Posts

Image
 ಮದಕರಿ ನಾಯಕನ ದುರಂತ ಕಥೆಯ   ದುರ್ಗಾಸ್ತಮಾನ  ‘ದುರ್ಗಸ್ತಮಾನ’  ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ತ. ರಾ. ಸು. ಎಂದೇ ಹೆಸರಾದ ತಳುಕಿನ ಸುಬ್ಬರಾವ್ ಅವರ ಐತಿಹಾಸಿಕ ಕಾದಂಬರಿಗಲ್ಲಿ ಇದು ಒಂದು.  ಈ ಕಾದಂಬರಿ ಚಿತ್ರದುರ್ಗ ಕೋಟೆಯನ್ನು ಆಳಿದ ವೀರ ಅರಸು ಮದಕರಿ ನಾಯಕನ ಕುರಿತಾಗಿ ಇದೆ. ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ ಅದಾಗಿತ್ತು. ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ್ದರು ಪಾಳೆಯಗಾರರು. ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಂದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣೆಸಿದ ಏಕೈಕ ಗಂಡು ಪಾಳೆಯಗಾರ ಚಿತ್ರದುರ್ಗದ ಮದಕರಿನಾಯಕ. ಮದಕರಿನಾಯಕನ ದುರಂತ ಒಂದು ನಾಡಿನ ದುರಂತ. ಆ ಕಥೆಯನ್ನೇ ಹೇಳುವ ಈ ’ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲವನ್ನು ತ. ರಾ. ಸು. ಇದರಲ್ಲಿ ತೋರಿಸಿದ್ದಾರೆ. ಮುನ್ನುಡಿಯಲ್ಲಿ  ಸ್ವತಃ ತರಾಸು ಅವರೇ ...
Image
 ಸ್ತ್ರೀ- ಪುರುಷ ಸಮಾನತೆಯ ಸಾಕ್ಷಾತ್ಕಾರದ  ‘ಚಿತ್ರಾಂಗದಾ’  ವಿಶ್ವಕವಿ ರವೀಂದ್ರನಾಥ ಠಾಕೂರರ ಏಕಾಂಕ ನಾಟಕ ’ಚಿತ್ರ’ ದ ಕಥೆಯನ್ನು  ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅತ್ಯಂತ ಸೊಗಸಾಗಿ  ಖಂಡಕಾವ್ಯದ ರೂಪದಲ್ಲಿ ಕನ್ನಡೀಕರಿಸಿದವರು ದಿ.  ಜಿ ಎಸ್.  ಶಾಮಣ್ಣ ಅವರು.  ಮಣಿಪುರದ ರಾಜಕುಮಾರಿ ಚಿತ್ರಾಂಗದೆ ಮತ್ತು ಅರ್ಜುನನ ಪ್ರೇಮಕಥೆಯೇ ಈ  ಕೃತಿಯ ಹೂರಣ. ಪ್ರಕೃತಿಪ್ರೇಮ ಮತ್ತು ಮಾನವೀಯ ಮೌಲ್ಯಗಳ ಸಮ್ಮಿಲನದ ಅನಾವರಣವಾಗಿ ತೆರೆದುಕೊಳ್ಳುವ ಈ ಖಂಡಕಾವ್ಯ ತನ್ನ ಓಘ ಮತ್ತು ಲಯಬದ್ಧತೆಯಿಂದಾಗಿ ಸಹೃದಯ ಓದುಗರನ್ನು ಮಂತ್ರಮುಗ್ಧಗೊಳಿಸುತ್ತದೆ.     ಯಕ್ಷಗಾನ,  ಪೌರಾಣಿಕ ನಾಟಕ ಮತ್ತಿತರ ಕಲಾ ಪ್ರಕಾರಗಳಲ್ಲಿ ಚಿತ್ರಾಂಗದೆ ಮಣಿಪುರದ ರಾಜ  ಚಿತ್ರವಾಹನನ ಮಗಳು.  