Posts

Showing posts from August, 2026
Image
 ಎರಡು ತಲೆಮಾರುಗಳ ಸ್ಥಿತ್ಯಂತರದ  ‘ಹರಿವ ನಿಲ್ಲಿಸದಿರು ತಾಯಿ’   ಸರಸ್ವತಿ ನದಿ ಮೂಲದ ಗೌಡ ಸಾರಸ್ವತ ಸಮಾಜವು ೧೨ ವರ್ಷಗಳ ಭೀಕರ ಬರಗಾಲದ ಬಳಿಕ ಸರಸ್ವತಿಯ ಒಡಲು ಖಾಲಿಯಾದಾಗ ದಕ್ಷಿಣದತ್ತ  ವಲಸೆ ಬರುವುದು, ಆಗ ಪೋರ್ತುಗೀಸರ ಆಡಳಿತವಿದ್ದುದರಿಂದ ಅವರಿಂದ ದಾಳಿ ತಪ್ಪಿಸಿಕೊಳ್ಳಲು, ಧರ್ಮ ಭ್ರಷ್ಟರಾಗದಿರಲು, ಸಮಾಜದ ಇತಿಹಾಸ ಕಾಪಾಡಲು, ಅವರು ನಡೆಸಿದ ಹೋರಾಟ, ವಲಸೆ ಹೊರಟ ಸಹಸ್ರಾರು ಕುಟುಂಬಗಳು ಪಶ್ಚಿಮ ಕರಾವಳಿಯ ಉದ್ದಕ್ಕೂ ನೆಲೆಸುವುದು, ಹೊಸ ಜೀವನಕ್ಕಾಗಿ ಸಂಘರ್ಷ ಆರಂಭಿಸುವುದು, ಪ್ರಸ್ತುತ ಈ ಸಮಾಜವು ಮರೆಯಾಗುತ್ತಿರುವ ಸಂಪ್ರದಾಯ, ಸಂಸ್ಕೃತಿ ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವುದು   ‘ಹರಿವ ನಿಲ್ಲಿಸದಿರು ತಾಯಿ’   ಕಾದಂಬರಿಯ ಸಾರಾಂಶ.    ಲೇಖಕ ಮನೋಹರ್ ಪೈ ಅವರ ಈ ಕೃತಿ ಗೌಡ ಸಾರಸ್ವತ ಸಮಾಜದ ಮೇಲೆ ಕ್ಷಕಿರಣ ಬೀರುವುದಲ್ಲದೆ, ಅವರ ಹಬ್ಬ- ಹರಿದಿನಗಳ ಆಚರಣೆ, ಆಹಾರ ಪದ್ದತಿ, ಸಂಪ್ರದಾಯವನ್ನು ಕಟ್ಟಿಕೊಡುವ ಮೂಲಕ ಒಂದು ರೀತಿಯಲ್ಲಿ ಐತಿಹಾಸಿಕ, ಸಾಂಸ್ಕೃತಿಕ ವಿಷಯವನ್ನೂ ಈ ಕಾದಂಬರಿ ತೆರೆದಿಟ್ಟಿದೆ.  ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ  ಕೆಲವು ಬೆಳವಣಿಗೆಗಳನ್ನು ಮತ್ತು ಯುವಜನರ ಮನಃಸ್ಥಿತಿಯನ್ನು ಮನೋಜ್ಞವಾಗಿ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ಇದು ಇಂದು ಬಹುತೇಕ ಎಲ್ಲ ಸಮಾಜಗಳ ಸಮಸ್ಯೆಯೂ ಹೌದು.  ವಿವಾಹ ಬಂಧನದ ಬಗ್ಗೆ ನಿ...
