ್ಲಿಂದ ನಿಧಾನವಾಗಿ ಸರಿಯುವ ರಾಮ ಕಥೆಯು ತನ್ನ ವಿಭಿನ್ನ ಮುಖಗಳಿಂದ ಒಂದಕ್ಕೊಂದು ಬೆಸೆದು ಮೂಲ ರಾಮಾಯಣದಲ್ಲಿ ಕಾಣುವ ಎಲ್ಲಾ ಮುಖಗಳನ್ನು ಸೂಕ್ಷ್ಮವಾಗಿ ನಮ್ಮೆದುರು ತೆರೆದಿಡುತ್ತದೆ. ಹೀಗೆ ತೆರೆದಿಡುವಾಗ  ಪ್ರತಿ ಪಾತ್ರಗಳೂ  ಆಯಾ ಪಾತ್ರಗಳ ಗೌರವವನ್ನು ಉಳಿಕೊಂಡು  ಆ ಮೂಲಕ ರಾಮನ ಅಂತರಂಗ-ಬಹಿರಂಗಕ್ಕೆ ಬೆಳಕು ಚೆಲ್ಲುತ್ತವೆ. ರಾಮ ‘ರಾಮ’ನಾಗುವುದು ಹೇಗೆ ಮತ್ತು ಏಕೆ ಎನ್ನುವುದನ್ನು ಮತ್ತು ಏಕೆ ಎನ್ನುವುದನ್ನು ಈ ನಾಟಕವು ನಿಶ್ಯಬ್ದ ಸ್ವರೂಪದಲ್ಲಿ ಕಟ್ಟಿಕೊಡುತ್ತದೆ. ಇಲ್ಲಿ ಬರುವ ಕೈಕೇಯಿ ದುಷ್ಟೆಯಲ್ಲ.  ರಾಮನನ್ನು ಉಳಿಸಿದ ನಿಜ ತಾಯಿ....
Image
    ಗತಬಾಳ ಚಿತ್ರ ಬಿಚ್ಚಿಡುವ ‘ಚಲನೆ’ ‘ಚಲನೆ’ ಈ ಕವನಸಂಕಲನವನ್ನು ಪ್ರೊ. ಎಸ್ ಜಿ ಜೈನಾಪುರ ರಚಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಉಪನ್ಯಾಸರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಜೈನಾಪುರ ಸಾಹಿತಿಯೂ ಹೌದು. ಈ ಕೃತಿಯಲ್ಲಿ ಅವರು ಒಂದು ತೀವ್ರ ಭಾವಕ್ಕೆ ಸ್ಪಷ್ಟವಾದ ಅಭಿವ್ಯಕ್ತಿಯನ್ನು ಕೊಟ್ಟಿದ್ದಾರೆ. ಇಲ್ಲಿನ ಕವನಗಳು ತೀರಾ ಸರಳವಾದವು. ಕವಿಯ ಮನಸ್ಸು ಹಲವು ಸ್ಥಳಗಳಲ್ಲಿ ಇಲ್ಲಿ ಕೆಲಸ ಮಾಡಿರುವುದನ್ನು ಕಾಣಬಹುದು.  ಅಮೂರ್ತದ ಕಡೆಗೆ ಇಲ್ಲಿನ ಕವನಗಳು ಕೈಚಾಚಿವೆ. ಇಲ್ಲಿನ ಕಾವ್ಯಗಳಲ್ಲಿ  ಸಂಕೀರ್ಣತೆ ಇಲ್ಲ, ಆದರೆ ತಾತ್ವಿಕತೆ ಇದೆ. ಚಿಂತನೆ ಇರುವುದನ್ನು ಕಾಣಬಹುದು.   ಸಂಕಲನದಲ್ಲಿ ಕವಿಯು ಕವನಗಳನ್ನು ಆರು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಅವುಗಳೆಂದರೆ, ಪ್ರೇಮ ಕವನಗಳು, ಕೌಟುಂಬಿಕ ಕವನಗಳು, ವ್ಯಕ್ತಿ ವಿಶ್ಲೇಷಣ ಕವನಗಳು, ಸಾಂದರ್ಭಿಕ ಕವನಗಳು, ಚಿಂತನ ಪರ ಕವನಗಳು ಮತ್ತು ಅನುವಾದಿತ ಕವನಗಳು. ಒಟ್ಟು ೫೨ ಕವನಗಳನ್ನು ಈ ಸಂಕಲನ ಒಳಗೊಂಡಿದೆ.   ಇಲ್ಲಿನ ಪ್ರೇಮ ಕವನಗಳು ಒಂದು ಉದಾತ್ತ ಕಲ್ಪನೆಯನ್ನು ಹೊಂದಿವೆ, ಮಾಗಿದ ಪ್ರೇಮದ ದರ್ಶನವಿದೆ. ಯೌವ್ವನದ ಪ್ರೇಮ ಬೆರೆತಿದೆ. ಕೌಟುಂಬಿಕ ಕವನಗಳಲ್ಲಿಯೂ ಆತ್ಮೀಯತೆ ಇದೆ, ಪ್ರೀತಿ ಬದುಕಿಗೆ ಆಧಾರ ಎನ್ನುವ ಅರಿವಿದೆ. ಪ್ರೀತಿ ಬದುಕನ್ನು ಪಾವನಗೊಳಿಸುತ್ತದೆ ಎಂಬ ಭಾವ ಇದೆ. ಸಾರ್ಥಕಕಂಡ ಜೀವಕ್ಕೆ ಪೂಜ್ಯ ಭಾವನೆ...
