Posts

Showing posts from January, 2026
Image
 ಸುಲಲಿತ ಕವಿತೆಗಳ  ಸಂಕಲನ ‘ಕಾವ್ಯಾಂಜಲಿ’  ‘ಕಾವ್ಯಾಂಜಲಿ’  ಇದು ಅಡಿ ಬರಹವೇ ಹೇಳುವಂತೆ ಸುಲಲಿತ ಕವಿತೆಗಳ ಕೃತಿ. ಇದರ ಲೇಖಕಿ ಲಲಿತಾ ಬೆಳವಾಡಿ.  ಇದರಲ್ಲಿ ೧೦೧ ಕವನಗಳಿದ್ದು, ಇದು ಕವಯತ್ರಿಯ ಭಾವನೆಗಳೊಂದಿಗಿನ ಬದುಕಿನ ಅಂದ -ಚಂದವನ್ನು ಕಣ್ಮುಂದೆ ತಂದು ನಿಲ್ಲಿಸುವ ಸಂಕಲನ. ಸ್ತ್ರೀಪರ ಕಾಳಜಿ ಚಿಂತನೆಯನ್ನು ಒಳಗೊಂಡ ಅನೇಕ ಕವನಗಳು ಇದರಲ್ಲಿವೆ. ಪ್ರಸ್ತುತ ಸ್ಥಿತಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಅನಾವರಣವಿದೆ. ಕಣ್ಮರೆಯಾಗುತ್ತಿರುವ ಹಿಂದಿನ ವ್ಯವಸ್ಥೆ, ಮಹಿಳಾ ಅಸ್ಮಿತೆ, ತಂದೆ -ತಾಯಿ -ಮಕ್ಕಳ ಬಾಂಧವ್ಯ, ಪ್ರವಾಸ ಕಥನ, ಹಬ್ಬಗಳು, ನಮ್ಮ ಭಾಷೆ ಮುಂತಾದ ಪ್ರಕಾರದ ಸಂದೇಶಯುಕ್ತ ಕವನಗಳನ್ನು ಇಲ್ಲಿ ಕಾಣಬಹುದಾಗಿದೆ. ಪರಿಹಾರಾತ್ಮಕ ಪ್ರತಿಕ್ರಿಯೆಯೂ ಇದೆ. ಭುವಿಯ ಮೇಲಿನ, ಮಕ್ಕಳ ಪಾಲಿನ ದೇವತೆಯಾದ, ಕುಟುಂಬದ ಕಣ್ಣಾದ ತಾಯಿಯ ಕುರಿತಾದ ಇವರ ಗೌರವಾದರವು ಇಲ್ಲಿ ಕವನ ರೂದಪಲ್ಲಿ ಸೊಗಸಾಗಿ ವ್ಯಕ್ತಗೊಂಡಿದೆ. ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ,  ಸಾಮರ್ಥ್ಯವು ಸಾಹಿತಿಗಿದೆ ಎನ್ನುವ ಮಾತನ್ನು ಇವರು ಕವನ ಮುಖೇನ ಇಲ್ಲಿ ಸಾಬೀತುಪಡಿಸಿದ್ದಾರೆ.  ಈ ಸಂಕಲನದಲ್ಲಿ ಹಲವು ಕವನಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಅಂತಹವುಗಳಲ್ಲಿ ಕೆಲವನ್ನು ಗಮನಿಸುವುದಾದರೆ, ‘ಅಂಚೆ ಪತ್ರಗಳು’ ಎನ್ನುವ ಕವನದಲ್ಲಿ ಅಂಚೆ ಜೊತೆ ಜನರಿಗಿದ್ದ ಸಂಬಂಧವನ್ನು ಪ್ರಕಟಪಡಿಸಿದ್ದಾರೆ....
