Posts

Showing posts from May, 2026
Image
 ಹೊಸತನದ ಮೆರುಗಿನ ‘ಪಾನಿಪುರಿ ಮತ್ತು ಇತರ ಕಥೆಗಳು’ ‘ಪಾನಿಪುರಿ ಮತ್ತು ಇತರ ಕಥೆಗಳು’ ಇದರ ಕರ್ತೃ ಭಾಗ್ಯರೇಖಾ ದೇಶಪಾಂಡೆ. ಈ ಸಂಕಲನದಲ್ಲಿ ವಿಶೇಷವಾಗಿ ಮಹಿಳೆಯ ಸಂಕಟವನ್ನು ಬಿಂಬಿಸುವ ಕಥೆಗಳಿವೆ. ಸಮಾಜದಲ್ಲಿ ಹೆಣ್ಣು ಯಾವ್ಯಾವ ರೀತಿಯಲ್ಲಿ  ನೋವನ್ನು ಅನುಭವಿಸುತ್ತಾಳೆ, ಹೆಣ್ಣುನ ಶೋಷಣೆ ಯಾವ ರೀತಿಯಲ್ಲಿ ಆಗುತ್ತಿದೆ ಎನ್ನುವುದಕ್ಕೆ ಇಲ್ಲಿನ ಕಥೆಗಳು ಸಾಕ್ಷಿಯಾಗಿವೆ. ಇಲ್ಲಿನ ಕಥೆಗಳ ನಿರೂಪಣಾ ಶೈಲಿ, ತಂತ್ರಗಾರಿಕೆ ವಿಶಿಷ್ಟವಾಗಿದೆ.  ಸಂಬಂಧಗಳ ಸಂಕೀರ್ಣತೆಯ ಸ್ಪಷ್ಟ ಅವಲೊಕನವಿದೆ.  ಒಟ್ಟು ೧೧ ಕಥೆಗಳು ಇದರಲ್ಲಿದ್ದು ಒಂದು ಮತ್ತೊಂದಕ್ಕಿಂತ ವಿಭಿನ್ನವಾಗಿವೆ. ವ್ಯಕ್ತಿಯಿಂದ ವ್ಯಕ್ತಿಗೆ  ಬದುಕಿನ ದೃಷ್ಟಿಕೋನ ಬದಲಾಗುವುದು, ಯಾಂತ್ರಿಕತೆಯ ನಡುವೆ ಅನುಭವಿಸುವ ಜೀವಂತಿಕೆ,  ಮೂಢನಂಬಿಕೆಯಲ್ಲಿ ಮುಳುಗಿರುವವರ ಮಾನಸಿಕತೆ,  ವಿಧವೆಯ ಅಂತರಾಳದ ಇಂಗಿತ... ಹೀಗೆ  ಎಲ್ಲ ಕಥೆಗಳು ಕೊನೆಯವರೆಗೂ ಕುತೂಹಲ ಉಳಿಸುತ್ತವೆ.  ಕಥೆಗಳತ್ತ ಗಮನಿಸುವುದಾರೆ ಸ್ವಾಮಿಗಳ ದರ್ಶನ:  . ಸಮಾಜದಲ್ಲಿ ಮೌಢ್ಯ ಹೇಗೆಲ್ಲ ನೆಲೆಸಿದೆ ಎನ್ನುವುದಕ್ಕೆ ಈ ಕಥೆ.  ಊರಿನ ರಾಮನ ದೇವಸ್ಥಾನಕ್ಕೆ ಮಠದ ಸ್ವಾಮಿಗಳು ಚಾತುರ್ಮಾಸಕ್ಕೆ ಬಂದಾಗ ಅಲ್ಲಿ ವಿಧವೆ ಮತ್ತು ರಾಮನ ಭಕ್ತಳಾದ ತುಳಸಕ್ಕನಿಗೆ ಸ್ವಾಮಿಗಳ ದರ್ಶನಕ್ಕೆ ಅವಕಾಶ ಸಿಗದೆ,  ಆಕೆಯನ್ನು ಇತರೇ ಭಕ್ತರು ತಳ್ಳಿ, ಬೀಳಿಸಿ ಮಠಾಧೀಶರ ಭೇಟಿಗೆ ಅವಕಾಶ...
Image
   ‘ಕಿಷ್ಕಿಂಧಾಯಣ’  ಪ್ರೊ. ಲಕ್ಷ್ಮಣ್ ಕೌಂಟೆ ಇವರ ಕಾದಂಬರಿ  ‘ಕಿಷ್ಕಿಂಧಾಯಣ’ ಕಲಬುರಗಿಯ ಪ್ರೊ. ಲಕ್ಷ್ಮಣ್ ಕೌಂಟೆ ಇವರ ೪೧೬ ಪುಟಗಳ ಬೃಹತ್ ಕೃತಿ. ವಾಲಿ, ಸುಗ್ರೀವ, ರಾಮ, ರಾವಣರಿಗೆ ಸಂಬಂಧಿಸಿದ ಕಾದಂಬರಿ ರೂಪದ ಕಥಾನಕ. ಇದರಲ್ಲಿ ಅಯೋಧ್ಯಾ ಕಾಂಡವಿಲ್ಲ. ಕಿಷ್ಕಿಂಧೆ ಮತ್ತು ಲಂಕೆಗೆ ಸಂಬಂಧಿಸಿದ ಕಥಾ ವಸ್ತು ಮಾತ್ರ ಇದೆ. ಮನುಷ್ಯ- ಮನುಷ್ಯರ ನಡುವಿನ ಮನಸ್ಸುಗಳ, ವೈಮನಸ್ಸುಗಳ, ಸ್ನೇಹ, ವಿಶ್ವ್ವಾಸ, ದ್ವೇಷ, ವಿದ್ವೇಷಗಳ ಕಥೆಯಾಗಿದೆ. ಮಾನವ ತುಡಿತಗಳ ಒಳನೋಟದ ಮನಸ್ಸುಗಳ ತೊಳಲಾಟದ, ಇದೆ. ನಾಗರಿಕ- ಅನಾಗರಿಕ, ಆರ್ಯ- ಅನಾರ್ಯರ ನಡುವಿನ ಸಂಘರ್ಷದ ಕಥೆ ಇದು.  