Image
 ಮುಳುಗಡೆ ಸಂತ್ರಸ್ತರ ಸಂಕಟ ಬಿಚ್ಚಿಡುವ  ‘ದ್ವೀಪ’   ‘ದ್ವೀಪ’ ಇದು ತಣ್ಣಗೆ ಮೈಯಲ್ಲಿ ಕುಳಿತಿದ್ದ ತನ್ನದೇ ಲಯ ಮತ್ತು ಗತಿ ನಿರ್ಮಿಸಿಕೊಂಡಿದ್ದ ಮಲೆನಾಡಿನ ಒಂದು ಹಳ್ಳಿಯ ಜನರ ಜೀವನದಲ್ಲಿ ನಿರ್ಮಾಣವಾಗುವ ಹಾಗೂ ಮತ್ತೊಂದು ಜಗತ್ತಿನ ಬೇಡಿಕೆ ಉಂಟುಮಾಡುವ ಅಲೆಗಳನ್ನು ಕುರಿತಾದ ಸರಳ ಕಾದಂಬರಿ. ನಾ. ಡಿಸೋಜಾ ಇದರ ಲೇಖಕರು. ಈ ಕಾದಂಬರಿ ಅತ್ಯಂತ ಪ್ರಸಿದ್ಧವಾದುದು, ಸಿನಿಮಾವಾಗಿ ನಿರ್ಮಾಣವಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿ, ಸ್ವರ್ಣಪದಕ  ಗಳಿಸಿದೆ. ‘ದ್ವೀಪ’ದ ಕಥಾ ವಸ್ತು ಸಾಗರ ತಾಲೂಕು ತಾಳಗುಪ್ಪ ಹೋಬಳಿಯ ಅರಳಗೋಡು ಗ್ರಾಮದ ಹೊಸಮನೆಹಳ್ಳಿಯದು. ಈ ಗ್ರಾಮ  ಲಿಂಗನಮಕ್ಕಿ ಡ್ಯಾಮ್ ತಲೆ ಎತ್ತಿದ ಸಂದರ್ಭದಲ್ಲಿ ಮುಳುಗಡೆ ಪ್ರದೇಶವಾಗುತ್ತದೆ. ಆ ಊರಿನಲ್ಲಿ ಇರುವುದು ೫ ಮನೆ ಮಾತ್ರ. ೪ ಮನೆಯವರಿಗೆ ಮಾತ್ರ ಪರಿಹಾರ ದೊರೆತು ಊರನ್ನು ಬಿಟ್ಟು ಸರಕಾರ ಬೇರೆಡೆ ಕೊಟ್ಟ ಸ್ಥಳಕ್ಕೆ ತೆರಳುತ್ತಾರೆ. ಮನೆಯನ್ನು ಬಿಡುವುದು ಅನಿವಾರ್ಯವಾದರೂ ತಮಗೆ ಪರಿಹಾರ ಬರದೇ ಇರುವ ಕಾರಣಕ್ಕೆ ಮತ್ತು ಇರುವ ಜಮೀನನ್ನು ಹೇಗಾದರೂ ಉಳಿಸಿಕೊಳ್ಳುವ ಸಂಬಂಧ ಗಣಪಯ್ಯ ಮತ್ತು ಅವರ ಪತ್ನಿ ನಾಗವೇಣಿಯ ಕುಟುಂಬ ಅಲ್ಲಿಯೇ ಉಳಿಯುತ್ತಾರೆ.  ಇದರ ಜೊತೆಗೆ ಆ ನೆಲದ ಬಂಧ ಅವರನ್ನು ಕಟ್ಟಿಹಾಕುತ್ತದೆ. ಮುಳುಗಡೆ ಪರಿಹಾರ ಕಚೇರಿಯವರ ದಿವ್ಯ ನಿರ್ಲಕ್ಷದಿಂದ ಇಡೀ ಕುಟುಂಬ ತೊಂದರೆ ಪಡುವಂತಾಗುತ್ತದೆ.  ಮಳೆಗಾಲದಲ್ಲಿ ಸಂಕಷ್ಟಕ್ಕೆ ಸಿಲುಕುವ, ಡ್ಯಾಮಿ...