Image
 ಹಣೆಬರಹ ಮೀರುವ ಮನುಷ್ಯ ಪ್ರಯತ್ನ ‘ಮಾರ್ಕೋಲು’  ಹುಟ್ಟಿದ ಮಕ್ಕಳ ಹಣೆಬರಹವನ್ನು ಅವರ ಪೂರ್ವಕರ್ಮಾನುಸಾರವಾಗಿ ಬರೆಯುವ ಶಕ್ತಿಯನ್ನು ಹೊಂದಿದ ಮಹಿಳೆ ಮತ್ತು ಆಧುನಿಕ ಮನೋಧರ್ಮದ ಇನ್ನೊಬ್ಬ ಮಹಿಳೆ ಮನುಷ್ಯನ ಪ್ರಯತ್ನದಿಂದ, ಯುಕ್ತಿಯಿಂದ ಹಣೆಬರಹವನ್ನು ಮೀರಬಹುದು ಎಂದು ನಂಬಿಕೆ ಇರುವವರ ಕುರಿತಾದ ಕಾದಂಬರಿ ಮಾರ್ಕೋಲು. ಈ ತಿಂಗಳ ಆರಂಭದಲ್ಲಿ ಇಹಲೋಕ ತ್ಯಜಿಸಿದ ಬರಹಗಾರ್ತಿ ಆಶಾ ರಘು ಅವರ  ಕೃತಿ ಇದು. ಈ ಕೃತಿ  ತುಮಕೂರು ಮತ್ತು ನಂಜನಗೂಡು ಭಾಗದ ಆಡುಭಾಷೆಯಲ್ಲಿ ನಿರೂಪಿತವಾಗಿವೆ. ಚಿಂತನಶೀಲತೆ ಮತ್ತು ಸಂವೇದನಾಶೀಲತೆಯ ಸವಾಲನ್ನು ಸ್ವೀಕರಿಸಿ ವಾಸ್ತವಿಕತೆ ಮತ್ತು ಕಲ್ಪನೆಗಳನ್ನು ಸಮೀಕರಿಸಿ ಲೇಖಕಿ ನಿರೂಪಿಸಿದ್ದಾರೆ.  ಸರಳ ಎಂಬಂತೆ ಕಂಡುಬಂದರೂ ಸಂಕೀರ್ಣ ಕಥನಕವಾಗುವುದನ್ನು ಓದಿನ ವೇಳೆ ಕಾಣಬಹುದು. ಜನಪದೀಯ ಮತ್ತು ಆಧುನಿಕತೆ,  ಅಲೌಕಿಕ ಘಟನೆಗಳನ್ನೂ ಇಲ್ಲಿ ಸೇರಿಸಿದ್ದಾರೆ. ನಿರಾಡಂಬರವಾದ ಸಹಜತೆ ಮತ್ತು ಮುಗ್ಧ ಗ್ರಾಮದ ಜನರ ಭಾಷಾ ಶೈಲಿ ಇಷ್ಟವಾಗುತ್ತದೆ. ದ್ಯಾವಮ್ಮ, ಕಾಮರಾಯ, ತಿಮ್ಮರಾಯ, ಕಾಡಜ್ಜಿ, ವಿಕ್ರಮ ಮೊದಲಾದವರ ಪಾತ್ರಗಳಿಗೆ ಸಾಕಷ್ಟು ಮಹತ್ವ ಇಲ್ಲಿದೆ. ಕುತೂಹಲಭರಿತವಾಗಿ ಓದಿಸಿಕೊಂಡು ಹೋಗುವಂತೆ ಕಥೆಯನ್ನು ನಿರೂಪಿಸಿದ್ದಾರೆ. ಕೊನೆಯಲ್ಲಿ ಹಣೆಬರಹ ಏನೇ ಇದ್ದರೂ ಮನುಷ್ಯನ ಪ್ರಯತ್ನದಿಂದ ಮಾತ್ರ ಇದನ್ನು ಮೀರಬಹುದು ಎನ್ನುವ ಸಂದೇಶವನ್ನು ಕಟ್ಟಿಕೊಡುತ್ತಾರೆ. ಕಥೆಯ ಬಗ್ಗೆ ವಿವರಿಸುವುದಾರೆ, ಇ...