ಕಿಷ್ಕಿಂಧೆ, ಪಂಪಾ ಸರೋವರ, ಋಷ್ಯಮೂಕ ಪರ್ವತ, ದಂಡಕಾರಣ್ಯ, ಪಂಚವಟಿ, ಋಷಿಮನಿಗಳ ಪರ್ಣಕುಟೀರ, ಲಂಕೆಯಲ್ಲಿನ ಕಥೆ ಇದು.  ವಾನರರು ಮತ್ತು ರಾಕ್ಷಸರ ಮದ್ಯೆಯ ಸಂಘರ್ಷ, ವಾನರರು ಮತ್ತು ರಾವಣನ ಲಂಕಾ ಸೈನ್ಯದ ನಡುವಿನ ಸಮರ, ದಂಡಕಾರಣ್ಯದಲ್ಲಿದ್ದ ಋಷಿಗಳ ಹೋಮ- ಹವನಕ್ಕೆ, ತಪಸ್ಸಿಗೆ ಸದಾ ಭಂಗವುಂಟು ಮಾಡುತ್ತಿದ್ದ ಅನಾರ್‍ಯರ ಹತ್ಯೆ, ಇದಕ್ಕಾಗಿಯೇ ಆ ಆರಣ್ಯಕ್ಕೆ ರಾಮ- ಲಕ್ಷ್ಮಣರು ಬಂದಂತೆ ಎನಿಸುವುದು, ಸಹೋದರರಾದ ವಾಲಿ- ಸುಗ್ರೀವರ ಕದನ, ತನ್ನ ತಂಗಿ ಶೂರ್ಪನಖಿಗೆ ಅವಮಾನ ಮಾಡಿದ್ದಕ್ಕೆ ಪ್ರತಿಯಾಗಿ ರಾವಣ ಸೀತೆಯನ್ನು ಹೊತ್ತೊಯ್ಯುವುದು, ಇದನ್ನರಿತ ರಾಮ-;ಲಕ್ಷ್ಮಣ ಲಂಕೆಗೆ ದಾಳಿ ಇಟ್ಟು ನಾಶಪಡಿಸುವುದು, ಸುಗ್ರೀವ ಮತ್ತು ವಿಭೀಷಣ ರಾಮ- ಲಕ್ಷ್ಮಣರಲ...
Image
  ಮಣ್ಣಿನೊಂದಿಗಿನ ಭಾವನಾತ್ಮಕ ಸಂಬಂಧ ತೋರುವ  ‘ಮರಳಿ ಮಣ್ಣಿಗೆ’   ಇದು ೧೯೪೧ರಲ್ಲಿ ಶಿವರಾಮ ಕಾರಂತರು ಬರೆದ ಕಾದಂಬರಿ. ಇದರ ನಂತರ ೧೦ ಬಾರಿ ಮರುಮುದ್ರಣವನ್ನು ಕಂಡಿದೆ ಎಂದರೆ ಇದು ಎಷ್ಟರ ಮಟ್ಟಿಗೆ ಓದುಗ ವಲಯವನ್ನು ಸೆಳೆದಿದೆ ಎನ್ನುವುದನ್ನು ಊಹಿಸಬಹುದು. ಹೆತ್ತವರಿಗೆ ಮಕ್ಕಳ ಮೇಲೆ ಇರುವ ಪ್ರೀತಿ, ಅದನ್ನು ಮಕ್ಕಳು ದುರುಪಯೋಗಿಸಿಕೊಳ್ಳುವುದು, ಶಿಕ್ಷಣ ಕಲಿಯುವಾಗಲೇ ಕೆಟ್ಟ ಚಟಗಳಿಗೆ ಬಲಿಯಾಗಿ ಮನೆಯಿಂದ ಬರುವ ಹಣವನ್ನು ಅದಕ್ಕೆ ಬಸವುದು, ಶಿಕ್ಷಣ ಕಲಿಯದೆ, ಉದ್ಯೋಗಕ್ಕಾಗಿ ಎಷ್ಟು ಊರು ಅಲೆದಾಡಿದರೂ ಅದು ಸಿಗದೇ ಇದ್ದಾಗ  ಪಾಲಕರ ಆಶಯ, ಭರವಸೆಗಳು ನಾಶವಾಗುವುದು, ಅವರು ಪಡುವ ಯಾತನೆ, ಮಕ್ಕಳು ಜವಾಬ್ದಾರಿ ಮರೆತು, ಇನ್ನೊಬ್ಬರ ಮಾತಿಗೆ ಬಲಿಯಾಗಿ ಮನೆಯನ್ನೇ ಮರೆಯುವುದು, ಆಸ್ತಿ ಒತ್ತೆ ಇಡುವುದು, ಜೂಜಿಗೆ ಶರಣಾಗುವುದರಿಂದ  ಅದರ ಪರಿಣಾಮ ಅವರ ಕುಟುಂಬ ಹಾಗೂ ಮುಂದಿನ ಪೀಳಿಗೆಯ ಮೇಲೆ ಹೇಗಾಗುತ್ತದೆ ಎನ್ನುವುದು ಈ ಕಾದಂಬರಿಯಿಂದ ಮನದಟ್ಟಾಗುತ್ತದೆ.  ‘ಮರಳಿ ಮಣ್ಣಿಗೆ’ ಹೆಸರೇ ಹೇಳುವಂತೆ  ಎಷ್ಟೇ ಹೋರಾಟ ಮಾಡಿದರೂ, ಊರು ಬಿಟ್ಟರೂ,  ಜೀವನದ ಸುಖ, ಸಂತೋಷ, ನೋವು, ಅವಮಾನ, ಸಾಧನೆ, ದ್ವೇಷ, ಅಸೂಯೆ ಎಲ್ಲವನ್ನು ಅನುಭವಿಸಿ ಕೊನೆಯಲ್ಲಿ  ಮಣ್ಣಿಗೆ ಬಂದು ಸೇರಬೇಕು ಎನ್ನುವುದನ್ನು ಇದು ಸಾರುತ್ತದೆ.  ಮೂರು ತಲೆಮಾರಿನ ಬದುಕು ಇದರಲ್ಲಿದೆ. ಮೊದಲನೆಯದು ಪಿತ್ರಾರ್ಜಿತ ಜಮೀನು ಸಾಗು...