ಅರ್ಜುನನ ಹೆಂಡತಿಯರಲ್ಲಿ ಒಬ್ಬಳು. ಅತ್ಯಂತ ಧೈರ್ಯಶಾಲಿ,  ಸಮರಕಲಾ ನಿಪುಣೆ, ಯೋಧ ರಾಜಕುಮಾರಿ. ಅರ್ಜುನ ವನವಾಸದ ಸಮಯದಲ್ಲಿ ಮಣಿಪುರಕ್ಕೆ ಆಗಮಿಸುವುದು, ಅವಳ ಸೌಂದರ್ಯಕ್ಕೆ ಮಾರುಹೋಗಿ ವಿವಾಹವಾಗುವುದು, ಅವರೀರ್ವರ ಪ್ರೇಮದ ಕುರುಹಾಗಿ ಬಬ್ರುವಾಹನ ಜನಿಸುವುದು ಇತ್ಯಾದಿ.  ಆದರೆ ಇಲ್ಲಿಯ ‘ಚಿತ್ರಾಂಗದೆ’ಯ ಸನ್ನಿವೇಶವೇ ಬೇರೆ. ಮಣಿಪುರದ ರಾಜನಿಗೆ ಗಂಡು ಮಕ್ಕಳಿಲ್ಲದ ಕಾರಣ ಮಗಳನ್ನೇ ಮಗನಂತೆ ಬೆಳೆಸುವುದು, ಯುದ್ಧ ಕಲೆಯಲ್ಲಿ ನಿಪುಣೆಯಾದ ಆಕೆ ರಾಜ್ಯ ರಕ್ಷಣೆಯ  ಹೊಣೆ ಹೊತ್ತುನಿಲ್ಲು...
Image
   ಸ್ವಾನುಭವ ಸಂಕಟದ ಕಥನದ ‘ಸುಚೇಷ್ಟೆ’  ‘ಸುಚೇಷ್ಟೆ’ ಇದು ಪ್ರಾಧ್ಯಾಪಕಿ ಸುಚೇತನಾ ಪೈ ಅವರ ಸ್ವಾನುಭವ ಸಂಕಟಗಳ ಸಂಕಥನ. ಪ್ರಸ್ತುತ ಕೃತಿಯಲ್ಲಿ ಲೇಖಕಿ ತನ್ನ ಜೀವನದಲ್ಲಿ ನಡೆದ ಹಲವು ಅನುಭವಗಳನ್ನು ದಾಖಲಿಸಿದ್ದಾರೆ. ಈ ಜೀವನಾನುಭವಗಳನ್ನು ಸ್ವಲ್ಪ ವಾರೆ ನೋಟದಿಂದ ನೋಡಿದಾಗ ಅದೇ ಆಸಕ್ತಿದಾಯಕ ವಸ್ತುವಾಗಿ ಕಂಡುಬಂದಿದ್ದರಿಂದ ಮತ್ತು ಎಲ್ಲರಿಗೂ ಸಂಭವಿಸುವಂತಹುದಾದ್ದರಿಂದ ಸಾಮಾಜಿಕ ಮನೋಭಾವಕ್ಕೆ ತಕ್ಕಂತೆ ಇಲ್ಲಿ ಚಿತ್ರಿಸಿದ್ದಾರೆ.  ಒಂದು ಕಾಲಿಗೆ ಆರು ಬೆರಳಿನವರಾಗಿರುವ ಲೇಖಕಿ ಇದನ್ನೇ ಇಟ್ಟುಕೊಂಡು ಅದರಿಂದಾದ ಕಷ್ಟ, ನಷ್ಟ, ಸಂಕಟವನ್ನು ವಿನೋದವಾಗಿ, ತನ್ನ ಬಾಲ್ಯದ, ಓದಿನ ಕಾಲದ ನೆನಪಿನ ಬುತ್ತಿ ಬಿಚ್ಚಿ ಬರೆದಿದ್ದಾರೆ. ಇದಕ್ಕೆ  ತೆಳು ಹಾಸ್ಯವನ್ನು ಲೇಪಿಸಿರುವುದು ಓದನ್ನು ಮುಂದುವರೆಸಿಕೊಂಡು ಹೋಗುವಂತೆ ಮಾಡುತ್ತದೆ ಜೊತೆಗೆ ಒಂದಕ್ಕಿಂತ ಒಂದು ಬರಹಗಳು ಕುತೂಹಲವನ್ನು ಕೆರಳಿಸಿ, ಬರುವ ನಗು ತಡೆದುಕೊಂಡು ಓದಬೇಕಾಗುತ್ತದೆ. ಹಾಸ್ಯಮಯವಾಗಿ ತನ್ನ ಸ್ವಾನುಭವ ಸಂಕಟ ಕಥನವನ್ನು ಲೇಖಕಿ ಎಲ್ಲಾ ಮನಸ್ಸುಗಳಿಗೆ ಹಿತವಾಗುವಂತೆ ನೀಡಿದ್ದಾರೆ. ಎಲ್ಲರಿಗೂ ಸ್ಫೂರ್ತಿ ನೀಡುವಂತಹ ಕೃತಿ ಇದು.  ತಮ್ಮ ಅನೇಕ ಬೆರಗುಗಳ ಖಜಾನೆಯನ್ನೇ ನಮ್ಮೆದುರು ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ತಮ್ಮನ್ನು ತಾವೇ ಹಾಸ್ಯ ಮಾಡಿಕೊಂಡು ಬರೆದಿರುವುದರಿಂದ ವಿಶಿಷ್ಟವಾಗಿದೆ. ಇಲ್ಲಿರುವ ಅನುಭವಗಳಲ್ಲಿ ಕೆಲವು ಬಹುತೇಕ ಎಲ್ಲರಿಗೂ ಆಗಿರುವ...