Image
 ಸ್ವಸ್ಥ, ಸಮಸಮಾಜದ ಕನಸು ಕಾಣುವ  ‘ನೆತ್ತಿ ಸುಟ್ಟ  ಕಾಲ’  ಮಹಿಳೆ- ಪುರುಷ, ಪುರುಷ -ಮತ್ತು ಮಹಿಳೆ ಹೀಗೆ ಎರಡು ಬಗೆಯ ಸಂವೇದನೆಗಳನ್ನು ಸೂಕ್ಷ್ಮವಾಗಿ ಪರಸ್ಪರ ಮುಖ್ಯವಾಗಿಸಿಕೊಂಡು ಬರೆದ ಕವನ ಸಂಕಲನ  ‘ನೆತ್ತಿ ಸುಟ್ಟ ಕಾಲ’.  ಎರಡು ಲೋಕಗಳ ಮನೋವ್ಯಾಪಾರದ ನಿಜಸ್ಥಿತಿಗಳನ್ನು ಇಲ್ಲಿ ಬಯಲುಗೊಳಿಸಲು ಲೇಖಕಿ ಹೊರಟಿದ್ದಾರೆ. ಈ ಕವನ ಸಂಕಲನದ ಕರ್ತೃ ಪ್ರೊ. ಆರ್. ಸುನಂದಮ್ಮ. ಜನಪ್ರಿಯ ಪ್ರಾಧ್ಯಾಪಕರಾಗಿ, ನಂತರ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಆಗಿ ನಿವೃತ್ತರಾದವರು.  ಕೃತಿಯಲ್ಲಿ ಹೆಣ್ಣು ಗಂಡು ನಡುವಿನ ಕಾಯ, ಕಾಮ, ಪ್ರೇಮ, ಜೀವನದ ಶೋಷಣೆ  ಜೊತೆಗೆ ಭೂಮಿಯ ಮೇಲಿನ ಸಮಸ್ತವನ್ನು ಯಜಮಾನಿಕೆಯ ಧೋರಣೆಯಲ್ಲಿ ಅಧೀನವಾಗಿಸಿಕೊಂಡಿರುವ ಪುರುಷ ಅಹಂಕಾರದ, ಜ್ಞಾನ, ಗರ್ವ, ಧರ್ಮ, ಜಾತಿ, ಲಿಂಗ, ಭೇದ, ರಾಜಕಾರಣ ಇವು ನಮ್ಮ ಬದುಕನ್ನು ನಿಯಂತ್ರಿಸುತ್ತಿರುವ ಕುರಿತು  ವಿಚಾರವಿದೆ. ವ್ಯಕ್ತಿ ಮತ್ತು ಸಮಷ್ಟಿಯ ಜೀವನ ಹೇಗೆ ನರಕವಾಗಿದೆ ಎನ್ನುವುದನ್ನು ಇವರ ಕವಿತೆಗಳಲ್ಲಿ ಕಾಣಬಹುದು. ಇಲ್ಲಿ ಕಲ್ಯಾಣ ಸಮಾಜದ ಕನಸಿದೆ, ಮಾನವೀಯತೆ ಸತ್ತಿರುವ ಎದೆಗಳಲ್ಲಿ ಪ್ರೀತಿ, ಕರುಣೆಯ ಆರ್ದ್ರತೆ ಒಸರಲಿ ಎನ್ನುವ ನಿರೀಕ್ಷೆಯೂ  ಇz. ಒಟ್ಟಿನಲ್ಲಿ ಬದುಕಿಗೆ ಹಿಡಿದ ಕನ್ನಡಿ ರೂಪದ ಬಿಂಬಗಳು ಇಲ್ಲಿನ ಕವಿತೆಗಳಾಗಿವೆ. ಸಂಕಲನದಲ್ಲಿ ಒಟ್ಟೂ ೪೦ ಕವಿತೆಗಳಿವೆ. ಇವುಗಳನ್ನು ಓದಿದಾಗ ಕವಯಿತ್...
Image
 ವರದಾ ತೀರದ ಕಥೆಗಳು’ ‘ವರದಾ ತೀರದ ಕಥೆಗಳು’ ಇದು ಕಥಾ ಸಂಕಲನ. ಪತ್ರಕರ್ತ ರವೀಂದ್ರ ಮುದ್ದಿ ಇದರ ಲೇಖಕರು. ಕೃತಿಯಲ್ಲಿ ಲೇಖಕರು ಬಾಲ್ಯದಲ್ಲಿ ತಾನು ತನ್ನೂರಿನಲ್ಲಿ ಕಂಡವರನ್ನು ಕಥೆಯ ರೂಪದಲ್ಲಿ ದಾಖಲು ಮಾಡಿದ್ದಾರೆ ಇಲ್ಲಿನ ಬರಹಗಳಲ್ಲಿ ಕೆಲವು ಕಥೆಗಳಾದರೆ, ಇನ್ನು ಕೆಲವು ವ್ಯಕ್ತಿ ಚಿತ್ರಗಳಾಗಿವೆ. ಮತ್ತೆ ಕೆಲವು ಅಕ್ಕರೆಯ ಟಿಪ್ಪಣಿಗಳಂತೆ ಕಾಣುತ್ತವೆ. ಆದರೆ ಎಲ್ಲವನ್ನೂ ಒಟ್ಟುಗೂಡಿಸಿ ನೋಡಿದಾಗ ಲೇಖಕರ ಜೀವನ ಪ್ರೀತಿ, ತಾನು ಕಂಡ ವ್ಯಕ್ತಿಗಳನ್ನು ದಾಖಲಿಸುವುದಕ್ಕೆ ಮುಖ್ಯ ಕಾರಣವಾಗಿರುವುದು ಕಂಡುಬರುತ್ತದೆ.  