Image
   ನೆನಪುUಳನ್ನೇ ಹೊದ್ದು ಮಲಗಿದ ‘ಕರಿಮುಗಿಲ ಕಾಡಿನಲ್ಲಿ’   ‘ಕರಿಮುಗಿಲ ಕಾಡಿನಲ್ಲಿ’   ಇದು ಕಥೆಗಾರ ಜಯರಾಮಾಚಾರಿ ಅವರ ಮೊಟ್ಟಮೊದಲ ಕೃತಿ. ಇದರಲ್ಲಿ ಅವರ ಅನುಭವಗಳೇ ಕಥೆಗಳಾಗಿವೆ.  ಅವರ ನೆನಪುಗಳೇ ಹೊದ್ದು ಮಲಗಿವೆ. ಅತ್ಯುತ್ತಮ ಕಥೆಗಳು ಇದರಲ್ಲಿವೆ.   ನಿರ್ಧಾರ  ಪ್ರೀತಿಸಿ ಮದುವೆಯಾದವಳು ತನ್ನ ಕುಟುಂಬವನ್ನು ಸುಖದಲ್ಲಿಡದೆ, ತನ್ನ ಗಂಡನನ್ನೂ ಪ್ರೀತಿಸದೆ, ತಾನೂ ಸುಖವಾಗಿರದೆ, ಪರರಿಗೂ ಸುಖವಾಗಿರಲು ಬಿಡದೆ ಕುಟುಂಬವನ್ನು ಹಿಂಸಿಸುವಂತಹ ಕಥೆ ಇದು. ಆದರೆ ಆಕೆಯ ಮೇಲಿರುವ ಪ್ರೀತಿ ಗಂಡನಿಗೆ ಮಂಜುಗಡ್ಡೆಯಾಗಿ ಹೊಸ ಜೀವನಕ್ಕೆ ಬುದ್ಧಿ ಮಾತು ಹೇಳುತ್ತದೆ. ಆಕೆಯ ಗಂಡ ಮನೆ ಬಿಟ್ಟು ಹೋಗುತ್ತಾನೆ. ಇದಾದ ಆರು ತಿಂಗಳಿಗೆ ಆತನ ತಂಗಿ ಆಕೆಯ ಗಂಡ ಎಲ್ಲರನ್ನೂ ಬಿಟ್ಟು ಹೋದ. ಅತ್ತಿಗೆ ಅಶ್ವಿನಿ ಜೊತೆ ಇದ್ದಾನೆಯೋ, ಏನಾದರೂ ಆಗಲಿ, ನಳೆ ಇಲ್ಲಿಯೇ ಇರಲಿ ಎಂದು ಯೋಚಿಸುತ್ತಾಳೆ. ಆತ ಖಿನ್ನತೆಯಿಂದ ಬಳಲಿದ ವ್ಯಕ್ತಿ. ಯಾವ ರೀತಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ, ಅದು ಸರಿಯೋ ತಪ್ಪೋ ಎನ್ನುವುದು ಈ ಕಥೆಯಲ್ಲಿದೆ.  ಅವಳು   ಮೈನೆರೆದ ಹುಡುಗಿ ಪ್ರೀತಿಯ ಬಲೆಗೆ ಬಿದ್ದು ಐ ಲವ್ ಯೂ ಎನ್ನುವಷ್ಟರ ಮಟ್ಟಿಗೆ ತನ್ನ ಕಾಮವನ್ನು ಯುವಕನ ಜೊತೆ ಹುಚ್ಚಾಗಿಸಿಕೊಳ್ಳುತ್ತಾಳೆ.  ಆತನ ಜೊತೆ ಸರಿಯಾಗಿ ವರ್ತಿಸದೆ ಸಿಟ್ಟಾಗುತ್ತ ಎರಡೇ ತಿಂಗಳಲ್ಲಿ ಇನ್ನೊಬ್ಬ ಯುವಕನನ್ನು ಸೇರಿಕೊಂಡು...
Image
  ಕಾವ್ಯ ಸೌಷ್ಠವ ಕಟ್ಟಿಕೊಡುವ   ‘ಜಿ. ಎಸ್. ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿಯರ  ಕಾವ್ಯ ಮೀಮಾಂಸೆ ಮತ್ತು ತೌಲನಿಕ ವಿವೇಚನೆ’ ‘ಡಾ. ಜಿ. ಎಸ್. ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿಯರ  ಕಾವ್ಯ ಮೀಮಾಂಸೆ ಮತ್ತು ತೌಲನಿಕ ವಿವೇಚನೆ’ ಈ ಕೃತಿಯನ್ನು ರಚಿಸಿದವರು ಭದ್ರಾವತಿಯ  ಸರ್ ಎಂ ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ  ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಜಿ. ಎಸ್. ಅಶೋಕ್ ಅವರು.  ಸಂಶೋಧನಾತ್ಮಕವಾಗಿ ರಚಿಸಿರುವ ಈ ಕೃತಿಯಲ್ಲಿ ಗಂಭೀರವಾದ ಅಧ್ಯಯನವಿದೆ. ತುಂಬಾ ಒಳನೋಟವಿದೆ. ಇದನ್ನು ಆಕರ ಗ್ರಂಥವಾಗಿ  ಬಳಸಬಹುದು. ಸಾಹಿತ್ಯಾಧ್ಯಯನಕ್ಕೆ ಇಂತಹ ಕೃತಿ ಸಿಗುವುದು ವಿರಳ. ಸರಳ ಶೈಲಿಯಲ್ಲಿ ತಿಳಿಯಾದ ವಿವರಣೆ ಇಲ್ಲಿನ ವಿಶೇಷ.   ಸಮಕಾಲೀನ ಸಾಹಿತ್ಯದ ಶ್ರೇಷ್ಠ ಸೃಜನಶೀಲ ಬರಹಗಾರರಾದ  ಡಾ ಜಿ. ಎಸ್. ಶಿವರುದ್ರಪ್ಪ  ಮತ್ತು ಚೆನ್ನವೀರ ಕಣವಿಯರ ಆಧುನಿಕ ಕನ್ನಡ ಸಾಹಿತ್ಯದ  ಕ್ರಿಯಾಶೀಲ ಕವಿಗಳಾಗಿದ್ದಾರೆ. ಇಬ್ಬರೂ ಕವಿಗಳ ಕಾವ್ಯಗಳಲ್ಲಿನ ತೌಲನಿಕ ವಿಮರ್ಶೆ ಮತ್ತು ವಿಶ್ಲೇಷಣೆ ಇಲ್ಲಿದೆ. ತೌಲನಿಕ ವಿಮರ್ಶೆ ಎಂದರೆ ಸಮಾನ ಕಾಲಘಟ್ಟದ, ಸಮಾನ ಮನೋಧರ್ಮದ ಕವಿಗಳನ್ನು ತುಲನಾತ್ಮಕವಾಗಿ ಗಮನಿಸುವುದು. ಕನ್ನಡದಲ್ಲಿ ಇಂತಹ ವಿಮರ್ಶೆಗಳು ತೀರಾ ಕಡಿಮೆ. ಪ್ರತಿ ಕವಿಯ ವೈಶಿಷ್ಟ್ಯವನ್ನು ಅದೇ ವೈಶಿಷ್ಟ್ಯವಿರುವ, ಭಿನ್ನವಾದ ಹಿನ್ನೆಲೆ ಹೊಂದಿರುವ ಇನ್ನೊಂದು ವ್ಯಕ್ತಿಗೆ ತೌ...
