Posts

Showing posts from September, 2026
 ಮನುಷ್ಯ ಪ್ರೇಮ, ಕರುಣೆ ಸಾರುವ “ಮಹಾಮಾಯಿ”        ‘ಮಹಾಮಾಯಿ’ ಇದು ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಅವರ ಹೆಸರಾಂತ ನಾಟಕ. ಸುಮಾರು ೫ಕ್ಕೂ ಹೆಚ್ಚು ಬಾರಿ ಮುದ್ರಣ ಕಂಡಿದೆ. ಕಂಬಾರರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯವರು. ಬೆಂಗಳೂರು ವಿಶ್ವ್ವವಿದ್ಯಾಲಯದಲ್ಲಿ ಎರಡು ದಶಕಗಳ ಕಾಲ ಕನ್ನಡ ಪ್ರಾಧ್ಯಾಕರಾದವರು. ಇದಕ್ಕೂ ಮೊದಲು ಕರ್ನಾಟಕ ವಿಶ್ವವ್ವಿದ್ಯಾಲಯ ಧಾರವಾಡದಲ್ಲಿ ಮತ್ತು ಅಮೆರಿಕದ ಚಿಕಾಗೋ ವಿಶ್ವವ್ವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಬಳಿಕ ಹಂಪಿ ಕನ್ನಡ ವಿವಿಯ ಪ್ರಪ್ರಥಮ ಕುಲಪತಿಯಾದ ಕೀರ್ತಿ ಇವರದ್ದು. ಜಾನದ ವಿಶ್ವಕೋಶ ಎಂಬ ಬಿರುದಾಂಕಿತರು. ಮನುಷ್ಯ ಪ್ರೇಮದ ಜಯಕ್ಕೆ ಸಾಕ್ಷಿಯಾಗುವ ಈ ಪ್ರೀತಿ, ಕೊನೆಗೆ ಸಾವಿನ ದೇವತೆಯ ಅಹಂಕಾರವನ್ನು ಸೋಲಿಸುತ್ತದೆ. ಸಾವು ಮತ್ತು ವಿಧಿ ಎಂಬುದು ಪ್ರಕೃತಿಯ ಅನಿವಾರ್ಯ ನಿಯಮ. ಆದರೆ ಮನುಷ್ಯನ ಕರುಣೆ ಮತ್ತು ವೈದ್ಯಕೀಯ ಜ್ಞಾನವು ವಿಧಿಯನ್ನೇ ಎದುರಿಸಿ ನಿಲ್ಲಬಲ್ಲದು ಎಂಬುದನ್ನು ನಾಟಕ ತೋರಿಸುತ್ತದೆ.  ದ್ವೇಷ, ಸಾವು ಮತ್ತು ಅಹಂಕಾರಕ್ಕಿಂತ "ಮನುಷ್ಯ ಪ್ರೇಮ" ಮತ್ತು "ಕರುಣೆ" ಶ್ರೇಷ್ಠವಾದದ್ದು ಎಂಬುದೇ ಕಂಬಾರರ ಈ ನಾಟಕದ ಮುಖ್ಯ ಆಶಯವಾಗಿದೆ. ಮೃತ್ಯುದೇವತೆಯ ಮೇಲೆ ಮನುಷ್ಯ ವಿಜಯ ಸಾಧಿಸುವ ಕತೆ ಇದು. ಪೂರ್ವನಿಗದಿತವಾದ ಸಾವು ಮುಟ್ಟದ ಹಾಗೆ ರಾಜಕುಮಾರಿಯನ್ನು ಕಾಪಾಡುವುದು, ವೈದ್ಯನಾದ ಸಂಜೀವನ ಪ್ರೇಮವನ್ನು ಇದು ಚಿತ್...
 ಮಕ್ಕಳ ಮನಸ್ಸನ್ನು ಆಕರ್ಷಿಸುವ  ‘ಚಿನ್ನಿ ದಾಂಡು ಬುಗುರಿ’  ಪತ್ರಕರ್ತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಯುವ ಪ್ರತಿಭೆ  ಟಿ ಹೆಚ್ ಸಂತೋಷ್‌ಕುಮಾರ್ ಭದ್ರಾವತಿ  ವಿಶೇಷವಾಗಿ ಪುಟಾಣಿ ಮಕ್ಕಳ ಮನಸನ್ನರಿತು ಬರೆದ ಕವನ ಸಂಕಲನ ಇದಾಗಿದೆ. ಮಕ್ಕಳ ಸ್ಮರಣಶಕ್ತಿ ಮತ್ತು ಗ್ರಹಣ ಶಕ್ತಿಗೆ ಪೂರಕವಾಗುವಂತಹ ತಮ್ಮ ಸುತ್ತಮುತ್ತಲಿನ ಅನೇಕ ವಿಚಾರಗಳಿಗೆ ಕವನದ ರೂಪ ಕೊಟ್ಟು ಮಕ್ಕಳ ಮನಸ್ಸನ್ನು ಆಕರ್ಷಿಸುವ ‘ಚಿನ್ನಿದಾಂಡು ಬುಗುರಿ’  ಎಂಬ ಹೆಸರನ್ನು ಇಟ್ಟಿದ್ದಾರೆ.  