ಈ ಕೃತಿಯಲ್ಲಿ ಬರುವ ವ್ಯಕ್ತಿಗಳೆಲ್ಲ ಲೇಖಕರ ಮೇಲೆ ಪ್ರಭಾವ ಬೀರಿದವರಾಗಿದ್ದಾರೆ ಈ ಕೃತಿಯ ವಿಷಯ ಗ್ರಹಿಕೆಗೆ ಹಿಡಿದ ಕನ್ನಡಿಯಾಗಿದೆ. ಅವರ ಹುಟ್ಟೂರು ಹಾವೇರಿ  ಜಿಲ್ಲೆಯ ವರದಾ ನದಿಯ ಅಂಚಿನಲ್ಲಿರುವ ಹಾಲಗಿ ಗ್ರಾಮ. ಇಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳನ್ನು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ ಕೆಲವು ಸಂಗತಿಗಳು ಮನಸ್ಸಿಗೆ ತಂಪೆರೆಯುತ್ತವೆ ಮತ್ತೆ ಕೆಲವು ಕಚಗುಳಿ ಇಟ್ಟರೆ ಇನ್ನೂ ಕೆಲವು ಕಾಡುತ್ತಲೇ ಇರುತ್ತವೆ.  ಕೃತಿಯಲ್ಲಿ ಒಟ್ಟು ೧೨ ವಿವಿಧ ಕಥೆಗಳಿವೆ. ಇವೆಲ್ಲವೂ ನಮ್ಮನ್ನು ಒಂದರ ಹಿಂದೆ ಒಂದರಂತೆ ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತವೆ. ಧಾರವಾಡ ಕನ್ನಡದ ಮಾತುಗಳು ಓದುವಾಗ ಖುಷಿಕೊಡುತ್ತವೆ.  ಮೊದಲ ಕಥೆ ‘ಕ್ರಿಕೆಟ್ ಕೊಟ್ರೇಶಿ’. ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯ ಬಾಲ್‌ಗೆ ಫೋರ್ ಹ...
Image
   ಸಮಕಾಲೀನ ಘಟನೆಗಳಿಗೆ ಮುಖಾಮುಖಿಯಾಗುವ ‘ದೇವರು ಅರೆಸ್ಟ್ ಆದ’  ಹೊಸ ರೀತಿಯ ನಿರೂಪಣೆ, ಶೈಲಿ ಮತ್ತು ತಂತ್ರಗಳಿಂದ ಭಿನ್ನವಾದ ಕಥಾ ಸಂಕಲವೇ ‘ದೇವರು ಅರೆಸ್ಟ್ ಆದ’. ಇದು ಚೆನ್ನೈನಲ್ಲಿ ಉದ್ಯೋಗಿಯಾಗಿರುವ, ಮೂಲತಃ ಸೊರಬದವರಾದ ಶಿವಕುಮಾರ್ ಮಾವಲಿ ಅವರ ಚೊಚ್ಚಲ ಕಥಾ ಸಂಕಲನ. ಇದರಲ್ಲಿ ೧೬ ಸಣ್ಣ ಮತ್ತು ಆಕರ್ಷಕ ಕಥೆಗಳಿವೆ. ಗ್ರಾಮೀಣ ಹಿನ್ನೆಲೆಯವರಾದರೂ, ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ತಮ್ಮ ಅನುಭವಗಳನ್ನು ಅತ್ಯುತ್ತ್ತಮವಾಗಿ ಬೆಸೆದು ಹಾಗೂ ಯಾರೊಬ್ಬರ ಪ್ರಭಾವಕ್ಕೂ ಒಳಗಾಗದೆ, ಸ್ವಂತಿಕೆಯನ್ನು ಕಾಪಾಡಿಕೊಂಡು ಕಥೆ ಕಟ್ಟಿರುವುದು ಇಲ್ಲಿನ ವಿಶೇಷತೆ. ಇಲ್ಲಿನ  ಪ್ರತಿ ಕಥೆಯೂ ನಮ್ಮ ಅಂತರಂಗವನ್ನು ಶೋಧಿಸಿ, ಓದುಗನ ಅಂತರಾಳಕ್ಕಿಳಿದು, ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಅರ್ಥಪೂರ್ಣ ಮಾತುಕತೆಗಳು ಕಥೆಯ ಜೀವವನ್ನು ಮತ್ತಷ್ಟು ಸಶಕ್ತಗೊಳಿಸಿದರೆ, ಕೆಲವು ಸಂಭಾಷಣೆಗಳು ಮತ್ತಷ್ಟು ಗಟ್ಟಿತನ ತುಂಬಿವೆ. ಬಲು ಸೂಕ್ಷ್ಮವಾಗಿ ಹೇಳಬೇಕಾದ್ದನ್ನು ಹೇಳುವ ನಿರೂಪಣಾ ಶೈಲಿ ಸಹ ಮನಸೆಳೆಯುತ್ತದೆ.  ಬರಹಗಾರನ ಸಾಮಾಜಿಕ ಹೊಣೆ ಕೆಲವು ಕಥೆಗಳಲ್ಲಿ ವ್ಯಕ್ತವಾಗಿದೆ.      ಬದುಕಿಗೂ ಬರಹಕ್ಕೂ ಸಂಬಂಧವಿಲ್ಲದೆ ಜಗತ್ತಿಗೆಲ್ಲ ಬುದ್ಧಿ ಹೇಳುವ ಆಷಾಢಭೂತಿಗಳ ಬಣ್ಣವನ್ನು ಲೇಖಕರು  ಮೊದಲ ಕಥೆ ‘ದೇವರು ಅರೆಸ್ಟ್ ಆದ’ ಇದರಲ್ಲಿ ಬಯಲು ಮಾಡಿದ್ದಾರೆ. ದೇವರ ಇರುವಿಕೆಯ ಬಗ್ಗೆ ಚರ್ಚೆ ಮಾಡುವ ...