Image
    ಜೀವನಕ್ಕೆ ದಾರಿದೀಪ ‘ಅರಸು ಅನುಸರಿಸು’    ‘ಅರಸು ಅನುಸರಿಸು’ ಇದು ಉದಾತ್ತ ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ಅಪಾರವಾದ ಜ್ಞಾನ, ಅನುಭವ, ಚಿಂತನೆಗಳಿಂದ ಶ್ರೀಮಂತವಾದ ಕೃತಿಯಾಗಿದೆ.  ಇದರ ಲೇಖಕರು ಉಡುಪಿ ಜಿಲ್ಲೆಯ ಐರೋಡಿ ಸದಾಶಿವ ಅಲ್ಸೆಯವರು. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿ  ಅಪಾರ ಅನುಭವದೊಂದಿಗೆ ಇಲ್ಲಿ ಅನುಭವದ ರಸಧಾರೆಯನ್ನು ಹರಿಸಿದ್ದಾರೆ. ಆತಂಕ, ಭಯ, ಲೋಭ, ಮತ್ಸರ, ದ್ವೇಷ, ಸ್ವಾರ್ಥ ಮೊದಲಾದ ನಕಾರಾತ್ಮಕ ಗುಣಗಳನ್ನು ತೊರೆದು ಸಹಕಾರ, ಸರಳತೆ, ಸತ್ಯ, ನ್ಯಾಯ, ನೀತಿ, ಧರ್ಮ ಮೊದಲಾದ ಸಕಾರಾತ್ಮಕ ಗುಣಗಳನ್ನು ರೂಢಿಸಿಕೊಂಡು ಸಮೃದ್ಧವಾದ ಸಾರ್ಥಕ ಜೀವನವನ್ನು ನಡೆಸಲು ಈ ಕೃತಿ ಪ್ರೇರಣೆ ನೀಡುತ್ತದೆ. ಸುಮರು ೩೦ ಲೇಖನಗಳು ಇದರಲ್ಲಿವೆ.   ಸರಳವಾದ ಭಾಷೆ, ಸಮರ್ಪಕವಾದ ವಿವರಣೆ, ವಿಷಯಗಳನ್ನು ಪುಷ್ಟಿಕರಿಸಲು ಪೂರಕವಾದ ಕಥೆಗಳು, ಶ್ರೇಷ್ಠ ಸಾಧಕರ ಜೀವನದ ಪ್ರಮುಖ ಘಟನಾವಳಿಗಳು ಹಾಗೂ ಹಿತಮಿತವಾದ ಹಾಸ್ಯ ಭರಿತವಾದ ತುಣುಕುಗಳು ನಮ್ಮನ್ನು ಮುಂದಕ್ಕೆ ಓದಿಸಿಕೊಂಡು ಹೋಗುವಂತೆ ಮಾಡುತ್ತವೆ. ಕೃತಿಯಲ್ಲಿ ಎಲ್ಲಾ ಚಿಂತನೆಗಳ ಮಹತ್ವವನ್ನು ವಿಷದಪಡಿಸುವ ಲೇಖಕರ ಶೈಲಿ ನಿಜಕ್ಕೂ ಅನುಪಮವಾದದ್ದು. ಮೌಲ್ಯಾಧಾರಿತ, ಅಮೂಲ್ಯ ಲೇಖನಗಳು ಇದರಲ್ಲಿವೆ. ಕೃತಿಯಲ್ಲಿ ಸುಮಾರು ಮೂವತ್ತು ಕಿರುಲೇಖನಗಳಿವೆ ಇವೆಲ್ಲವೂ ನಮ್ಮ ಜ್ಞಾನಭಂಡಾರಕ್ಕೆ ಅತ್ಯಂತ ಅವಶ್ಯಕವಾಗಿವೆ ಮತ್ತು ಹೊಸ ಚಿಂತ...