Image
 ವಿಶಿಷ್ಟ ಚಿಕಿತ್ಸೆಯ   ‘ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ’    ‘ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ’  ಈ ಕೃತಿಯು  ರೇಕಿ ಎಂಬ ವಿಶಿಷ್ಟ ಚಿಕಿತ್ಸಾ ಪದ್ದತಿಯ ಮೇಲೆ ಬೆಳಕು ಚೆಲ್ಲುವಂತದ್ದು.  ಇದರ ಉದ್ದೇಶ ಕೇವಲ ಆರೋಗ್ಯ ಲಾಭವಷ್ಟೇ ಅಲ್ಲ,  ಇದು ತಂತ್ರಶಾಸ್ತ್ರವಾಗಿದೆ. ಆಧ್ಯಾತ್ಮಿಕ ಮತ್ತು ಲೌಕಿಕ  ಪ್ರಗತಿ ಪಡೆಯುವುದು ಇದರ ಗುರಿ. ರೋಗಿಗಳ ಪ್ರಾಣ ಮತ್ತು ಧನಕ್ಕೆ ಸಂಚಕಾರ ತರುತ್ತಿರುವ ಈ ಕಾಲದಲ್ಲಿ  ಹಲವಾರು ಪರೀಕ್ಷೆಗಳನ್ನು ನಡೆಸಿಯೂ ರೋಗ ಪತ್ತೆ ಹಚ್ಚಲಾಗದ ಸಂದರ್ಭದಲ್ಲಿ  ರೇಕಿ ಚಿಕಿತ್ಸೆ ರೋಗಿಗಳ ಪಾಲಿಗೆ ವರದಾನವಾಗಿದೆ ಎನ್ನುವುದು ಕೃತಿಯ ಸಾರಾಂಶ.   ಸಾಂಪ್ರದಾಯಿಕ ರೇಕಿ ಮಾಸ್ಟರ್,  ಕರುಣಾ ರೇಕಿ ಮಾಸ್ಟರ್, ಶಮನಿಕ್ ಹೀಲಿಂಗ್ ಮಾಸ್ಟರ್ ಆದ ಶಿವಮೊಗ್ಗದ ಡಾ|| ಸತ್ಯನಾರಾಯಣ  ಈ ಕೃತಿಯ ಲೇಖಕರು.   ತಾವು  ಆಯುರ್ವೇದ ಕೋರ್ಸು ಓದುತ್ತಿದ್ದಾಗ ಎದುರಾದ ಅನಾರೋಗ್ಯದ ಬಗ್ಗೆ  ಒಬ್ಬರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ  ಮೈಸೂರಿನ  ರೇಕಿ ಚಿಕಿತ್ಸೆಯ ಗುರುಗಳ ಮೊರೆ ಹೋಗಿ  ಅಲ್ಲಿ ಗಮನಾರ್ಹ ಬದಲಾವಣೆ ಅನುಭವಿಸಿ, ನಂತರ ಬೆಂಗಳೂರಿನ ವಿಶ್ರಾಂತ ರೇಕಿ ಮಾಸ್ಟರ್ ಡಾ|| ವಿ ವಿ ಚಲಂ ಅವರಲ್ಲಿ ಈ ವಿದ್ಯೆ ಕಲಿತು, ತರಗತಿ ನಡೆಸಿ, ಅವರಿಂದ ‘ರೇಕಿ ಚಿಕಿತ್ಸಾ ದುರಂಧರ’ ಎಂಬ ಬಿರುದು ಪಡೆದಿದ್ದು, ...
Image
 ನೆಲದ ಗುಣ ಕಚ್ಚಿಕೊಂಡ  ‘ಹಿಮ್ಮುಖ ಹರಿದ ನದಿ’  ‘ಹಿಮ್ಮುಖ ಹರಿದ ನದಿ’ ಕಥಾ ಸಂಕಲನ ವಸ್ತುವಿಶೇಷದ ಜೊತೆಗೆ ದೇಸಿ ಸೊಗಡಿನ ದೃಷ್ಟಿಯಿಂದಾಗಿ ಹೆಚ್ಚು ಗಮನ ಸೆಳೆಯುವ ಕೃತಿ. ಧಾರವಾಡದ ವಿದ್ಯಾಧರ ಮುತಾಲಿಕ್ ದೇಸಾಯಿ ಇದರ ಲೇಖಕರು. ಇಲ್ಲಿನ ಕಥೆಗಳಲ್ಲಿ ಮನೋವೈಜ್ಞಾನಿಕತೆ ಇದೆ, ಪ್ರೀತಿ-ಪ್ರೇಮ,  ಸಂಸ್ಕೃತಿ, ಸಾಮಾಜಿಕ ಪ್ರಸ್ತುತತೆ, ಜೀವನಮೋಹ ಎಲ್ಲವೂ ಇವೆ. ಇವು ನಮ್ಮನ್ನು ಸೆಳೆಯುವುದು ಮಾತ್ರವಲ್ಲ, ಅದರ ಗುಂಗಿನಲ್ಲಿರುವಂತೆ ಮಾಡುವ ಗುಣವನ್ನು ಹೊಂದಿವೆ.  