Image
 ಅತ್ಯಾಚಾರ, ದೌರ್ಜನ್ಯ ವಿರುದ್ಧದ ಕಾನೂನಿನ ಇಣುಕು ನೋಟದ   ‘ ಮುಳ್ಳ ಮೇಲಿನ ಸೆರಗು’ ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಅವುಗಳನ್ನು ನಿಯಂತ್ರಿಸುವ ಮತ್ತು ಹೋರಾಟ ಮಾಡುವ ಕುರಿತಂತೆ ಕಾನೂನು ಅಂಶಗಳ ಕುರಿತು ಹಲವು ನೆಲೆಗಳ ಸೃಷ್ಟಿಗಳನ್ನು  ಚರ್ಚಿಸುವ ಕೃತಿ ‘ಮುಳ್ಳ ಮೇಲಿನ ಸೆರಗು’. ತೀರ್ಥಹಳ್ಳಿಯವರಾದ, ಪ್ರಸ್ತುತ ಹೊನ್ನಾವರದ ಕವಲಕ್ಕಿಯಲ್ಲಿ ಪ್ರಸೂತಿ ತಜ್ಞೆಯಾಗಿರುವ ಬರಹಗಾರ್ತಿ, ಪ್ರಗತಿಪರ ಚಿಂತಕಿ, ಹೋರಾಟಗಾರ್ತಿ ಡಾ|| ಎಚ್. ಎಸ್. ಅನುಪಮಾ ಈ ಕೃತಿಯ ಲೇಖಕಿ. ಬರಲಿರುವ ಪೀಳಿಗೆಯು ಸೂಕ್ತ ಕಾನೂನು ಜ್ಞಾನ ಮತ್ತು ಲಿಂಗಸೂಕ್ಷ್ಮತೆಯನ್ನು ಕುಟುಂಬದಿಂದಲೇ ಪಡೆಯಬೇಕು ಎನ್ನುವುದು ಈ ಕೃತಿಯ ಆಶಯ. ವಿದ್ಯಾರ್ಥಿಗಳು ಮತ್ತು ತರುಣರನ್ನು ಗಮನದಲ್ಲಿಟ್ಟು ಅವಶ್ಯ ಮಾಹಿತಿ ನೀಡುವ ಸಲುವಾಗಿ ಇದನ್ನು ರಚಿಸಿದ್ದಾರೆ. ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಬೇಕಾದ ಹತ್ತಾರು ಪ್ರಮುಖ ಅಂಶಗಳು ಈ ಕೃತಿಯಲ್ಲಿದೆ.  ಕೋಮು ವಿಷಯವಿರಲಿ, ಲೈಂಗಿಕ ದೌರ್ಜನ್ಯವಿರಲಿ ದುರ್ಬಲನಾದವನು ಕಾನೂನನ್ನು ನಂಬಿಕೊಳ್ಳುವಂತಿಲ್ಲ ಎಂಬ ಶಂಕೆ ಕಾಡುತ್ತಿದೆ ಎನ್ನುವ ಕೃತಿಯು ಅಕ್ಷರಸ್ಥರಲ್ಲೂ ಸಹ ಈ ಬಗ್ಗೆ ಏನು ಮಾಡಬೇಕೆಂಬ ಹಾಗೂ ಕಾನೂನು ಪ್ರಕ್ರಿಯೆಗಳ ಬಗ್ಗೆ ಅವಶ್ಯಕ ಮಾಹಿತಿ ಇಲ್ಲದಿರುವುದನ್ನು ಮನಗಂಡು ಕೆಲವು ಮಾಹಿತಿಗಳನ್ನು ಕೃತಿಯಲ್ಲಿ  ನೀಡಲಾಗಿದೆ. ಹೋರಾಟ ಮಾಡುತ್ತಿರುವ ಹಲವು ಸಂಘ...
