Posts

Showing posts from May, 2025
Image
 ಜೀವಾತ್ಮಕತೆಯ ರೂಪದ, ತಿಳಿಹಾಸ್ಯದ ‘ನೆನಪು ಗರಿ ಬಿಚ್ಚಿದಾಗ ’ ‘ನೆನಪು ಗರಿ ಬಿಚ್ಚಿದಾಗ’ ಇದರಲ್ಲಿ ಹತ್ತಾರು ವಸ್ತು ವೈವಿಧ್ಯತೆಯುಳ್ಳ, ಜೀವಾತ್ಮಕತೆಯ ರೂಪದ ನೆನಪುಗಳು ಗರಿ ಬಿಚ್ಚಿಕೊಂಡಿವೆ. ಬರಹಗಾರ್ತಿ ವಿದ್ಯಾ ಶಿರಹಟ್ಟಿಯವರ ಚೊಚ್ಚಲ ಕೃತಿ ಇದು. ಜೀವನದ ವಿವಿಧ ಮುಖಗಳನ್ನು ಹತ್ತಾರು ದೃಷ್ಟಿಕೋನದ ಮೂಲಕ ಇಲ್ಲಿ ಚಿತ್ರಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಕನ್ನಡದಲ್ಲಿ ಇರುವ ಈ ಲೇಖನಗಳನ್ನು ಓದುತ್ತ ಹೋದಂತೆ ನಮ್ಮ ಜೀವನದಲ್ಲಿ ನಡೆದ ಹಾಗೂ ಇತರರಿಂದ ಕೇಳಿದ ಅನೇಕ ಘಟನೆಗಳ ನೆನಪಾಗುತ್ತವೆ. ಪ್ರತಿ ಲೇಖನಕ್ಕೂ ತಿಳಿಹಾಸ್ಯದ ನಂಟಿದೆ.  ಫೇಸ್ಬುಕ್‌ನಲ್ಲಿ ಬರೆದ ಲೇಖನಗಳನ್ನು ಸಂಗ್ರಹಿಸಿ ಮಿತ್ರರ ಒತ್ತಾಸೆಯ ಮೇರೆಗೆ ವಿದ್ಯಾ ಅವರು ಕೃತಿಯನ್ನು ರೂಪಿಸಿದ್ದಾರೆ. ೨೫ ಲೇಖನಗಳ ಗುಚ್ಛ ಇದು. ಅತಿ ಸರಳ ಭಾಷೆಯಲ್ಲಿ ನಮ್ಮನ್ನು ಓದಿಸಿಕೊಂಡು ಹೋಗುವ, ಸುಲಭದಲ್ಲಿ ಅರ್ಥವಾಗುವಂತಿದೆ. ಈ ಲೇಖನಗಳು ನೈಜ ವಿಷಯವನ್ನು ಹೊಂದಿದ್ದರೂ ಲೇಖಕಿ ಅದನ್ನು ಓದುಗರಿಗೆ ಇಷ್ಟವಾಗುವಂತೆ ನಿರೂಪಿಸಿದ್ದಾರೆ. ಬರಹ ಮನಮುಟ್ಟುವಂತೆ ಕೆಲವಡೆ ಹಿಗ್ಗಿಸಿದ್ದಾರೆ.   ಬರಹಗಳನ್ನು ಗಮನಿಸುವುದಾದರೆ. ಬಾಲ್ಯದಲ್ಲಿ, ಯೌವ್ವನದಲ್ಲಿ ಮತ್ತು ಮದುವೆಯಾದ ನಂತರ ವಿವಿಧ ಬಗೆಯಲ್ಲಿ ಗಣಪತಿಯನ್ನು ಚವತಿಯಲ್ಲಿ   ಕೂಡಿಸುವ ಪದ್ಧತಿಯನ್ನು ಒಂದೊಂದು ಊರಲ್ಲಿ ಒಂದೊಂದು ರೀತಿಯಲ್ಲಿ ಇರುವುದನ್ನು ವಿಶ್ಲೇಷಿಸಿದ್ದಾರೆ. ಅನುಭವ ಬೇರೆ ಆದರೂ ಎಲ್ಲವೂ ಸುಂದ...