Image
  ಶತಮಾನಗಳ ಹಿಂದಿನ ವಿದೇಶಿ  ಜನಜೀವನ ಕಟ್ಟಿಕೊಡುವ ‘ಸಿಲ್ಕ್ ರೂಟ್’   ‘ಸಿಲ್ಕ್ ರೂಟ್’ ಈ ಕೃತಿಯು ಒಂದು ಪ್ರವಾಸ ಕಥನವೂ ಹೌದು, ಚರಿತ್ರೆಯ ಪುಸ್ತಕವೂ ಹೌದು, ಚಿಂತನೆಗಳ ಗುಚ್ಛವೂ ಹೌದು. ಶತಮಾನಗಳ ಹಿಂದೆ ರೇಷ್ಮೆ ರಸ್ತೆಯ ನಗರಗಳಲ್ಲಿ ಜೀವನ ಹೇಗಿತ್ತು ಮತ್ತು ಈಗ ಹೇಗಿದೆ ಎನ್ನುವುದರ ತುಲನಾತ್ಮಕ ನೋಟ ಇದರಲ್ಲಿದೆ. ರೇಷ್ಮೆ ರಸ್ತೆಯ ಬಗ್ಗೆ ವಿವರವಾದ ಯಾವುದೇ ಆಕರ ಗ್ರಂಥಗಳು ಇಲ್ಲಿಯವರೆಗೆ ದೊರೆತಿಲ್ಲ. ಆದರೆ ಆ ಕೊರತೆಯನ್ನು ಈ ಪುಸ್ತಕ ನೀಗಿಸಲು ಪ್ರಯತ್ನಿಸಿದೆ.  ನಿವೃತ್ತ ಪೊಲೀಸ್ ಅಧಿಕಾರಿ ಡಾ. ಡಿ ವಿ ಗುರುಪ್ರಸಾದ್ ಇದರ ಲೇಖಕರು. ಇದು ಅವರ ೧೦೦ನೆಯ ಕೃತಿಯೂ ಹೌದು. ಪುರಾತನ ರಮ್ಯ, ರಮಣೀಯ ಹಾಗೂ ಕೌತುಕಮಯವಾದ ರೇಷ್ಮೆ ರಸ್ತೆಯನ್ನು ನೋಡಬೇಕೆಂದು ಆಸೆ ಹಲವು ದಶಕಗಳಿಂದಲೂ ಇತ್ತು. ಬಾಲ್ಯದಿಂದಲೇ ಇದ್ದ ಈ ಕುತೂಹಲವನ್ನು ತಮ್ಮ ಸೇವಾ ನಿವೃತ್ತಿಯ ನಂತರ ನೀಗಿಸಿಕೊಂಡಿದ್ದಾಗಿ ಕೃತಿಯಲ್ಲಿ ಅವರು ಹೇಳಿಕೊಂಡಿದ್ದಾರೆ.  ರೇಷ್ಮೆ ರಸ್ತೆ ಅಥವಾ ಸಿಲ್ಕ್ ರೂಟ್ ಎಂಬ ಹೆಸರು ಈ ರಸ್ತೆಗೆ ಬಂದಿದ್ದೇ  ಚೀನಾ ದೇಶದಿಂದ ರೇಷ್ಮೆ ಬಟ್ಟೆಯು ರವಾನೆಯಾಗುತ್ತಿದ್ದ ಕಾರಣದಿಂದ. ಚೀನಿ ಅರಸರು ಮಧ್ಯ ಏಷ್ಯಾ ಕಡೆಯಿಂದ ರಸ್ತೆ ನಿರ್ಮಿಸಿ ಅವುಗಳನ್ನು ವ್ಯಾಪಾರಕ್ಕೆ ಬಳಸಲು ತೀರ್ಮಾನಿಸಿದರು. ತಮ್ಮ ದೇಶದ ರಾಜಧಾನಿಯಾಗಿದ್ದ ಕ್ಸಿಯಾನ್ ನಗರದಿಂದ ಪಶ್ಚಿಮದಲ್ಲಿ ಸುಮಾರು ಒಂದು ಸಾವಿರ ಕಿಲೋಮೀಟರ್ ರಸ್ತೆ ಮಾಡಿದರು. ಈ ರಸ್ತೆಯೇ ಅ...