Image
 ಕಾವ್ಯಪ್ರೇಮಿಗಳ ಮನತುಂಬುವ ‘ಆಂತರ್ಯ’  ‘ಆಂತರ್ಯ’ ಇದು ಯುವ ಕವಿ ಅಜಿತ್ ಪೂಜಾರಿ ಮುದ್ರಾಡಿ ಇವರ ಪ್ರಥಮ ಕವನ ಸಂಕಲನ. ನಾಳೆಗಳ ಭರವಸೆ ಹೊತ್ತ, ಮನದ ಭಾವಗಳನ್ನು ಅನುವಾದ ಕ್ಷಣವಿದೆ. ಆಂತರ್ಯದ ರಸಧಾರೆಯ, ಮನವನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಬಿತ್ತರಿಸುವ ಕಾವ್ಯಧಾರೆ ಇದೆ. ಸರಳ, ಸುಂದರ, ಚಿಂತನೆಯ ಹೊನಲು, ಅನುಭವದ ಜಲ, ಜೀವನ, ಅನುಭವ ಈ ಕಾವ್ಯದಲ್ಲಿ ಮಿಡಿತವಾಗಿದೆ. ಆದ್ದರಿಂದ ಇಲ್ಲಿನ ಬಹುತೇಕ ಕವನಗಳು ಕಾವ್ಯಪ್ರೇಮಿಗಳ ಮನತುಂಬುವಲ್ಲಿ ಯಶಸ್ವಿಯಾಗುತ್ತವೆ.  ಸಂಕಲನದಲ್ಲಿ ರಾಷ್ಟ್ರಪ್ರೇಮವಿದೆ. ರಾಜಕೀಯ ಪ್ರಜ್ಞೆ ಇದೆ. ಪರಿಸರ ಪ್ರೀತಿ ಇದೆ. ಭಾಷೆಯು ಸರಳತೆಯಿಂದ ಕೂಡಿದೆ. ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆ ಇಲ್ಲಿ ಕಂಡುಬರುತ್ತದೆ. ಇವೆಲ್ಲವುಗಳನ್ನು ಸೇರಿಸಿ ತುಡಿತ- ಮಿಡಿತಗಳನ್ನು ಕವನದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.  ಒಟ್ಟು ೫೨ ಕವನಗಳಿವೆ. ಮಳೆಯ ಕುರಿತು ಮೂರು ಕವನಗಳು ಇವೆ. ಪರಿಸರ, ಪ್ರಕೃತಿ, ನದಿ, ಹೊಳೆ, ಮಳೆ ಮುಂತಾದವು ಕವಿಗೆ ಹೆಚ್ಚು ಆಪ್ತವಾದಂತೆ ಕಂಡುಬರುತ್ತದೆ. ಕವನಗಳ ಕುರಿತು:   ಮೊದಲ ಕವನ ‘ತೊಟ್ಟಿಲ ಮಗು’ ಇದರಲ್ಲಿ ತಾ ಕಾವ್ಯಲೋಕದಲ್ಲಿ ತೊಟ್ಟಿಲ ಮಗು ಎನ್ನುವುದನ್ನು ಬರೆದುಕೊಂಡಿದ್ದಾರೆ.  ನಿಮ್ಮೊಡಲ ಅಕ್ಕರೆಗೆ ಬೆಸೆದಿಹುದು ನನ್ನಿ ಜೀವಸೆಲೆ  ಕೈ ಹಿಡಿದು ನಡೆಸಬಲ್ಲಿರಾ, ನಾನಿನ್ನೂ ತೊಟ್ಟಿಲ ಮಗು  ಮನದ ಭಾವನೆಗಳನ್ನು ಹೊರದಬ್ಬಲನುವಾಗಿರುವ ತೊಟ್ಟಿಲ ...