Image
  ಸ್ತ್ರೀ ಸಂವೇದನೆಯ ‘ಮೌನ ಮನದ ಮಾತುಗಳು’  ‘ಮೌನ ಮನದ ಮಾತುಗಳು’  ಇದು ನೆಲಮಂಗಲ ಸರಕರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ  ಫsರ್ಹಾನಾಜ್ ಮಸ್ಕಿ ಅವರ  ಚೊಚ್ಚಲ ಕವನ ಸಂಕಲನ. ಈ ಕೃತಿಯಲ್ಲಿ ಒಟ್ಟು ೪೪ ಕವಿತೆಗಳಿವೆ. ಹೆಣ್ಣು ಹೇಗಿರಬೇಕೆಂದು ತಿಳಿಸುವುದರ ಶೋಷಣೆ, ಜೊತೆಗೆ ಸಾಮಾಜಿಕ ಅನಿಷ್ಟ ಪಿಡುಗುಗಳು, ಪ್ರೀತಿ, ಪ್ರೇಮ, ಬಾಲ್ಯ, ಯೌವ್ವನ, ನಿರೀಕ್ಷೆ... ಹೀಗೆ ಹತ್ತು ಹಲವು ವಿಷಯಗಳಲ್ಲಿ ಸ್ತ್ರೀಯರ ಅಂತರಾಳವನ್ನು ಪರಿಚಯಿಸುವ ವಿಶಿಷ್ಟ ಪ್ರಯತ್ನವನ್ನು  ಮಾಡಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಸಮಾಜದ ಕಲ್ಯಾಣ, ಸಾಮಾಜಿಕ ನ್ಯಾಯ, ಸ್ತ್ರೀ ಸಬಲೀಕರಣ, ಸಾಮಾಜಿಕ ಕಳಕಳಿ ಇದೆ.  ಸಮಾಜದ ಮನದಾಳದ ಮಾತುಗಳನ್ನು ಮೌನವಾಗಿ ಆಲಿಸಿ ಮೌನ ಮನದ ಮಾತನ್ನಾಗಿಸಿ ಈ ಕೃತಿಯನ್ನು ರಚಿಸಿದ್ದಾರೆ. ವಿಶೇಷವಾಗಿ ಸ್ತ್ರೀ ಸಂವೇದನೆಗೆ ಆದ್ಯತೆ ಕೊಟ್ಟಿದ್ದಾರೆ. ಇಲ್ಲಿ ಸಾಮಾಜಿಕ ನ್ಯಾಯವೂ ಇದೆ, ಇಲ್ಲದವರ ಬಗೆಗಿನ ಕಾಳಜಿಯೂ ಇದೆ. ಸಮಾಜದ ಅನಿಷ್ಠಗಳೂ ಇವೆ. ಸಂಕಲನದ ಬಹುತೇಕ ಕವನಗಳು ಮಹಿಳೆಯರ ಬಗ್ಗೆಯೇ ಇವೆ. ಅಂತಿಮ ಕವನದವರೆಗೂ ಓದಿಸಿಕೊಂಡು ಹೋಗುವ ಶಕ್ತಿ ಈ ಕೃತಿಗೆ ಇದೆ. ಅತ್ಯುತ್ತಮ ಸಂದೇಶ ಸಾರುವ ಕವನಗಳ ಮೂಲಕ ಸಾಹಿತ್ಯಿಕ ಪ್ರಪಂಚದಲ್ಲಿ ತಮ್ಮ ಹೆಸರನ್ನು ಸ್ಥಾಪಿಸುವ ಎಲ್ಲಾ ಲಕ್ಷಣಗಳನ್ನು ಇಲ್ಲಿ ಕವಯತ್ರಿ ಪ್ರಕಟಿಸಿದ್ದಾರೆ.  ಮೊದಲ ಕವಿತೆ ‘ಚಹಾ ಅವಳು’ ಇದರಲ್ಲಿ ಲೇಖಕಿ ಚಹಾವನ್ನು ಸ್ತ್ರೀಯಾಗಿ ...
Image
  ಕಾಡುವ ಮಲೆನಾಡಿನ ನೆನಪುಗಳ  ‘ಅಂಗೈ ಅಗಲದ ಆಕಾಶ’ ............................................ ‘ಅಂಗೈ  ಅಗಲದ ಆಕಾಶ’ ಇದು ತೀರ್ಥಹಳ್ಳಿಯ ನಿವೃತ್ತ ಪ್ರಾಚಾರ್ಯೆ ಎಲ್ ಸಿ ಸುಮಿತ್ರಾ ಅವರ ಸ್ಮೃತಿ ಚಿತ್ರಗಳ ಕೃತಿ.  ಅವರು ಹುಟ್ಟಿ ಬೆಳೆದ, ಮಲೆನಾಡಿನ ಆಪ್ತತೆ ಮತ್ತು ರಮ್ಯತೆ, ಗಾಢವಾಗಿ ಬಾಧಿಸಿದ ಜೀವನ ಪ್ರೀತಿ, ಮಾನವ ಸಂಬಂಧ, ಹೆಣ್ಣು-ಗಂಡಿನ ದುಡಿಮೆಯ ಘನತೆಯ ಸೂಕ್ಷ್ಮತೆಯನ್ನು ಮಲೆನಾಡಿನ ದಟ್ಟ ಅರಣ್ಯಗಳಂತೆ ಕಟ್ಟಿಕೊಟ್ಟಿದ್ದಾರೆ. ಮಲೆನಾಡಿಗರು ಈ ಕೃತಿಯನ್ನು ಓದಿದಾಗ ಲೇಖಕಿ ಹೇಳಿದ ಅನುಭವ ಕಾಡುತ್ತದೆ. ಅದೇ ಬಾಲ್ಯ,  ಅದೇ ಪರಿಸರ,  ಅದೇ ನದಿ-ತೊರೆ,  ಅದೇ ಕೃಷಿ, ಅದೇ ಹುಡುಗಾಟ,  ಅದೇ ಅಜ್ಜಿಮನೆ. ಈ ಪುಸ್ತಕ ಓದುವಾಗ ಅವೆಲ್ಲ  ಕಣ್ಣೆದುರು ಹಾದುಹೋಗುತ್ತವೆ.   