Image
  ಬದುಕಿನ ತಲ್ಲಣದಿಂದ ಬೆಂದ ಮಹಿಳೆಯ   ‘ಸಾಕು ಈ ಜನಮ’   ತಾಂಡಾದ ಹೆಣ್ಣಿನ ಜೀವನದಲ್ಲಿ ನಡೆದ ಈ ನೈಜ ಘಟನೆಯನ್ನು ಸ್ತ್ರೀವಾದಿ, ಕಾದಂಬರಿಗಾರ್ತಿ ಡಾ. ಶ್ರೀದೇವಿ ರಾಥೋಡ್ ‘ಸಾಕು ಈ ಜನಮ’ದಲ್ಲಿ ನಿರೂಪಿಸಿದ್ದಾರೆ. ಶಾರೀಬಾಯಿ ಎಂಬ ಯುವತಿಯ ಬದುಕಿನ ಚಿತ್ರಣ ಇಲ್ಲಿದೆ. ಎಲ್ಲರಂತೆ ತನ್ನ ಬದುಕನ್ನು ರೂಪಿಸಿಕೊಳ್ಳಲು ಹೋದ ಈಕೆ ಕೆಲವು ಅನಿರೀಕ್ಷಿತ ಘಟನೆಗಳಿಂದ ಜೀವನದಲ್ಲಿ ನೊಂದುಕೊಳ್ಳುವಂತಾಗುತ್ತದೆ.  ಬದುಕು ಬೇಡ ಎನಿಸಿಬಿಡುತ್ತದೆ. ಆದರೂ ತನ್ನ ಬದುಕನ್ನು ಮುನ್ನಡೆಸಲು ಪ್ರಯತ್ನಿಸಿದಾಗ ಅವಳಿಗೆ ಸಮಾಜದಲ್ಲಿ ಅವಮಾನ, ಅಪಮಾನ ಅಲ್ಲದೆ ಬೇರೇನೂ ಸಿಗುವುದಿಲ್ಲ. ಹೆಣ್ಣಿನ ಮನದಾಳದ ದುಃಖವನ್ನು ಯಾರೂ ಅರಿಯುವುದಿಲ್ಲ ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗಿದೆ.  ತನ್ನ ಜೀವನದಲ್ಲಿ ನಡೆದ ಬದುಕಿನ ತಲ್ಲಣದಿಂದಾಗಿ ಬದುಕನ್ನೇ ಅಂತ್ಯಗೊಳಿಸಲು ಹೋದ ಶಾರಿಗೆ ಈ ಸಮಾಜ ಬದುಕಲು ಬಿಡುವುದಿಲ್ಲ. ಮೊದಲು ಅವಳ ನಡತೆಯ ಬಗ್ಗೆ, ನಂತರ ಆಕೆ ಬೆಂಕಿಯಿಂದ ವಿಕಾರವಾದಾಗ ತಾಂಡಾದ ವಾಸಿಗಳು ಕುಹಕವಾಡುತ್ತಾರೆ. ಸಾಮಾಜಿಕ ವ್ಯವಸ್ಥೆಯನ್ನು ನೋಡಿ ಆಕೆ ತುಂಬಾ ಬೇಸರಗೊಂಡು  ಈ ಜನಮ ಸಾಕು ಎಂದು ಹೇಳುತ್ತಾಳೆ. ತನಗಿರುವ ಮೂರು ಚಿಕ್ಕ ಮಕ್ಕಳ ಮುಖವನ್ನು ನೋಡಿ ಅವರಿಗಾಗಿಯಾದರೂ ತಾನು ಜೀವಂತವಾಗಿ ಇರಬೇಕು ಎಂದು ಎಲ್ಲಾ ದುಃಖ-ದುಮ್ಮಾನ, ಕಷ್ಟ -ಕಾರ್ಪಣ್ಯಗಳನ್ನು ಸಹಿಸಿಕೊಂಡು, ಬಂದ ಅವಮಾನವನ್ನು ನುಂಗಿಕೊಳ್ಳುತ್ತಾಳೆ.  ಸ...