Image
 ಬದುಕಿನ ವಿವಿಧ ಮುಖಗಳ ದರ್ಶನದ  ‘ತಾವರೆದೇಟು’  ‘ತಾವರೆದೇಟು’ ವಿಷಯ ವೈವಿಧ್ಯಗಳಿಂದ ಕೂಡಿದ, ಪ್ರಸ್ತುತ ಸಮಾಜದ ವಿವಿಧ ಮುಖಗಳನ್ನು ಚಿತ್ರಿಸುವ ಕಥಾ ಸಂಕಲನ. ಬರಹಗಾರ್ತಿ ಉಷಾ ನರಸಿಂಹನ್ ಅವರ ಕೃತಿ ಇದು. ಸಮೃದ್ಧ ಭಾಷಾ ಬಳಕೆ ಮೂಲಕ ಮನುಷ್ಯನ ಬದುಕಿನ ಅದರಲ್ಲೂ ಕೌಟುಂಬಿಕ ಹಾಗೂ ದಾಂಪತ್ಯದಲ್ಲಿ ಎದುರಾಗುವ ಬವಣೆಗಳನ್ನೇ ವಿಷಯವನ್ನಾಗಿಸಿಕೊಂಡು ಅದರ ಮೇಲೆ ಕಥೆಯ ಚಿತ್ರಣವನ್ನು ಸರಾಗವಾಗಿ ಕೆತ್ತಿದ್ದಾರೆ.  ಲೇಖಕಿಯ ಕಲಾತ್ಮಕ ಮನಸ್ಸು ಕಥೆಯನ್ನು ಒಂದು ಸುಂದರವಾದ ಚೌಕಟ್ಟಿನಲ್ಲಿ ತಂದು ನಿಲ್ಲಿಸಿರುವುದನ್ನು ಇಲ್ಲಿ ಕಾಣಬಹುದು. ಕಥೆಯ ವಸ್ತು ಮಾತ್ರವಲ್ಲ, ಅದನ್ನು ನಿರ್ವಹಿಸಿದ, ನಿಭಾಯಿಸಿದ ರೀತಿ ಬೆರಗುಗೊಳಿಸುವಂತದ್ದು. ಕಥೆಯು ಕೇವಲ ಕಾವ್ಯಮಯವಾಗಿ ಇರದೆ ಇಲ್ಲಿನ ಪಾತ್ರಗಳು ಸಕಾರಾತ್ಮಕತೆಯ ಕಡೆಗೆ ಚಲಿಸುವಂತೆ ಮಾಡಿದ್ದಾರೆ. ಸನ್ನಿವೇಶಗಳನ್ನು ವಿಶ್ಲೇಷಿಸುತ್ತಾ ಕಥೆಗೆ ಒಂದಷ್ಟು ಸೊಗಸನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ ವಿಭಿನ್ನ ರೀತಿಯ ನಿರೂಪಣೆ ಹಾಗೂ ನಾಟಕೀಯ ಸಂಭಾಷಣೆಗಳ ಪ್ರಯೋಗವನ್ನು ಇಲ್ಲಿ ಕಾಣಬಹುದು.  ಸಂಕಲನದಲ್ಲಿ ಒಟ್ಟೂ ೧೪ ಕಥೆಗಳಿವೆ.  ಕಥಾ ಸಾರಾಂಶ: ‘ಸೀರೆ’  ಅನಾಥನಾಗಿದ್ದ ಬಾಲಕ ಸುಬ್ಬ ಅಗಸನಾದ ತನ್ನ ಮಾವನ ಮನೆಗೆ ಬಂದುಳಿದಾಗ ಮಾವನ ವೃತ್ತಿಯಲ್ಲಿಯೇ ಮುಂದುವರೆಯುತ್ತಾನೆ. ಆಸ್ಪತ್ರೆಯ ಬಟ್ಟೆ ಬರೆಗಳನ್ನು ಒಗೆದು ಮಾರನೇ ದಿನ ತೆಗೆದುಕೊಂಡು ಹೋಗಿ ಕೊಡುತ್ತಾನೆ. ಹೆಣದ ಮೇಲ...