ಆಧುನಿಕತೆ ಭರಾಟೆಯಲ್ಲಿ ಅಂದಿನ ತಮ್ಮ ಬಾಲ್ಯ ಜೀವನ ಈಗ ಕಂಡುಬಾರದೆ ಇರುವುದು, ಹಿಂದಿನ ಪರಿಸರ ಮಾಯವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತ್ತಪಡಿಸುತ್ತಾ, ಗ್ರ್ರಾಮ ಭಾರತ ಹೊರಜಗತ್ತಿಗೆ ಬೆಸೆಯುತ್ತಿರುವುದನ್ನು ಹೇಳುತ್ತಾರೆ. ಸ್ಥಳೀಯ ಆಚಾರ, ಆಹಾರ, ತಿಂಡಿ, ಆಚರಣೆ, ಸಂಪ್ರದಾಯಗಳನ್ನು ನೆನಪಿಸುತ್ತಾರೆ. ಪ್ರಸ್ತುತ ಕೃತಿಯಲ್ಲಿ ಒಟ್ಟು ೧೭ ಬರಹಗಳಿವೆ.  ಅಂದು ಬಾಲ್ಯದಲ್ಲಿ ಧರಿಸುತ್ತಿದ್ದ ಲಂಗದಿಂದ ಆರಂಭಿಸಿ ಅವುಗಳನ್ನು ಧರಿಸಿದಾಗ ಸಿಗುತ್ತಿದ್ದ ಆನಂದ, ವಿವಿಧ ನಮೂನೆಯ ಲಂಗಗಳ ವರ್ಣನೆ, ಅನುಭವವನ್ನು...
Image
   ಮಕ್ಕಳೊಡನೆ ಕಲಿಯುತ್ತಾ ಬದುಕುವ ಅನುಭವಗಳ ಹೂರಣ  ‘ಮಿಸ್ಸಿನ ಡೈರಿ’  “ಮಿಸ್ಸಿನ ಡೈರಿ” ಶಿಕ್ಷಕಿ ಮೇದಿನಿ ಕೆಸವಿನಮನೆ ಅವರ  ಅಪರೂಪದ ಅನುಭವಗಳ, ವಿಶಿಷ್ಟ ಶೈಲಿಯ, ಧನಾತ್ಮಕ ಚಿಂತನೆಗಳೆಡೆ ಮುಖಮಾಡಿರುವ  ಬರಹಗಳ ಕೃತಿ. ಶಿಕ್ಷಕರಾದವರು ತಮ್ಮ ಅನುಭವಗಳನ್ನು ಹೇಗೆ ಕಟ್ಟಿಕೊಡಬಹುದೆನ್ನುವುದಕ್ಕ ಇದು ಉದಾಹರಣೆ.  ಮಕ್ಕಳ  ಪ್ರೀತಿ- ಮುಗ್ಧತೆ,  ಅವರೊಡನೆ ಕಳೆದ ಕಾಲ, ಕಾಡಿದ ಪರಿ, ಕಲಿಸಿದ ಪಾಠ, ಕಲಿತ ಪಾಠಗಳೊಂದಿಗೆ ಸವಿಯಾಗಿ ಬರಹರೂಪಕ್ಕಿಳಿಸಿದವರು ವಿರಳಾತಿ ವಿರಳ. ಅವರ ಕುತೂಹಲಕ್ಕೆ ಕಿವಿಯಾಗಿ, ಆಸಕ್ತಿಗೆ ದನಿಯಾಗಿ, ತಾಳ್ಮೆಯಿಂದ ಅವರೊಡನೆ ಬೆರೆಯುವ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಅತ್ಯಂತ ಕುಗ್ರಾಮದ ಸರಕಾರಿ ಶಾಲೆಯಲ್ಲಿ ಟೀಚರ್ ಆಗಿ, ಮಕ್ಕಳ ಪಾಲಿನ ಮಿಸ್, ಗೆಳತಿ, ತಾಯಿಯಾಗಿ,  ಪ್ರೀತಿ- ಶಿಕ್ಷೆ- ಭಯದೊಂದಿಗೆ ಅವರನ್ನು ಮಕ್ಕಳಂತೆ ಬೆಳೆಸುವ ಜವಾಬ್ದಾರಿ ಹೊತ್ತ ಶಿಕ್ಷಕಿ ಬಾಲ್ಯವೆನ್ನುವುದು ಸಮೃದ್ಧವಾಗಿದ್ದರೆ  ಬದುಕಿನಲ್ಲಿ ಭಾವ ಎಂದೂ ಬತ್ತುವುದಿಲ್ಲ ಎಂಬ ವಿಶ್ವಾಸ ಹೊಂದಿದವರು. ಹಳ್ಳಿಯ ಮುಗ್ಧ ಮಕ್ಕಳ ದೈನಂದಿನ ಆಡುಮಾತುಗಳನ್ನು ಅವರದೇ ಧಾಟಿಯಲ್ಲಿ ನಿರೂಪಿಸುತ್ತಾ,  ಶಾಲೆಯಲ್ಲಿ ನಡೆಯುವ ಸಣ್ಣ ಘಟನೆಗಳನ್ನೂ  ಮನಸೆಳೆಯುವ ರೀತಿಯಲ್ಲಿ “ಮಿಸ್ಸಿನ ಡೈರಿ”ಇದೆ. ಅತ್ಯಂತ ಸರಳ  ಮತ್ತು ಆಕರ್ಷಕ ಭಾಷೆಯಲ್ಲಿ ಇಲ್ಲಿನ ಬರಹಗಳನ್ನು...