Image
  ಸಂಕಷ್ಟ, ತಳಮಳಕ್ಕೆ ಸಿಲುಕಿದ ಹೆಣ್ಣಿನ ಕಥೆಯ   ‘ಆಕ್ಸಿಡೆಂಟ್’  ‘ಆಕ್ಸಿಡೆಂಟ್’ ಈ ಕಿರು ಕಾದಂಬರಿ ಬರೆದವರು ಅನು ಬೆಳ್ಳೆ. ಇದರಲ್ಲಿ ಪತ್ನಿಯಿಂದ ದೂರವಾಗಿ ಮುಂಬೈನಲ್ಲಿ ನೆಲೆಸಿದ ಸ್ಮಗ್ಲರ್ ಮತ್ತೆ ಪತ್ನಿಯನ್ನು ತನ್ನವಳನ್ನಾಗಿ ಮಾಡಿಕೊಳ್ಳಲು ಹೆಣೆದ ಸಂಚಿನ ಕಥನವಿದೆ.    ತನ್ನಿಂದ ದೂರವಾದ ಮೊದಲ ಪತ್ನಿಯನ್ನು ಮತ್ತೆ ತನ್ನೊಟ್ಟಿಗೆ ಸೇರಿಸಿಕೊಳ್ಳಲು ಹಣವಂತನಾದ, ಕಳ್ಳ ಸಾಗಾಣಿಕೆದಾರ ಮಕಾನ್‌ಲಾಲ್  ಎಂಬ ಪತಿ ಏನೆಲ್ಲ ಪ್ರಯತ್ನ ಮಾಡಿದ, ಅದಕ್ಕಾಗಿ ಆತ ಮಾಡಿದ ಸಂಚುಗಳೇನು, ಮೆಡಿಕಲ್ ಕಾಲೇಜು ಡೀನ್ ಆಗಿದ್ದ ತನ್ನ ಪತ್ನಿಯನ್ನು ಯಾವ ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸಿದ, ನಂತರ ಆತನ ಕೃತ್ಯ ಬೆಳಕಿಗೆ ಹೇಗೆ, ಯಾರಿಂದ ಬಂದಿತು, ಮಕಾನ್‌ಲಾಲ್‌ಗೆ ಪತ್ನಿ ದಕ್ಕಿದಳೇ, ಮೆಡಿಕಲ್ ಕಾಲೇಜು ಡೀನ್ ಮಗಳಿಗೆ ಅಪಘಾತ ಸಂಭವಿಸಿದ್ದು ಹೇಗೆ  ಎನ್ನುವುದನ್ನು ವಿವರಿಸುವ  ಪತ್ತೆದಾರಿ ಕಾದಂಬರಿ ಇದು. ಕಥೆಯ ಸಾರಾಂಶ:    ಮೆಡಿಕಲ್ ಕಾಲೇಜಿನ ಡೀನ್ ಆಗಿದ್ದ ಡಾ|| ಸುಹಾಸಿನಿಗೆ ತಾನು ಇದೇ ಕಾಲೇಜಿನ ಕ್ಲರ್ಕ್ ಎಂದುಕೊಂಡ ಬಂದ ಸಂಹಿತಾ ಎನ್ನುವ ಹುಡುಗಿ ದೂರೊಂದನ್ನು ನೀಡಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ತನ್ನನ್ನು ಊರಹೊರಗೆ ಕರೆದುಕೊಂಡು ಹೋಗಿ ಹಾಳುಮಾಡಿದ ಬಗ್ಗೆ ದೂರುತ್ತಾಳೆ. ದೂರು ಕೊಟ್ಟವಳಿಂದ ಹೆಚ್ಚಿನ ವಿವರವನ್ನೂ ಅವರು ಪಡೆದಿರುವುದಿಲ್ಲ.  ದೂರಿನ ಮೇರೆಗೆ ಇಬ್ಬರು ವಿದ್ಯ...
