ಮದಕರಿ ನಾಯಕನ ದುರಂತ ಕಥೆಯ ದುರ್ಗಾಸ್ತಮಾನ ‘ದುರ್ಗಸ್ತಮಾನ’ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ತ. ರಾ. ಸು. ಎಂದೇ ಹೆಸರಾದ ತಳುಕಿನ ಸುಬ್ಬರಾವ್ ಅವರ ಐತಿಹಾಸಿಕ ಕಾದಂಬರಿಗಲ್ಲಿ ಇದು ಒಂದು. ಈ ಕಾದಂಬರಿ ಚಿತ್ರದುರ್ಗ ಕೋಟೆಯನ್ನು ಆಳಿದ ವೀರ ಅರಸು ಮದಕರಿ ನಾಯಕನ ಕುರಿತಾಗಿ ಇದೆ. ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ ಅದಾಗಿತ್ತು. ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ್ದರು ಪಾಳೆಯಗಾರರು. ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಂದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣೆಸಿದ ಏಕೈಕ ಗಂಡು ಪಾಳೆಯಗಾರ ಚಿತ್ರದುರ್ಗದ ಮದಕರಿನಾಯಕ. ಮದಕರಿನಾಯಕನ ದುರಂತ ಒಂದು ನಾಡಿನ ದುರಂತ. ಆ ಕಥೆಯನ್ನೇ ಹೇಳುವ ಈ ’ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲವನ್ನು ತ. ರಾ. ಸು. ಇದರಲ್ಲಿ ತೋರಿಸಿದ್ದಾರೆ. ಮುನ್ನುಡಿಯಲ್ಲಿ ಸ್ವತಃ ತರಾಸು ಅವರೇ ...