ಇಲ್ಲಿನ ಕವನಗಳು ಒಂದಲ್ಲ ಒಂದು ಕಾರಣದಿಂದಾಗಿ ಮಕ್ಕಳ ಮನಸ್ಸಿಗೆ ಮುದ ನೀಡುವ ಗುಣಗಳನ್ನು ಹೊಂದಿವೆ, ಅಷ್ಟೇ ಚೇತೋಹಾರಿಯಾಗಿವೆ. ಮಕ್ಕಳ ಮನರಂಜಿಸುವುದರ ಜೊತೆಗೆ ಆಧುನಿಕ ಜಗತ್ತಿನಲ್ಲಿ ಎಳೆವಯಸ್ಸಿನಲ್ಲೂ ಒತ್ತಡದ ಬದುಕನ್ನು ನಿರ್ವಹಿಸುತ್ತಿರುವ ಅದೇ ಮಕ್ಕಳು ಭವಿಷ್ಯದಲ್ಲಿ ವ್ಯಕ್ತಿತ್ವ ಮತ್ತು ಗುರಿಯನ್ನು ರೂಪಿಸಿಕೊಳ್ಳಲು ಇರಬೇಕಾದ ಗುಣಗಳ ಬಗ್ಗೆಯೂ ಇಲ್ಲಿನ ಕವನಗಳು ಮಾಹಿತಿ ನೀಡುತ್ತವೆ. ಇಲ್ಲಿ ಕವಿ ಒಂದು ಕಾಲದ ಸಂಸ್ಕೃತಿ, ಪರಂಪರೆಯಲ್ಲಿ ನಂಬಿಕೆ ಹೊಂದಿದವರು. ಆ ನಂಬಿಕೆಯಿಂದಾಗಿ ಕಳೆದುಹೋಗುತ್ತಿರುವ ಸಾಂಪ್ರದಾಯಿಕ ಕಲೆ, ಕ್ರೀಡೆಗಳ ಬಗ್ಗೆ ಸೆಳೆತ ಹೊಂದಿದವರು. ಅದಕ್ಕೆ ಈ ಸಂಕಲನಕ್ಕೆ ಮಕ್ಕಳ ಪ್ರೀತಿಯ ಆಟದ ಹೆಸರಿಟಿದ್ದಾರೆ. ಇದು ಒಂದು ಮಕ್ಕಳ ಕ್ರೀಡೆಯ ಹೆಸರು.  ಆಧುನಿಕ ಜಗತ್ತಿನಲ್ಲಿ ನ...
  ನಿಜಾಮರ ವಂಶದ ನೂರಾರು ರೋಚಕ ವಿವರದ ‘ಏಳು  ರೊಟ್ಟಿಗಳು ’ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಕೆ. ಎನ್. ಗಣೇಶಯ್ಯ ಅವರ ಕಿರು ಕಾದಂಬರಿ ಏಳು ರೊಟ್ಟಿಗಳು. ಇದರಲ್ಲಿ ಹೈದರಾಬಾದ್ ನಿಜಾಮರ ವಂಶದ ನೂರಾರು ರೋಚಕ ವಿವರಗಳು, ವಂಶ ರಹಸ್ಯಗಳು, ರಾಜಕೀಯ ಸಿದ್ಧಾಂತಗಳು ಅಡಕವಾಗಿವೆ. ಏಳು ರೊಟ್ಟಿಗಳು ಎಂದರೇನು ಎಂಬ ಮಾಹಿತಿ ಇದೆ.  ಹೈದರಾಬಾದನ್ನು ಆಳಿದ ನಿಜಾಮ ಸ್ವಾತಂತ್ರ್ಯಾನಂತರ ಭಾರತದಿಂದ ಲೋಡುಗಟ್ಟಲೆ ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ವಸ್ತುಗಳೊಂದಿಗೆ ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಾನೆ. ಆದರೆ ಭಾರತ ಸರ್ಕಾರದ ಬಿಗಿ ನಿಯಂತ್ರಣದಿಂದಾಗಿ ಅದು ಸಾಧ್ಯವಾಗುವುದಿಲ್ಲ. ಆಗ ಆಭರಣಗಳನ್ನು ಮತ್ತು ಸಂಪತ್ತುಗಳನ್ನು ಗುಹೆ ಒಂದರಲ್ಲಿ ಅಡಗಿಸಿಟ್ಟಿದ್ದು ನಂತರ ಅದು ಯಾರಿಗೂ ಸಿಗದೆ ಭೂಗತವಾದ ಕಥೆ ಇದರಲ್ಲಿದೆ.  ಇಲ್ಲಿನ ಕಥೆಗಳಿಗೆ ಸಾಕ್ಷಾಧಾರವಾಗಿ ಚಿತ್ರ, ನಕ್ಷೆ ಇದೆ. ಕುತೂಹಲಕಾರಿ ನಿರೂಪಣೆಯೊಂದಿಗೆ ಸಾಗುವ ಕಾದಂಬರಿಯಲ್ಲಿ ದೀನ್‌ದಾರ್ ಅಂಜುಮನ್ ಎನ್ನುವ ಸಂಘಟನೆಯ ಟೆರರಿಸ್ಟ್‌ಗಳು (ಗಡ್ಡ ಬಿಟ್ಟು, ಮೀಸೆ ಇಲ್ಲದೆ, ಟರ್ಬನ್ ಒಳಗೆ ಕೂದಲು ಸುತ್ತಿದ ಸನ್ಯಾಸಿಗಳು ಮತ್ತು ತ್ರಿಶೂಲ ಉಪಯೋಗಿಸುವವರು) ಬರುತ್ತಾರೆ. ಇವರನ್ನು ಸೆರೆ ಹಿಡಿಯುವುದು ಮತ್ತು ನಿಜಾಮರ ಸಂಪತ್ತನ್ನು ಪತ್ತೆ ಮಾಡಲು ಒಬ್ಬ ಸಂಶೋಧಕಿಯ ಜೊತೆ ಪೊಲೀಸರು ತೆರಳುವುದು ಕಾದಂಬರಿಯಲ್ಲಿ ಅನಾವರಣಗೊಂಡಿದೆ.  ಕಾದಂಬರಿಗೆ ಮ...