Image
 ಜೀವನೋತ್ಸಾಹ, ಜೀವನ ಪ್ರೀತಿಯ ‘ಭಾವನಾಗಮ್ಯ’ ,,,,,,,,,,,,,,,,,,,,,, ‘ಭಾವನಾಗಮ್ಯ’  ಇದೊಂದು ಪ್ರೇಮ, ಗೆಳೆತನ ಆಧಾರಿತ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನಾಧಾರಿತ ಕಾದಂಬರಿ. ವಿಶೇಷವಾಗಿ ಮಲೆನಾಡು ಭಾಗದ ಸಮಸ್ಯೆ ಅಥವಾ ಇಲ್ಲಿಗೆ ಸಂಬಂಧಿಸಿದ್ದು  ಎನ್ನುವುದು ಓದಿದ ನಂತರ ಗೊತ್ತಾಗುತ್ತದೆ. ಆದರೆ ಇಲ್ಲಿ ಬಳಸಿದ ಭಾಷೆ ಮಲೆನಾಡಿನದ್ದಲ್ಲ, ಯಾವುದೇ ಒಂದು ಪ್ರಾಂತ್ಯಕ್ಕೆ ಸೀಮಿತವಾಗದ ಸಾಹಿತ್ಯಿಕ ಭಾಷೆ. (ಕೆಲವು ಸಾಲುಗಳು ಮಾತ್ರ ಮಲೆನಾಡಿನ ಭಾಷೆಯಲ್ಲಿವೆ) ಇದರ ಲೇಖಕರು ವಿದ್ಯಾ ದತ್ತಾತ್ರಿ ಹೊಸಕೊಪ್ಪ. ಇವರು ಸಹ ಮಲೆನಾಡಿನ ಸೊರಬದವರಾಗಿರುವುದರಿಂದ ಇಲ್ಲಿನ ಪ್ರಕೃತಿ, ಸಂಪ್ರದಾಯ, ಧಾರ್ಮಿಕ ಪದ್ಧ್ದತಿಗಳೆಲ್ಲಾ ಚೆನ್ನಾಗಿ ಮೂಡಿಬಂದಿವೆ. ಪ್ರಸ್ತುತ ಕಾದಂಬರಿಯಲ್ಲಿ ಒಟ್ಟು ಹತ್ತು ಅಧ್ಯಾಯಗಳಿವೆ. ಇಲ್ಲಿನ ಕಥೆಯಲ್ಲಿ  ಎರಡೇ ಪಾತ್ರಗಳು ಕಾಣಿಸುತ್ತವೆ. ಉಳಿದಂತೆ ನಾಯಕ ಮತ್ತು ನಾಯಕಿಯ ಕುಟುಂಬ, ಬಳಗ, ಹಳ್ಳಿ, ಅವರ ವೃತ್ತಿ ಜೀವನದ ಬಗ್ಗೆ ಇದೆ. ಚೆಂದದ ಕಥೆ ಎಲ್ಲಿಯೂ ದಾರಿತಪ್ಪದಂತೆ ನಿರೂಪಿಸಿರುವ ಲೇಖಕಿಯ ಕೌಶಲ್ಯವನ್ನು ಇಲ್ಲಿ  ಮೆಚ್ಚಲೇಬೇಕು. ಜೀವನ ಪ್ರೀತಿ ಮತ್ತು ಜೀವನ ದೃಷ್ಟಿ ಇದರಲ್ಲಿ ಮಿಳಿತವಾಗಿದೆ.    ಹಳ್ಳಿಯ ಮಕ್ಕಳಿಗೆ ಪಾಲಕರು ಉತ್ತಮ ಶಿಕ್ಷಣ ಕೊಡಿಸಿದರೆ ಅವರು ನೌಕರಿಗಾಗಿ ಬೆಂಗಳೂರು, ದೆಹಲಿಯಂತಹ ನಗರ ಸೇರುವುದು, ಮದುವೆಯಾಗುವ ವಯಸ್ಸಿಗೂ ಮದುವೆಯಾಗದೆ ಮದುವೆ ಮಾ...