Image
 ಮೋಡದ ತೆರೆ ಮತ್ತು ಆನಂದ ಭೈರವಿ’  ‘ಮೋಡದ ತೆರೆ ಮತ್ತು ಆನಂದ ಭೈರವಿ’ ಇದು ಎರಡು ಪ್ರತ್ಯೇಕ ಕಾದಂಬರಿಗಳ ಸಂಗಮ. ಇದರ ಲೇಖಕಿ ಚಿತ್ರ್ರಲೇಖಾ ಅವರು.  ಇವೆರಡೂ ಕೌಟುಂಬಿಕ ಕಾದಂಬರಿ. ಹೆಣ್ಣಿನ-ಗಂಡಿನ  ಪ್ರೀತಿ, ಅದರಿಂದ ಅನುಭವಿಸುವ ಸುಖ- ಕಷ್ಟ, ಮದುವೆಯಾದ ಮೇಲೆ ಗಂಡನ ಮನೆಯವರು ಕಾಣುವ ರೀತಿ, ವರ್ಣಭೇಧ ಮಾಡುವುದು, ಪ್ರೀತಿಸಿ ಕೈಕೊಟಾಗ್ಟ ಹೆಣ್ಣಿನ ಸ್ಥಿತಿ... ಹೀಗೆ ಹೆಣ್ಣೊಬ್ಬಳ ಜೀವನ ಸಂಕಷ್ಟವನ್ನೇ ಈ ಎರಡೂ ಕಾದಂಬರಿ ಹೊಂದಿದೆ. ಸರಳವಾಗಿ, ಅಷ್ಟೇ ಸೌಂದರ್ಯದಿಂದ ಇಲ್ಲಿ ಕಥೆಗಳನ್ನು ಲೇಖಕಿ ಹೆಣೆದಿದ್ದಾರೆ. ಓದುಗರಿಗೆ ಆಪ್ತವಾಗುವುದರ ಜೊತೆಗೆ ಕೆಲವು ಸಂದೇಶಗಳನ್ನು ಕಾದಂಬರಿ ನೀಡುವಲ್ಲಿ ಯಶಸ್ವಿಯಾಗಿದೆ.       ಮೋಡದ ತೆರೆ ಅನುಕಂಪದಿಂದ ಕೈಹಿಡಿದ ಎರಡನೆಯ ಹೆಂಡತಿಯನ್ನು  ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು, ಅವಳಿಗೆ ಕೊಟ್ಟ ಬಾಳು ಒಂದು ತರಹದ ಭಿಕ್ಷೆ ಎನ್ನುತ್ತಾ ಅವಳನ್ನು ಆದರಿಸದೆ ಇರುವುದು, ಅವರಲ್ಲಿರುವ ಸೂಕ್ಷ್ಮ ಮನಸ್ಸನ್ನು ಅರಿಯದೆ ಅವಳೊಂದಿಗೆ ಹೊಂದಿಕೊಂಡು ನಡೆಯದೆ ದೂರ ಇಡುವುದು, ಮಾನಸಿಕವಾಗಿ ಆಕೆ ಖಿನ್ನತೆಗೊಳಗಾಗುವಂತೆ ಮಾಡುವ ಅವಳ ಮಗಳೇ ಅವಳನ್ನು ಪ್ರೀತಿಸಿ, ಮುಂದೆ ನಿಂತು ಚಿಕಿತ್ಸೆ ಕೊಡಿಸಿ, ಮತ್ತೆ ಗುಣಮುಖಳನ್ನಾಗಿಸುವುದು, ನಂತರ ತಂದೆ ಮತ್ತೆ ಎರಡನೆಯ ಪತ್ನಿಯೊಂದಿಗೆ ಒಂದಾಗುವುದು ಈ ಕಾದಂಬರಿಯ ತಿರುಳು.   ಮೊದಲ ಪತ್ನಿ ಕಲ್ಪನಾಳ ಅನಿರಿಕ್ಷಿತ ಸಾ...
Image
  ‘ಸುದರ್ಶನ ಹಾಸ್ಯ ಚಕ್ರಾಯಣ’ ‘ಸುದರ್ಶನ ಹಾಸ್ಯ ಚಕ್ರಾಯಣ’ ಹೆಸರೇ ಹೇಳುವಂತೆ  ಹಾಸ್ಯ ಬರೆಹಗಾರ ಸುದರ್ಶನ ಅವರ ಸಮಗ್ರ ನಗೆಲೇಖನಗಳ ಸಂಚಯ. ಪುಟಪುಟಗಳಲ್ಲಿಯೂ ವಿಡಂಬನೆಯ ಹಾಸ್ಯಚಕ್ರವೇ ಇದರಲ್ಲಿದೆ. ಸಮಾಜದ ಡೊಂಕುಗಳನ್ನು ಅನಾಯಾಸವಾಗಿ ಇದರಲ್ಲಿ ಬರೆದಿದ್ದಾರೆ. ಇಲ್ಲಿರುವ ಚಟಾಕಿಗಳು ಬಹುಹಿಂದೆಯೇ ವಿವಿಧ ಪತ್ರಿಕೆ ಮತ್ತು ಫೇಸ್‌ಬುಕ್‌ನಲ್ಲಿ  ಪ್ರಕಟವಾದವು. ಇಲ್ಲಿ ಲೇಖಕರು ವ್ಯಕ್ತಿ ಮತ್ತು ವಸ್ತು, ಸ್ಥಳಗಳನ್ನು  ತಮ್ಮ ಹಾಸ್ಯಕ್ಕೆ ಬಹು ಚೆನ್ನಾಗಿ ಬಳಸಿಕೊಂಡಿದ್ದಾರೆ.   ನಗುವಿನ ಜೊತೆಗೆ ಜೀವನಶೈಲಿ, ಗೆಳೆಯರೊಂದಿಗಿನ ರಜಾ ಮೋಜು, ಹೆಂಡತಿಯ ಮುನಿಸು, ಮಕ್ಕಳ ಪೆದ್ದುತನ, ಜೀವನ, ಮೊದಲಾದವುಗಳ ಬಗ್ಗೆಯೂ ಬರೆದಿದ್ದಾರೆ. ಇವು ಮನಸ್ಸಿಗೆ ಮುದ ನೀಡುವಂತಹವು. ಬೇಸರವಾದಾಗ ಆಗಾಗ ಇಂತಹ ನಾಲ್ಕಾರು ಬರೆಹಗಳನ್ನು ಓದಿದರೆ ಅದನ್ನು ಮೆಲುಕು ಹಾಕುತ್ತ ದಿನ ಕಳೆಯಬಹುದು. ಇಲ್ಲಿರುವ ಬರೆಹಗಳೆಲ್ಲ ದಿನನಿತ್ಯದ ಅನುಭವಗಳೇ ಆಗಿವೆ. ಆದ್ದರಿಂದ ಎಂತಹವರೂ ಕೂಡ ನಗಲೇಬೇಕು. ನಮ್ಮ ಸುತ್ತಮುತ್ತ ನಡೆಯುವ ವಿಷಯಗಳಲ್ಲೇ ಹಾಸ್ಯವನ್ನು ಹುಡುಕಿ  ತಾವೂ ನಕ್ಕು, ಅವರನ್ನು ನಗಿಸುವ ಕೆಲಸ ವಿಶೇಷವಾದುದು. ಅದು ಸುದರ್ಶನ್ ಅವರಿಗೆ ಸಿದ್ಧಿಸಿತ್ತು.  ವಿವಿಧ ಇಲಾಖೆಗಳ ವಿಚಾರ, ರಾಜಕೀಯ,  ಚಲನಚಿತ್ರ, ಶೋಷಣೆ,  ಢೋಂಗಿ ಜನರು, ಗೋಲ್‌ಮಾಲ್ ಸಹಿತ ಸಾಮಾಜಿಕ ಸಮಸ್ಯೆಗಳ ಬಗ್ಗೆ ನಗೆಯ ಬೆಳಕನ್ನು ಕೃತಿಯಲ್ಲಿ ಚೆಲ್ಲಿರುವುದ...