Image
 ಮಜ ಕೊಡುವ  ಸಾಲದ ಜೋಕುಗಳು   ಹಿರಯ ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರು  ತಮ್ಮ ಪತ್ರಿಕೆಗಳಲ್ಲಿ ಜನರಿಂದ ಪಡೆದು ಪ್ರಕಟಿಸಿದ ಜೋಕುಗಳು ಇದರಲ್ಲಿವೆ.  ಈ ಜೋಕ್‌ಗಳೆಲ್ಲ ‘ಸಾಲದ ಜೋಕುಗಳು’ ಎಂಬ ತಲೆ ಬರಹದಲ್ಲಿ ಪ್ರಕಟವಾಗಿದೆ.  ಬಹಳ ಖರ್ಚಿಲ್ಲದೆ ನಮ್ಮನ್ನು ನಗಿಸುವ ಏಕೈಕ ಅಸ್ತ್ರವೆಂದರೆ ಜೋಕುಗಳು ಅಥವಾ ನಗೆ ಬರಹಗಳು. ಈ ಜೋಕುಗಳು ಸಮಯೋಚಿತವಾಗಿದ್ದು ಬದುಕಿಗೆ ಅಳವಡಿಕೆಯಾಗುವಂತಿದ್ದರಂತೂ ಅದರಿಂದ ಸಿಗುವ ಮಜವೇ ಬೇರೆ. ಇಂತಹವು ಎಷ್ಟಿದ್ದರೂ ಇನ್ನೂ ಬೇಕು ಎನ್ನುವಂತಿರುತ್ತವೆ.  ಈ ಕೃತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಓದುಗರು ಕಳಿಸುತ್ತಿದ್ದ, ಕಿರುನಗೆ ಮೂಡಿಸುವ ಜೋಕುಗಳನ್ನು ವಿಶ್ವೇಶ್ವರ ಭಟ್ ಕಟ್ಟಿಕೊಟ್ಟಿದ್ದಾರೆ. ಈ ಜೋಕುಗಳಲ್ಲಿಯೇ ಹೊಸ ಜೋಕು ಹುಟ್ಟಿಕೊಳ್ಳುತ್ತವೆ. ಜೋಕುಗಳನ್ನು ಹಾರಾಡಲು ಬಿಟ್ಟರೆ ಅದು ಚಂದ. ಇಲ್ಲಿ ಮುಖ್ಯವಾಗಿ ನಗುವಿದೆ, ಕಚಗುಳಿ ಇದೆ. ಸುಲಭದ ಭಾಷೆ, ಅರ್ಥವಾಗುವ ಸರಳ ಶೈಲಿ ಇದೆ. ನವಿರಾದ ಮನಸ್ಸಿಗೆ ನಗಿಸುವ ಶ್ರಮವಿಲ್ಲ.  ಇಲ್ಲಿನ ಜೋಕುಗಳು ಸುಖಪ್ರಸವವಾದ ಸಲೀಸು ಪ್ರಹಸನಗಳು ಎಂದು ಲೇಖಕ ಹೇಳುತ್ತಾರೆ. ಗಂಭೀರವಾದ ಸಭೆಯಲ್ಲಿ ಉಪನ್ಯಾಸಕನೊಬ್ಬ ಭಾಷಣ ಮುಂದುವರೆಸಿದಾಗ ಸಭೆ ಗಂಭೀರವಾಗಿಯೇ ಕೇಳುತ್ತಿರುತ್ತದೆ. ಭಾಷಣಕಾರ ತನ್ನ ಭಾಷಾ ಪ್ರಯೋಗದೊಳಗೆ ಏನೋ ತಪ್ಪು ಮಾಡಿದಾಗ ಇಡೀ ಸಭೆಯೇ ಗೊಳ್ ಎಂದು ನಗುತ್ತದೆ. ಇದು ಎಲ್ಲರನ್ನೂ ರಿಲೀಫ್‌ಗೆ ತರುತ್ತದೆ. ಆ ರಿಲೀಫ್...