ವಿಶೇಷವೆಂದರೆ, ಧಾರವಾಡ ಭಾಗದ ಕನ್ನಡ ಭಾಷೆಯಲ್ಲಿ ಈ ಸಂಕಲನವಿದೆ. ಜೊತೆಗೆ ಬಯಲುಸೀಮೆಯ ಬಡತನ, ಬರಗಾಲ, ಪ್ರವಾಹ, ವಲಸೆ, ಕೂಲಿಹೆಂಗಸರನ್ನು ತಮ್ಮ ದೈಹಿಕ ಹಸಿವಿಗೆ ಬಳಸಿಕೊಳ್ಳುವ ದಲ್ಲಾಳಿಗಳು, ನಂಬಿಕೆ, ಮೂಢನಂಬಿಕೆಗಳ ಜಂಜಾಟ ಮುಂತಾದ ಗುಣಗಳನ್ನು ಇಲ್ಲಿನ ಕಥೆಗಳು ಹೊಂದಿವೆ. ನೆಲದ ಗುಣ ಕಚ್ಚಿಕೊಂಡ ಕಥೆಗಳು ಎನ್ನಬಹುದು. ಈ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಇಲ್ಲಿ ಚಿತ್ರಿಸಲಾಗಿದೆ. ಒಟ್ಟೂ ೧೩ ಕಥೆಗಳ ಗುಚ್ಛ ಈ ಸಂಕಲನ. ಪೂರ್ಣಾಹುತಿ ಮನುಷ್ಯನ ಆತ್ಮಬಲ ಜಾಗೃತಿಯಾದರೆ  ಬ್ರೇನ್ ಟ್ಯೂಮರ್‌ನ್ನೂ ಸಹ ಮೆಟ್ಟಿನಿಲ್ಲಬಹುದು ಎನ್ನುವುದನ್ನು ದಂಪತಿಯ ಅನ್ಯೋನ್ಯ ಪ್ರೇಮದ ಮೂಲಕ ನಿರೂಪಿಸಲಾಗಿದೆ. ದೇವರ ಬಗ್ಗೆ ನಂಬಿಕೆ ಇಲ್ಲದೆ ಮನುಷ್ಯ ಪ್ರಯತ್ನ ಮಾತ್ರ ನಂಬುವ ಆದರ್ಶವಾದಿ ಪತಿ, ಪತ್ನಿಯ ಕಾಯಿಲೆಯಿಂದ  ಇಂಚುಇಂಚಾಗಿ ಪಾತಾಳಕ್ಕಿಳಿದಾಗ  ಆತ್ಮಬ...
Image
 ವೈಚಾರಿಕತೆಯ ಮಾಲ್  ‘ವಿಚಾರ ಮಂಜರಿ’  ‘ವಿಚಾರ ಮಂಜರಿ’ ಈ ಕೃತಿಯು ಹೆಸರೇ ಹೇಳುವಂತೆ ವ್ಯಕ್ತಿ, ವಿಚಾರ ಮತ್ತು ಸಂಸ್ಕೃತಿಗಳ ಕುರಿತಾದ ಲೇಖನಗಳ ಸಂಕಲನವಾಗಿದೆ. ನಂಜನಗೂಡಿನ ಬರಹಗಾರ್ತಿ ವರಲಕ್ಷ್ಮಿ ಮಂಜುನಾಥ ಇದರ ಲೇಖಕರು. ಈ ಗ್ರಂಥದಲ್ಲಿ  ಬೋಧ-ಪ್ರಚೋದಕ ವಿಚಾರಗಳಿಂದ ಕೂಡಿದ ಪುಣ್ಯ ಪುರುಷರನ್ನು, ದಾಶನಿಕರನ್ನು, ಆಧುನಿಕ ವ್ಯಕ್ತಿಗಳನ್ನು ಪರಿಚಯಿಸುವ ೭೪ ಲೇಖನಗಳಿವೆ. ಜೊತೆಗೆ ಕೆಲವೊಂದು ಹಬ್ಬ ಆಚರಣೆಗಳ ಮಹತ್ವ, ಸಾಹಿತ್ಯ ಕೃತಿಗಳ ಬಗ್ಗೆಯೂ ಚರ್ಚಿಸಿದ್ದಾರೆ.  ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಲೇಖನಗಳ ಗುಚ್ಚ ಇದರಲ್ಲಿದೆ. ಶ್ರೀರಾಮ, ಸೀತಾಮಾತೆ, ಶ್ರೀಕೃಷ್ಣ, ವಾಲ್ಮೀಕಿ, ಶಂಕರಾಚಾರ್ಯರು, ಬುದ್ಧ, ಮಹಾವೀರ, ಕಬೀರದಾಸ್, ರಾಮಕೃಷ್ಣ ಪರಮಹಂಸ, ವಿವೇಕಾನಂದರು, ಬಸವಣ್ಣ, ಮಹಮ್ಮದ್ ಪೈಗಂಬರ್, ರಮಣ ಮಹರ್ಷಿ, ಲಾಲ್ ಬಹದ್ದೂರ್ ಶಾಸ್ತ್ರಿ, ಸಾವಿತ್ರಿಬಾಯಿ ಫುಲೆ, ಮಹಾದೇವಿ ವರ್ಮ, ಅಬ್ದುಲ್ ಕಲಾಂ, ಆರ್ ಕೆ ಲಕ್ಷ್ಮಣ್ ಮುಂತಾದ ವ್ಯಕ್ತಿಗಳ ಕುರಿತು ಸಾಕಷ್ಟು ಮಾಹಿತಿಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.  