Image
  ಬದುಕಿಗೆ ದಾರಿದೀಪವಾಗುವ  ‘ಇಪ್ಪತ್ತೇಳು ಹಣತೆಗಳು’   ನಿತ್ಯ ಜೀವನದಲ್ಲಿ ಬೆಳಕಾಗುವ ವೈಚಾರಿಕ ಲೇಖನಗಳ ಈ ಕೃತಿಯನ್ನು ಬರೆದವರು ತೀರ್ಥರಾಮ ವಳಲಂಬೆಯವರು. ಇದರಲ್ಲಿ ವಿಜ್ಞಾನ, ಆಧ್ಯಾತ್ಮ, ಸಾಂಸಾರಿಕ ವಿಷಯಗಳ ಜೊತೆ ವೈಚಾರಿಕತೆಗೂ ಒತ್ತುಕೊಟ್ಟು ಬದುಕಿನ ವಿಸ್ಮಯಗಳನ್ನು ಬಿಡಿಸಿಟ್ಟಿದ್ದಾರೆ. ಅತ್ಯಂತ ಕ್ಲಿಷ್ಟಕರ, ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳನ್ನು ಬದುಕಿಗೆ ಹತ್ತಿರವಾಗುವಂತೆ ಹಾಗೂ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬಹುದಾದ ರೀತಿಯಲ್ಲಿ ಸರಳಗೊಳಿಸಿ ಬರೆದಿದ್ದಾರೆ. ಇದರಲ್ಲಿ ಒಟ್ಟು ಕೃತಿ ಹೆಸರಿಗೆ ತಕ್ಕಂತೆ ೨೭ ಲೇಖನಗಳಿವೆ ಇವು ನಮ್ಮ ಬಾಳ ಹಣತೆಗಳಂತೆ ದಾರಿ ದೀವಿಗೆಗಳಾಗಿವೆ. ನಮ್ಮ ಬದುಕಿನಲ್ಲಿ ಯಾವುದೆಲ್ಲ ಅವಶ್ಯವೂ ಅವೇ ಈ ೨೭ ಹಣತೆಗಳಾಗಿವೆ.  ದಿನನಿತ್ಯದ ಬದುಕಿನಲ್ಲಿ ಇತರರ ಬಗ್ಗೆ ಕಳಕಳಿ, ಪ್ರಕೃತಿಯೊಂದಿಗೆ ಪ್ರೇಮ, ಮಾತಿನಲ್ಲೊಂದಿಷ್ಟು ಹಿತನುಡಿ ಖರ್ಚಿಲ್ಲದೆ ದೊರೆಯುತ್ತವೆ. ಇಂತಹವುಗಳನ್ನು ನಾವು ನಡೆಸಿಕೊಂಡು ಹೋದಲ್ಲಿ ಹಣದಿಂದ ಪಡೆಯಲಾಗದ ಆನಂದವನ್ನು ಪಡೆಯಬಹುದೆನ್ನುವುದನ್ನು ‘ಮಾತೆಂಬ ಅದ್ಬುತ ಬಂಡವಾ’ದಲ್ಲಿ ವಿವರಿಸುತ್ತಾರೆ ‘ಕಾಲವೆಂಬ ವಿಸ್ಮಯ’ದಲ್ಲಿ ಬದುಕಿನಲ್ಲಿ ಒಮ್ಮೆ ಬಂದ ಕಾಲ ಮತ್ತೆ ಸಿಗಲಾರದು. ಸುಂದರ ನಾಳೆಯ ಕನಸನ್ನು ಕಾಣುವುದರಲ್ಲಿ ಅರ್ಥ ಇರುವುದಿಲ್ಲ. ಸಮಯವನ್ನು ಅಮೂಲ್ಯ ಎಂದು ಪರಿಗಣಿಸಿದಾಗ ಬದುಕು ಸುಂದರವಾಗುತ್ತದೆ ಎನ್ನುತ್ತಾರೆ. ‘ಬದುಕು ಭಾವನೆ ಮತ್ತು ಸರಿತಪ್ಪುಗಳು’ ...