Image
 ನಿರಂತರ ಕಾಡುವ ಘಟನೆಗಳ  ‘ಸೆಕೆಂಡ್ ವೈಫ್’  ಪತ್ರಕರ್ತ, ಬರಹಗಾರ ವಸಂತ್ ಗಿಳಿಯಾರ್  ಅವರ ಕೃತಿ ‘ಸೆಕೆಂಡ್ ವೈಫ್’. ಲೇಖಕರು ವರದಿಗಾರಾಗಿ ಕೆಲಸ ಮಾಡುವಾಗ ಎದುರುಗೊಂಡ ವಿಷಯಗಳೇ ಈ ಕಥೆಗಳು. ಇದರಲ್ಲಿ ಕೆಲವು ವರದಿಯಂತೆ ಇವೆ. ಅದರೆ ಅದರಲ್ಲಿ ಘಟನೆ ಇದೆ. ಕೆಲವು ನಿಜಕ್ಕೂ ನಡೆದ ಘಟನೆಗಳು. ಕೆಲವು ಅಚ್ಚರಿಯ ಬರಹಗಳು, ಇನ್ನೂ ಕೆಲವು ದೇವರು, ಮಾಟ,  ಭೂತಗಳ ಪವಾಡದ ಬಗ್ಗೆ, ಇನ್ನೊಬ್ಬರ ಮಾತು ಕೇಳಿ ದಾರಿತಪ್ಪುವ ಯುವಕ, ಕಾಲೇಜಿನಲ್ಲಿ ಬರವಣಿಗೆ ಮೂಲಕ ಪ್ರೀತಿ ಹುಟ್ಟುವುದು ಕುರಿತಾಗಿದೆ. ಒಟ್ಟೂ ೧೬ ಕಿರುಕತೆಗಳ ಸಂಕಲನ ಇದು. ವಿಭಿನ್ನ ವಿಷಯಗಳು, ಸುಂದರ ನಿರೂಪಣೆ, ಸತ್ವಯುತ, ಸರಳ ಭಾಷೆ, ಅಲ್ಲಲ್ಲಿ  ಗಾದೆಮಾತು, ಹಿತನುಡಿ, ಕಚಗುಳಿ ಇಡುವ ಮಾತುಗಳು ಓದಿಗೆ ಸಹಾಯಕವಾಗಿವೆ.   ನಮ್ಮ ಸುತ್ತಲು ನಡೆಯುವ ಘಟನೆಗಳು ಇನ್ನೊಬ್ಬರನ್ನು ತಲುಪಬೇಕು, ನಮಗೆ ಹತ್ತಿರವಿದ್ದರೂ ಎಷ್ಟೋ ಸ್ಥಳಗಳ ಕುರಿತು, ನಡೆಯುತ್ತಿರುವ ಘಟನೆಗಳ ಬಗ್ಗೆ ಅರಿವಿರುವುದಿಲ್ಲ. ಅದನ್ನೆಲ್ಲ ಪತ್ರಕರ್ತನಾದವನು ಗ್ರಹಿಸಿ ಕಂಡು, ಅನುಭವಿಸಿ ಹೇಗೆ ಲೋಕಕ್ಕೆ ತೆರೆದಿಡಬಹುದೆನ್ನುವುದಕ್ಕೆ ಈ  ಕೃತಿ ಒಂದು ಉದಾಹರಣೆ. ಇದನ್ನು ಕತೆ ಎಂದಾದರೂ, ಘಟನೆಗಳು ಎಂದಾದರೂ ಹೇಳಬಹುದು. ಒಟ್ಟಿನಲ್ಲಿ, ನಮ್ಮನ್ನು ಆವರಿಸುವ ಮತ್ತು ಓದಿಸಿಕೊಂಡು ಹೋಗುವ  ಮಲೆನಾಡು, ಕರಾವಳಿ ಪರಿಸರದ ಶಕ್ತಿಯುತ ವಿಷಯಗಳೇ ಇಲ್ಲಿವೆ. ಇಡೀ ಕೃತಿ ಓದಿದಾಗ ಇದರ...
Image
 ಅಪೂರ್ವ ಮಾಹಿತಿಯ   ‘ಪ್ರಸಿದ್ಧ ಸ್ತ್ರೀವಾದಿಗಳ ಸಂಕ್ಷಿಪ್ತ ಪರಿಚಯ ’   ‘ಪ್ರಸಿದ್ಧ ಸ್ತ್ರೀವಾದಿಗಳ ಸಂಕ್ಷಿಪ್ತ ಪರಿಚಯ’ ಇದು ಹೆಸರೇ ಹೇಳುವಂತೆ  ಸ್ತ್ರೀವಾದಿಗಳ ಕುರಿತ ಕೃತಿ ಪುರುಷ- ಮಹಿಳಾ  ತಾರತಮ್ಯ ನಮ್ಮ ಸಮಾಜದ ಒಂದು ದುರಂತ. ಮಹಿಳೆಯನ್ನು ಇಂದಿಗೂ ಭೋಗದ ವಸ್ತು ಎಂದು ಪರಿಗಣಿಸುತ್ತಿರುವುದು ಮತ್ತೊಂದು ದುರಂತ. ಈ ಹಿನ್ನೆಲೆಯಲ್ಲಿ ಮೊದಲಿನಿಂದಲೂ ಮಹಿಳಾಪರ ಹೋರಾಟಗಳು ವಿದೇಶದಲ್ಲಿ ನಡೆದು ಬಂದ ಇತಿಹಾಸವಿದೆ. ಅಂತಹ ಪ್ರಸಿದ್ಧ ಸ್ತ್ರೀವಾದಿಗಳನ್ನು ಪರಿಚಯಿಸುವ ಕೃತಿ ಇದು. ಕಲಬುರ್ಗಿಯ ಸ್ತ್ರೀವಾದಿ, ಚಿಂತಕಿ, ಬರಗಾರ್ತಿ, ಶ್ರೀದೇವಿ ಎಲ್. ರಾಠೋಡ್ ಈ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ದೇಶ- ವಿದೇಶದ ೨೭ ಪ್ರಸಿದ್ಧ  ಸ್ತ್ರೀವಾದಿಗಳು ನಡೆಸಿದ ಹೋರಾಟ, ಅವರು ಬರೆದ ಕೃತಿಗಳು, ಅವರು ಅನುಭವಿಸಿದ ಕಷ್ಟ -ನಷ್ಟಗಳನ್ನು ತುಂಬಾ ಅಧ್ಯಯನ ಮಾಡಿ  ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. sಸ್ತೀವಾದಿ ಚಳವಳಿ ಪಾಶ್ಚಾತ್ಯದಲ್ಲಿ ಮತ್ತು ಭಾರತದಲ್ಲಿ ನಡೆದುಬಂದಿದ್ದು, ಅದಕ್ಕೆ ಚಳವಳಿ ರೂಪ ಕೊಟ್ಟವರು, ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ನೆಲದಲ್ಲಿ  ಅದನ್ನು ೧೮ನೆಯ ಶತಮಾನದಲ್ಲೇ ಆರಂಭಿಸಿದವರು ಹಲವರು. ಮಹಿಳೆ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಪುರುಷನ ಅಧೀನದಲ್ಲಿ ನಡೆದು ಬಂದಿದ್ದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಮಹಿಳೆ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾಳೆ....