ಅದೇ ರೀತಿ ಹಬ್ಬಗಳ ಬಗ್ಗೆಯೂ ಮಾಹಿತಿಯನ್ನು ವಿವರವಾಗಿ ದಾಖಲಿಸಿದ್ದಾರೆ. ಹೆಸರೇ ಹೇಳುವಂತೆ ಇದು ವಿಚಾರಗಳ ಗುಚ್ಚವಾಗಿದೆ. ಇದು ಯಾವುದೇ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಪುಸ್ತಕವಲ್ಲ. ಹಲವಾರು ವಿಚಾರಗಳ ಗೊಂಚಲಿದೆ. ಇದು ಒಂದು ರೀತಿಯಲ್ಲಿ ವೈಚಾರಿಕತೆಯ ಮಾಲ್ ಎಂದು ಪುಸ್ತಕಕ್ಕೆ ಶುಭ ಹಾ...
Image
    ಸಂಬಂಧದ ತಂತು ಜ್ಞಾಪಿಸುವ   ‘ಬುವಿಯ ಬಂಧ’  ‘ಬುವಿಯ ಬಂಧ’  ಶೀರ್ಷಿಕೆಯೇ  ಧ್ವನಿಸುವಂತೆ ಈ ಕವನ ಸಂಕಲನದ ಹೆಚ್ಚಿನ ಕವಿತೆಗಳು ಪ್ರಕೃತಿ-ಮನುಷ್ಯರ ನಡುವಿನ ವೈವಿಧ್ಯಪೂರ್ಣವಾದ ಭಾವ ಸಂಬಂಧವನ್ನು ಹೊಂದಿರುವಂತದ್ದು.  ಉಪನ್ಯಾಸಕಿ ಶುಭಲಕ್ಷ್ಮಿ ನಾಯಕ ಇದರ ಕರ್ತೃ. ೪೭ ಕವಿತೆಗಳ ಈ ಗುಚ್ಛದಲ್ಲಿ, ಸಂಬಂಧದ ತಂತು ಹರಿದರೆ ವಿನಾಶ ಖಂಡಿತ  ಎನ್ನುವ ಸಂದೇಶವಿದೆ. ಕವನ ಸಂಕಲನದ ಎಲ್ಲಾ ಕವಿತೆಗಳಲ್ಲಿಯೂ ಭಾವ ಬಂಧನದ ಕಾರಣಗಳ ಶೋಧನೆ ಇದೆ. ಇಲ್ಲಿನ ಕವಿತೆಗಳು ಧ್ವನಿಗೂಡುತ್ತವೆ. ಪ್ರಕೃತಿ ಸಂರಕ್ಷಿಸುವ ಬಗ್ಗೆ  ಇದೆ. ಪ್ರಕೃತಿಗೆ ಮಾತ್ರ ಈ ಕವನ ಸಂಕಲನ ಮೀಸಲಾಗಿಲ್ಲ, ಪ್ರಕೃತಿ ಪ್ರೀತಿಯಲ್ಲಿ ಬದುಕಿಗೆ ಗಾಳಿ ಬೆಳಕಿನಷ್ಟೇ ಅನ್ನ, ಆಹಾರ, ಅಕ್ಷರ ಕಲಿಕೆ ಮುಖ್ಯ ಸಂಗತಿಗಳಾಗಿವೆ. ನಾಡಿನ ಬದುಕು, ಸಂಸ್ಕೃತಿಯನ್ನು ಕಟ್ಟಿಕೊಡುವ ತಾಯ್ನುಡಿ ಮತ್ತು ತಾಯ್ನೆಲದ ಅಭಿಮಾನದ ಕುರಿತಾಗಿಯೂ ಇದರಲ್ಲಿ ಸಾಕಷ್ಟು ಕವನಗಳಿವೆ. ಜಾನಪದ ಸಮೃದ್ಧಿಯ ಕವಿತೆ ಕೂಡ ಇದೆ.  ಒಟ್ಟು ಕವಿತೆಗಳಲ್ಲಿ ಸಂಕೀರ್ಣವಾದ ವಿಷಯವೈವಿಧ್ಯವಿದೆ. ತನ್ನ ಸುತ್ತಲ ಬದುಕಿನಲ್ಲಿ ಹಿತವಾದುದೆಲ್ಲವನ್ನು ಮೆಚ್ಚಿಕೊಂಡಾಡಿದ್ದಾರೆ. ಸಿಟು, ಶಾಂತಿ, ಪ್ರಕೃತಿಯ ಮುನಿಸು, ನೋವು- ನಲಿವು, ಸಿರಿತನ- ಬಡತನ, ಸಾಂಕ್ರಾಮಿಕ ಕಾಯಿಲೆ ಎಲ್ಲದರ ಕುರಿತಾಗಿಯೂ ಅವರು ಮಾತನಾಡಿದ್ದಾರೆ.  ಕೃತಿಯ ಹೆಸರಿನ ಕವನ ‘ಬುವಿಯ ಬಂಧ’ ಇದರಲ್ಲಿ ಸೂರ...