Image
  ಬದುಕಿಗೆ ಹತ್ತಿರವಾಗುವ ‘ಮುಷ್ಟಿ ಗ್ರಾಹ್ಯ’   ‘ಮುಷ್ಟಿ ಗ್ರಾಹ್ಯ’ ಪ್ರತಿಯೊಂದು ಮನದ ಭಾವನೆ, ಕಲ್ಪನೆಗಳ ಜೊತೆಗೆ ಸಮಷ್ಟಿ ಬದುಕಿನ ಹಲವಾರು ಮಜಲುಗಳನ್ನು ಕೆಲವೇ ಪಾತ್ರಗಳ ಮೂಲಕ ಮತ್ತು ಸನ್ನಿವೇಶಗಳ ಮೂಲಕ ಓದುಗರೆದುರು ತೆರೆದಿಡುವ ಕಥಾಹಂದರವಾಗಿದೆ. ಅತ್ಯಂತ ಸಲೀಸಾಗಿ ಕಥೆಗಳನ್ನು ಸುಂದರವಾಗಿ ಲೇಖಕ ವಿದ್ಯಾಧರ ಮುತಾಲಿಕ್ ದೇಸಾಯಿ ಇಲ್ಲಿ ನೇಯ್ದಿದ್ದನ್ನು ಕಾಣಬಹುದು.  ಇಲ್ಲಿನ ಕಥೆಗಳೆಲ್ಲವೂ ನಮ್ಮ ಸುತ್ತಮುತ್ತ ನಡೆಯುವ ವಿಚಾರಕ್ಕೆ ಸಂಬಂಧಪಟ್ಟವು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನಜೀವನದ ಮೇಲೆ ಬೆಳಕು ಚೆಲ್ಲುವಂತಹ ವಿಷಯವನ್ನು ಹೊಂದಿವೆ. ಇದರಿಂದ ಇದು ನಮ್ಮನ್ನು ಆಕರ್ಷಿಸುತ್ತದೆ. ಒಟ್ಟು ೧೨ ಕತೆಗಳ ಗುಚ್ಛ ಇದಾಗಿದ್ದು,  ಸೃಜನಶೀಲವಾಗಿ ಕಥೆಗಳು ತೆರೆದುಕೊಂಡಿವೆ. ಬದುಕಿಗೆ ಹತ್ತಿರವಾಗುವಂತಹ ಇಲ್ಲಿನ ಕಥೆಗಳು ಓದುಗರಿಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ  ಕಥೆ ಹೇಳುವೆ    ಮದುವೆಯ ವಯಸ್ಸು ಹೆಚ್ಚುತ್ತಿದ್ದರೂ ಅವಿವಾಹಿತೆಯಾಗಿದ್ದ ವಸು ಹೊಸ ಕನಸು ಕಾಣುವ ಕಥೆ ಇದು. ಕಿಟ್ಟಿ ಎನ್ನುವವ ವಸುಗಿಂತ ಮೂರು ವರ್ಷ ದೊಡ್ಡವ. ತಮ್ಮ ಮಗನಂತೆ ವಸು ಪಾಲಕರು ಬೆಳೆಸಿದ್ದರು. ಬಾಲ್ಯ ಸಹಜ ಸಲುಗೆ ಇಬ್ಬರಲ್ಲಿಯೂ ಇತ್ತು. ವಸುನನ್ನು ಸೋದರ ಮಾವನ ಮಗ ರಾಮನ ಜೊತೆ ಮದುವೆ ನಡೆಸುವ ಪ್ರಸ್ತಾಪ ನಡೆದಿತ್ತು. ಕಿಟ್ಟಿ ಈ ಮಧ್ಯೆ ಹೈಸ್ಕೂಲ್ ಶಿಕ್ಷಕನಾಗುವುದು, ಆತನಿಗೆ ವಸು ಆಗಾಗ ಪತ್ರ ಬರೆಯುತ್ತಾ...