Image
 ಮಕ್ಕಳ ಮನಸೆಳೆಯುವ  ‘ಗುಡುಗುಡು ಗುಮ್ಮಟ ದೇವರು’  ಪ್ರಸ್ತುತ ಕೃತಿ ‘ಗುಡುಗುಡು ಗುಮ್ಮಟ ದೇವರು’ ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಪ್ರಪ್ರಥಮ ಮಕ್ಕಳ ಕವನ ಸಂಕಲನವಾಗಿದೆ. ದಿವಂಗತ ಪಂಜೆ ಮಂಗೇಶ್ ರಾವ್ ಅವರ ಗುಡುಗುಡು ಗುಮ್ಮಟ ದೇವರು ಎಂಬ ಮಕ್ಕಳ ಕವನ ಬಹಳ ಪ್ರಸಿದ್ಧವಾದುದು. ಭಾರದ್ವಾಜ ಅವರ ಕವನ ಸಂಕಲನ ನೋಡಿದಾಕ್ಷಣ ಪಂಜೆಯವರ ಕವನವೇ ನೆನೆಪಿಗೆ ಬರುತ್ತದೆ.  ಈ ಸಂಕಲನದಲ್ಲಿ  ಜನಪದ ಲಯ, ಆಳವಾದ , ಅರ್ಥಗರ್ಭಿತ ಆಲೋಚನೆ ಇದೆ. ಲಯಬದ್ಧ ಬರವಣಿಗೆ, ಲಾಲಿತ್ಯ, ಸಂಗೀತದ ಮಾಧುರ್ಯವಿದೆ. ಇಲ್ಲಿನ ಹಾಡುಗಳು ಛಂದಸ್ಸಿನಿಂದ ಕೂಡಿವೆ. ಪ್ರತಿ ಶಬ್ದವು ನಿರಾಡಂಬರವಾಗಿ, ಸಮಯೋಚಿತವಾಗಿ, ಅರ್ಥಪೂರ್ಣವಾಗಿ ಬಳಸಲ್ಪಟ್ಟಿದೆ. ತಿಳಿಹಾಸ್ಯದಲ್ಲಿ ಮಕ್ಕಳಿಗೆ ಅರ್ಥವಾಗುವಂತೆ, ಅತಿ ಸರಳ  ಭಾಷೆಯಲ್ಲಿ, ಹಿತಕರವಾಗಿ, ಅಯಾಚಿತ, ವಿಶಿಷ್ಟ ಶೈಲಿಯಲ್ಲಿ  ರಚಿಸಲ್ಪಟ್ಟಿದೆ.  ಜಿ ಪಿ ರಾಜರತ್ನಂ ಅವರ ಕವನಗಳಂತೆ ಇವೂ  ಸಹ ಅತ್ಯಂತ ಜನಪ್ರಿಯ ಕವನಗಳಾಗಿವೆ. ಇಲ್ಲಿನ ಹಾಡುಗಳು ನೀತಿ ಬೋಧಕ, ಕಥಾ ಬೋಧಕ, ಜೊತೆಗೆ ರಂಜಕವೂ ಆಗಿವೆ. ಇವುಗಳನ್ನು ರಾಗದಲ್ಲಿ ಹಾಡಲು ಬಳಸಿಕೊಳ್ಳಬಹುದು ಎನ್ನುವಂತಿದೆ. ಈ ಸಂಕಲನದಲ್ಲಿ ಮಕ್ಕಳು ಇಷ್ಟಪಡುವ ವಿವಿಧ ವಿಷಯಗಳು ಇವೆ. ಮಕ್ಕಳ ನೆಚ್ಚಿನ ಗುಡಾಣ ಹೊಟ್ಟೆಯ ಗಣಪಣ್ಣ, ಗುಡುಗುಡುಗುಮ್ಮಟ ದೇವರು, ಪರಿಸರ, ದೀಪಾವಳಿ, ಮೊಬೈಲು, ಒಗಟುಗಳು, ಮಾವಿನಕಾಯಿ, ಸೈಕಲ್ ಸವಾರಿ, ಮಳೆ, ...