Image
 ಭಾವಸ್ಪರ್ಶ ಕೊಡುವ  ‘ಬಾಣದ ಹೊಳೆಯ ದಂಡೆಯ ಮೇಲೆ’  ಬಾಣದ ಹೊಳೆಯ ದಂಡೆಯ ಮೇಲೆ ಈ ಕೃತಿ ಸಾಮಾಜಿಕ ಮತ್ತು ಪೌರಾಣಿಕ ಕಥೆಗಳಿಂದ ಸಮ್ಮಿಳಿತವಾಗಿದೆ. ಎರಡೂ ಬಗೆಯ ಕಥೆಗಳು ಮೆಚ್ಚುಗೆಯಾಗುತ್ತವೆ. ಶಿಕ್ಷಣ ಇಲಾಖೆಯಲ್ಲಿ ಬೋಧಕೇತರ ಹುದ್ದೆಯಲ್ಲಿ ಕೆಲಸ ಮಾಡಿದ ಐ ಎಂ ರಾಮಚಂದ್ರ ಈ ಸಂಕಲನದ  ಲೇಖಕರು. ಮೂಲತಃ ಸಾಗರದವರಾದರೂ ಹಾಲಿ ದಾವಣಗೆರೆ ವಾಸಿಯಾದ ಇವರು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ತಮ್ಮ ಕಥೆಗಳನ್ನು ಸಂಗ್ರಹಿಸಿ ಈ ಕೃತಿಯನ್ನು ಹೊರತಂದಿದ್ದಾರೆ. ಯಕ್ಷಗಾನ ಆಸಕ್ತರಾದ ರಾಮಚಂದ್ರ, ಪೌರಾಣಿಕ ಕಥೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಗ್ರಾಮೀಣ ಭಾಗದ ಜನರ, ಹಳ್ಳಿಯ  ಬಗ್ಗೆಯೂ ಇದರಲ್ಲಿದೆ. ಪುರಾಣದ ಒಂದೊಂದು ಅಪರೂಪದ ಪಾತ್ರಗಳನ್ನು ಹೆಕ್ಕಿ ಅವರ ತುಮುಲ, ತೊಯ್ದಾಟವನ್ನು, ವ್ಯಕ್ತಿತ್ವವನ್ನು  ಚಿತ್ರಿಸುತ್ತಾ ಓದುಗರ ಮುಂದಿಟ್ಟ್ಟಿದ್ದಾರೆ. ಇವು ನಮ್ಮನ್ನು ಸೆಳೆಯುತ್ತವೆ. ಇಂತಹ ಸೃಜನಶೀಲತೆಯ ಮೂಲಕ ಪಾತ್ರಕ್ಕೆ ಎಲ್ಲೂ ಚ್ಯುತಿ ಬಾರದಂತೆ ನೋಡಿಕೊಂಡಿದ್ದಲ್ಲದೆ, ಸರಳ ಶೈಲಿ, ಸನ್ನಿವೇಶಕ್ಕೆ ತಕ್ಕ ಭಾಷೆ, ನಿಧಾನದ ನಡೆ  ಮೂಲಕ ಕಥೆ ಸಾಗುವಂತೆ ಮಾಡಿ ಕೊನೆಯಲ್ಲಿ ಆಕಸ್ಮಿಕ ತಿರುವು ಕೊಡುತ್ತಾರೆ. ಈ ಮೂಲಕ ಕಥೆ ನಮ್ಮ ಒಡಲಾಳಕ್ಕಿಳಿಯುಂತೆ ಮಾಡಿದ್ದಾರೆ. ಸಾಮಾಜಿಕ ಕತೆಗಳಲ್ಲೀ  ಕೆಲವು ತಲೆಮಾರಿನಿಂದ ಬಂದ, ಬದುಕಿನ ಪಯಣದಲ್ಲಿ ಶಿಥಿಲವಾಗುತ್ತಿರುವ ಮೌಲ್ಯಗಳನ್ನು ವಿಷಾದದಿಂದ ಅಭಿವ್ಯಕ್ತಿಸಿದ್ದಾರ...