Image
ಸಮಾಜದ ವ್ಯವಸ್ಥೆ ,ಮೌಢ್ಯ ಧಿಕ್ಕರಿಸುವ  ಡ್‌ಲೈನ್ ಕತೆಗಳು’  ‘ಡೆಡ್‌ಲೈನ್ ಕತೆಗಳು’ ಇದು ಉತ್ತಮ ಕಥಾಹಂದರವನ್ನು ಹೊಂದಿರುವ ಹೊಸತನ ಕಥೆಗಳ ಸಂಕಲನ. ಯುವ ಲೇಖಕ, ಪತ್ರಕರ್ತ ಸಂದೀಪ್ ಚಿತ್ರದುರ್ಗ ಇದರ ಕರ್ತೃ. ಅವರ ಚೊಚ್ಚಲ ಕೃತಿಯಾದ ಇದರಲ್ಲಿ ವಿವಿಧ ಕಥಾ ಸ್ಪಧೆಗಳಲ್ಲಿ ಬಹುಮಾನಿತ ಅಥವಾ ಮೆಚ್ಚುಗೆ ಪಡೆದ ೯ ಕಥೆಗಳಿವೆ. ಯಾವುದೇ ಜಾತಿ- ಮತ, ಪಂಥಗಳ ಹಂಗಿಲ್ಲದ ಸ್ವತಂತ್ರ ಕಥೆಗಳು. ಸಮಾಜದ ವ್ಯವಸ್ಥೆ ಮತ್ತು ಮೌಢ್ಯವನ್ನು ಧಿಕ್ಕರಿಸುವ ಇಲ್ಲಿನ ಘಟನೆಗಳು ನಮ್ಮ ಕಣ್ಣೆದುರೇ ನಡೆದ ಅನುಭವವಾಗುತ್ತದೆ. ಅವುಗಳನ್ನು ರಸವತ್ತಾಗಿ ವರ್ಣಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.   ತನ್ನ ಜೀವನಾನುಭವಕ್ಕೆ ಎಟುಕಿದಷ್ಟು ಭಾಷೆಯನ್ನು ಅತಿ ನಾಜೂಕಾಗಿ, ಚುರುಕಾಗಿ ಇಲ್ಲಿ ಬಳಸಿದ್ದಾರೆ. ಹೆಚ್ಚಾಗಿ ಬಯಲುಸೀಮೆಯ ಪ್ರದೇಶಗಳು, ಅಲ್ಲಿಯ ವಾತಾವರಣ, ಊರಿನಲ್ಲಿ ಕಂಡುಂಡ ಅನುಭವಕ್ಕೆ ಹೆಚ್ಚು ಒತ್ತನ್ನು ನೀಡಿದ್ದಾರೆ. ಇದರಲ್ಲಿ ಕೆಲವು ಸತ್ಯಾಧಾರಿತವಾದರೆ, ಇನ್ನೂ ಕೆಲವು ಕಾಲ್ಪನಿಕ ಕಥೆಗಳು.ಭಾಷೆಯೂ ಅಲ್ಲಿಯದೇ ಇದೆ. ಆದರೆ ಅಲ್ಲಿನ ಬಯ್ಗುಳ ಶಬ್ದಗಳನ್ನು ಸಹ ಧಾರಾಳವಾಗಿ ಬಳಸಿದ್ದಾರೆ. ಇದು ಸಹ್ಯ ಎನಿಸುವುದಿಲ್ಲ. ಆದರೂ ಕಥೆಯೊಡನೆ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಪುಸ್ತಕಕ್ಕೆ ‘ಡೆಡ್‌ಲೈನ್ ಕಥೆಗಳು’ ಎಂಬ ಹೆಸರನ್ನಿಡಲು ಕಾರಣವನ್ನೂ ವಿವರಿಸಿದ್ದಾರೆ. ವಿವಿಧ ಸ್ಪರ್ಧೆಗಳಿಗೆ ಬರೆದ ಕಥೆಗಳಿವು. ನಿಗದಿತ ಸಮಯದಲ್ಲಿ, ಸೂಚಿತ ಪದಗಳ ಸಂಖ...