Image
 ಮಹಿಳೆಯರಿಗಿರುವ ತೊಡರು ಸರಿಸುವ ಸೊಡರು ‘ಹರಿವ ತೊರೆಗೆ ನೂರು ತೊಡರು’  ಮೂಡಬಿದ್ರೆಯ  ಉಪನ್ಯಾಸಕಿ ಸುಲತಾ ವಿದ್ಯಾಧರ  ಸಂಪಾದಿಸಿದ ಮಹಿಳಾ ವೈಚಾರಿಕ ಲೇಖನಗಳ ಸಂಕಲನ  ‘ಹರಿವ ತೊರೆಗೆ ನೂರು ತೊಡರು. ಇದರಲ್ಲಿ ಸುಮಾರು ೨೦ ಲೇಖಕಿಯರಿಂದ ಬರೆಯಿಸಿದ ಲೇಖನಗಳಿವೆ. ಸಾಂಪ್ರದಾಯಿಕ ಒಲವುಗಳಿಗಿಂತಲೂ ಅವಳ ಭಿನ್ನ ಅಭಿವ್ಯಕ್ತಿ, ಸಾಮರ್ಥ್ಯದ ಬಗೆಗಿನ ಚರ್ಚೆ ಹೆಚ್ಚು ಪ್ರಸ್ತುತ ವಾಗುತ್ತಿರುವಾಗ ಸಮಕಾಲೀನ ತಲ್ಲಣಗಳಿಗೆ ಅವಳು ಹೇಗೆ ಮುಖಾಮುಖಿಯಾಗುತ್ತಿದ್ದಾಳೆ, ಅವಳ ಅರಿವು, ತಳಮಳ ಯಾವ ರೀತಿ ಉತ್ತರವನ್ನು ನೀಡುತ್ತಿದೆ, ನಿಜವಾಗಿಯೂ ಆಕೆ ತನ್ನ ಸಮಸ್ಯೆಗಳಿಂದ ಮುಕ್ತಳಾಗಿದ್ದಾಳೆಯೇ ಎಂಬೆಲ್ಲ  ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ.  ಈ ಕೃತಿಯಲ್ಲಿ ಸಾಹಿತ್ಯ, ಕಲೆ, ಧರ್ಮ, ರಾಜಕೀಯ, ವೈದ್ಯಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ತವಕ ತಲ್ಲಣಗಳೊಂದಿಗೆ ಅವರು ಎದುರಿಸಬೇಕಾದ ಸವಾಲುಗಳ ಕುರಿತಾಗಿಯೂ ಇದೆ. ಬಾಹ್ಯವಾಗಿ ಕಾಣುವ ಕ್ರೌರ್ಯ ಮತ್ತು ತಣ್ಣಗಿನ ಕ್ರೌರ್ಯಗಳ ಬಗೆಗಿನ ಇಲ್ಲಿನ ಲೇಖನಗಳು ಮನಮುಟ್ಟುವಂತೆ, ನಿಡುಸುಯ್ಯುವಂತೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಸಿಡಿದೇಳುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ವಿಜ್ಞಾನ-ತಂತ್ರಜ್ಞಾನದಿಂದಾಗಿ ಮಂಗಳನ ಅಂಗಳಕ್ಕೆ ಜಿಗಿದರೂ ನೆಲದ ಮೇಲೆ ಒಟ್ಟಿಗೆ ಜೀವಿಸುವ ಸಹಜೀವಿಗಳ ಬಗ್ಗೆ ಗೌರವದ ಮನೋಭಾವ ಮೂಡಿಸಲು ನಮ್ಮಿಂದ ಇನ್ನೂ ಸಾಧ್...
Image
 ಹನಿಮಳೆಯ ಮುತ್ತಂತಿರುವ  ‘ನನ್ನ ನಿನ್ನ ನಡುವೆ’  ನರೇಂದ್ರ ಕಬ್ಬಿನಾಲೆ ಇವರ ಕವನ ಸಂಕಲನ ‘ನನ್ನ ನಿನ್ನ ನಡುವೆ’. ಶೀರ್ಷಿಕೆ ಹೇಳುವಂತೆ ಈ ಕವನದಲ್ಲಿ ನಮ್ಮ-ನಿಮ್ಮ ನಡುವೆ ಇರುವ ಪ್ರಕೃತಿಯ ಸೌಂದರ್ಯ, ಸಮುದ್ರದ ಭೋರ್ಗರೆತವಿದೆ. ನದಿಯ ಚೆಲುವಿದೆ, ಗೆಳೆತನ, ಪ್ರೇಮವಿದೆ. ನಾಡು -ನುಡಿ, ತಾಯಿ,  ಬಾಳ ಸಂಗಾತಿ,  ಭಾರತ,  ಏಕಾಂತ, ಮನಸ್ಸು, ಸಂಸ್ಕಾರ... ಹೀಗೆ ಅನೇಕ ಮಗ್ಗುಲಗಳಲ್ಲಿ ಕವಿ ಇಲ್ಲಿ ೫೭ ಕವನಗಳನ್ನು ರಚಿಸಿದ್ದಾರೆ.  ಹೊಸ ಭಾವ ಹಾಗೂ ಹೊಸ ದಿಕ್ಕುಗಳನ್ನು ಇಲ್ಲಿನ ಕವನಗಳು ನಮಗೆ ತೋರಿಸುತ್ತವೆ. ಕಾವ್ಯ ಕಟ್ಟುವ ಕಲೆಯನ್ನು ಇಲ್ಲಿ ನಾವು ಕಾಣಬಹುದು. ವಿಶೇಷವಾಗಿ ಪ್ರಕೃತಿ ಸಂಬಂಧಿತ ಕವನಗಳಿಗೆ ಹೆಚ್ಚಿನ ಆದ್ಯತೆಯನ್ನು ಮಲೆನಾಡಿನವರಾದ ಕವಿ ಕೊಟ್ಟಿರುವುದನ್ನು ಕಾಣಬಹುದು. ಸುಂದರವಾದ, ಅದರ ಪ್ರೀತಿಯ ಸೊಬಗನ್ನು ಸವಿದು ಬೆಳೆದ ಕವಿ ಕೇವಲ ಪರಿಸರವನ್ನಷ್ಟೇ ಅಲ್ಲ, ಉಳಿದ ವಿಚಾರಗಳಿಗೂ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಇಲ್ಲಿನ ಎಲ್ಲಾ ಕವನಗಳು ನಮ್ಮ ಅನುಭವಕ್ಕೆ ಅನುಭಾವವಾಗಿ ಆಪ್ತವೆನಿಸುತ್ತವೆ. ಇಲ್ಲಿ ಪ್ರಕೃತಿ ಪ್ರೀತಿಯ ಜೊತೆ ಸಮಾಜ ಪ್ರೀತಿ ಇದೆ, ಬದ್ಧತೆ ಇದೆ. ಸಾಂಸಾರಿಕ ಜವಾಬ್ದಾರಿಯೂ ಇದೆ   ಸೀತಾ ನದಿಯ ಅಂಚಿನ ಊರಿನವರಾದ ಕವಿ ತನ್ನ ನೆಚ್ಚಿನ ಸೀತಾನದಿ ಕುರಿತಾಗಿಯೇ ಮೊದಲ ಕವನ ಬರೆದಿದ್ದಾರೆ.  ನದಿಯ ಹರಿವಿನ ನಾದವನ್ನು ಸಂಗೀತ ಸ್ವರಗಣಕ್ಕೆ, ಹರಿಯುವ ನೀರನ್ನು  ಓಡು...