Image
 ನತೃದೃಷ್ಟೆಯರ ಬಾಳಿಗೆ ಬೆಳಕಾಗಬಲ್ಲ  ‘ಮಹಾಶ್ವೇತೆ’   ‘ಮಹಾಶ್ವೇತೆ’  ಇದು ವಿವಿಧ ಕಾರಣಗಳಿಂದ ಸಮಾಜದ ತಿರಸ್ಕಾರದಲ್ಲಿ ಮೌನವಾಗಿ ಬೇಯುತ್ತಿರುವ ಸಾವಿರಾರು ನತೃದೃಷ್ಟೆಯರ ಬಾಳಿಗೆ ಬೆಳಕಾಗಬಲ್ಲ  ಕಾದಂಬರಿ. ಇದರ ಲೇಖಕರು ಸುಧಾಮೂರ್ತಿ. ಅನುಪಮಾ ಎಂಬ ಕಥಾನಾಯಕಿ ಬಿಳಿ ತೊನ್ನು (ಪಾಂಡು ರೋಗ) ದಿಂದ ಕುಟುಂಬದಲ್ಲಿ, ಊರಿನಲ್ಲಿ, ಸಮಾಜದಲ್ಲಿ ಅನುಭವಿಸಿದ ಬವಣೆ, ಸಂಕಷ, ಸಂಕಷ್ಟಕ್ಕೆ ಬಾರದ ಗಂಡ ನಂತರ ಪಶ್ಚ್ಚಾತ್ತಾಪ ಪಟ್ಟು ಮತ್ತೆ ಸೇರಲು ಬಂದರೂ ಅದನ್ನು ನಿರಾಕರಿಸಿ ಆಕೆ ಸ್ವತಂತ್ರ ಬದುಕು ರೂಪಿಸಿಕೊಂಡಿದ್ದು, ತನ್ನಲ್ಲಿದ್ದ ನಾಟಕ ಕಲೆಯಲ್ಲೇ ಹೆಚ್ಚಿನದಾಗಿ ತೊಡಗಿಸಿಕೊಂಡು, ನೋವು ಮರೆತಿದ್ದು,, ಬಾಳು ಮುನ್ನಡೆಸಿದ್ದು  ಕಾದಂಬರಿಯ ಕಥಾ ವಸ್ತು.     ಆಕಸ್ಮಿಕವಾಗಿ ಬಿಳಿ ತೊನ್ನು ಅಥವಾ ಬಿಳುಪು ರೋಗಕ್ಕೆ ತುತ್ತಾದ ವಿದ್ಯೆ, ರೂಪ, ಗುಣದಲ್ಲಿ ಮೇಲುಗೈ ಸಾಧಿಸಿದ್ದ  ಮಹಿಳೆ ಅನುಪಮಾ ಸಾಮಾಜಿಕ ನಿಂದನೆಗಳಿಂದ ಬೇಸತ್ತು, ಊರಿನಲ್ಲಿ ಯಾರೂ ತನ್ನ  ನೆರವಿಗೆ ಬಾರದಿದ್ದುದರಿಂದ ಮತ್ತು ತನ್ನಿಂದಾಗಿ ಕುಟುಂಬದಲ್ಲೂ ಶುಭ ಕಾರ್ಯ ನಿಂತುಹೋಗುತ್ತಿದ್ದುದರಿಂದ  ಊರು ಬಿಟ್ಟು ಮುಂಬೈ ಮಹಾನಗರಕ್ಕೆ ಹೋಗಿ ಬದುಕು ಕಟ್ಟಿಕೊಳ್ಳುತ್ತಾಳೆ.  ರೋಗ ಅಂಟಿದೆ ಎಂದು ಹೆದರಿ ಆತ್ಮಹತ್ಯೆಯ ಕ್ಷಣದವರೆಗೆ ಹೋದರೂ,  ತಾನೇಕೆ ಸಾಯಬೇಕೆಂದು ನಿರ್ಧರಿಸಿ ಎದುರಾಗಿರುವ ಸವಾಲನ್ನು ಎದುರ...