Image
 ಪ್ರೇಮ, ಕಾಮನೆಗಳ ಎರಕದ  “ಕಾಡುವ ಹುಡುಗನ ಹಾಡು”*    “ಕಾಡುವ ಹುಡುಗನ ಹಾಡು” ಇದು ಶಿವಮೊಗ್ಗದ ಕಟೀಲು ಅಶೋಕ್ ಪೈ ಕಾಲೇಜಿನ ಉಪನ್ಯಾಸಕಿ ಬಿ ಎಸ್ ಅಂಜುಂ ಅವರ ಚೊಚ್ಚಲ ಕೃತಿ. ಒಲವ ಹಾಯಿದೋಣಿ ಎಂಬ ಅಡಿಬರಹ ಹೊಂದಿರುವ, ಪ್ರೇಮವೇ ಕಾವ್ಯವಾಗಿರುವ ಕೃತಿ ಇದು. ಯುವತಿಯೊಬ್ಬಳು ತನ್ನ ಪ್ರೇಮಿಗೆ ಪ್ರೇಮವನ್ನು ನಿವೇದಿಸುವ ಪರಿ ಇದರಲ್ಲಿದೆ. ಇಲ್ಲಿನ ಚುಟುಕು ಅಥವಾ ಕವನಗಳಲ್ಲ್ಲಿ ಅಸಂಖ್ಯಾತ ಉಪಮೇಯಗಳನ್ನು ಬಳಸಲಾಗಿದೆ. ತನ್ನಲ್ಲಿರುವ ಪ್ರೀತಿಯನ್ನು ಯುವತಿ ಯಾವ್ಯಾವ ರೀತಿಯಲ್ಲಿ ವಿವರಿಸಲು ಸಾಧ್ಯವೋ ಅವೆಲ್ಲ ಮಾರ್ಗವನ್ನು ಕೃತಿಯ ಲೇಖಕಿ ತೋರಿಸಿದ್ದಾರೆ. ವಯಸ್ಸನ್ನು, ಅನುಭವವನ್ನು ಮೀರಿದ  ಹರಿಹರೆಯದ ಪ್ರೇಮದ ಸಹಜ ಭಾವ ಇಲ್ಲದರಲ್ಲಿ ಚಿತ್ರಿವಾಗಿದೆ. ಪ್ರೀತಿ ಎಂದರೇನು ಎನ್ನುವುದರ ಅರ್ಥವನ್ನು ಅವರೇ ಕೃತಿಯಲ್ಲಿ ಒಂದೆಡೆ ಬರೆದಿದ್ದಾರೆ- * *ಪ್ರೀತಿ ಅರ್ಥ ಮಾಡಿಕೊಂಡರೆ ಅದೊಂದು ಅನುಭವ, ಕೇವಲ ನೋಡುವುದಾದರೆ ಅದೊಂದು ಸಂಬಂಧ, ಹೇಳುವುದಾದರೆ ಅದೊಂದು ಸುಂದರ ಶಬ್ದ, ಇಷ್ಟಪಟ್ಟರೆ ಅದೊಂದು ಜೀವನ,  ನಿಭಾಯಿಸುವುದಾದರೆ  ಅದೊಂದು ಆಣೆ, ಸಿಕ್ಕುಬಿಟ್ಟರೆ ಅದೇ ಸ್ವರ್ಗ* ಪ್ರೀತಿ-ಪ್ರೇಮದ ಬಗ್ಗೆ ಸಾಕಷ್ಟು ಕೃತಿ ಬಂದಿದೆಯಾದರೂ ಅವುಗಳಂತೆ ಈ ಕೃತಿ ಇಲ್ಲ.  ಹಾಗಾಗಿ ಒಮ್ಮೆ ಇದನ್ನು ಓದಬೇಕೆನಿಸುತ್ತದೆ. ಈ ಕೃತಿಯ ವಿಶೇಷವೆಂದರೆ, ಇಲ್ಲಿ  ಒಲವನ್ನು ನಿವೇದಿಸಿರುವ ರೀತಿ ಓದುಗನನ್ನು ಸೆಳೆಯುತ್ತದೆ....