Image
 ಒಬ್ಬರಲ್ಲಿ ಮತ್ತೊಬ್ಬರ ಬಿಂಬ ಹುಡುಕುವ  ‘ಚೂರು ಬಿಂಬ ’ ರಂಗಭೂಮಿ ನಿರ್ದೇಶನ ಮತ್ತು ಡ್ರಮಟರ್ಜಿ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಉತ್ತರ ಕರ್ನಾಟಕ ಮೂಲದ ದಾದಾಪೀರ್ ಜೈಮನ್ ಪ್ರಸ್ತುತ ‘ಚೂರು ಬಿಂಬ’ ಕಥಾ ಸಂಕಲನದ ಲೇಖಕರು. ಇಲ್ಲಿನ ಎಲ್ಲಾ ೧೧ ಕಥೆಗಳಲ್ಲಿ ಜೊತೆಗೆ ಎಲ್ಲಾ ಪಾತ್ರಗಳಲ್ಲಿ ಚೂರುಬಿಂಬ ಕಾಣಿಸುತ್ತಾರೆ. ಒಬ್ಬರಲ್ಲಿ ಮತ್ತೊಬ್ಬರ ಬಿಂಬವನ್ನು ಹುಡುಕುವ ಕಥೆಗಳಿವು. ಮನುಷ್ಯ ತನ್ನನ್ನು ತಾನು ಬಿಂಬದಲ್ಲಿ ಕಂಡುಕೊಳ್ಳುವ, ತನ್ನಂತೆಯೇ ಇರುವ ಮನುಷ್ಯರಲ್ಲಿ  ತನ್ನ ಬಿಂಬವನ್ನೇ ಕಂಡರೂ ವ್ಯತಾಸ ಕಂಡುಬರುವ  ಅಂಶಗಳು ಇದರಲ್ಲಿವೆ. ಅಂದರೆ ಬಿಂಬದ ಚೂರನ್ನು ಹೊಳೆಯಿಸುವ ಪಾತ್ರಗಳು ಈ ಸಂಕಲನದಲ್ಲಿ ಬರುತ್ತವೆ. ಮನುಷ್ಯ ಮತ್ತು ಬಿಂಬದ ತಾಕಲಾಟವೇ ಕಥೆಗಳ ಸಾರಾಂಶ.  ಬದಲಾಗುತ್ತಲೇ ಇರುವ ಭಾರತದ ಭಾವನಾತ್ಮಕ ಮತ್ತು ಮಹತ್ವಪೂರ್ಣ ಚಿತ್ರಣ ಇಲ್ಲಿನ ಕಥೆಗಳಲ್ಲಿದೆ. ಪ್ರೀತಿ, ಲೈಂಗಿಕತೆ,  ಸ್ನೇಹ ಮತ್ತು ಲಿಂಗತ್ವದ ಕಥೆಗಳು ಇಲ್ಲಿವೆ. ಜೊತೆಗೆ ಇವುಗಳ ಕ್ರೌರ್ಯ ಮತ್ತು ಮೃದುತ್ವವನ್ನೂ ತೆರೆದಿಟ್ಟಿದ್ದಾರೆ. ಯುವಜನರ ಸಂಕೀರ್ಣತೆಯನ್ನು  ಅನ್ವೇಷಿಸುವ ಕಥಾ ಸಂಕಲನ ಇದಾಗಿದೆ. ಕಥೆಗಳ ಭಾಷೆ, ತಂತ್ರ ಚೆನ್ನಾಗಿ ಬೆಸೆದುಕೊಂಡಿದ್ದರಿಂದ ಕಥೆಗಳು ಸುಂದರವಾಗಿ ಕುಸುರಿಗೊಂಡಿವೆ.    ಅಪ್ಪನ ಕತ್ತರಿ  ಅಪ್ಪನ ಮೇಲೆ ದ್ವೇಷವಿದ್ದ ಕಥಾನಾಯಕ ಅಪ್ಪನನ್ನು ಕಂಡರೆ ರೋಷದಿಂದ ಉಕ್ಕುತ್ತಿದ್ದ. ಅಪ್ಪ ತನ...